ಕಬೀರ ಪ್ರಕಟ ದಿವಸ 2022 [Kannada] : ದಿನಾಂಕ, ಆಚರಣೆ, ಘಟನೆಗಳು, ಇತಿಹಾಸ

spot_img

ಕಬೀರ ಪ್ರಕಟ ದಿವಸ ಪರಮಾತ್ಮಕಬೀರ ಸಾಹೇಬರು ಪೃಥ್ವೀ ಮೇಲೆ ಪ್ರಕಟವಾಗಿರುವ ಸಂದರ್ಭದ ಮೇರೆಗೆ ಆಚರಿಸಲಾಗುತ್ತದೆ. ಭಗವಂತ ಕಬೀರ ಸಾಹೇಬರು ಭಾರತದ, ಉತ್ತರ ಪ್ರದೇಶದ, ಕಾಶೀಯಲ್ಲಿ ಲಹರ್‌ತಾರಾ ಸರೋವರದಲ್ಲಿ ಒಂದು ಕಮಲದ ಹೂವಿನ ಮೇಲೆ ಅವತರಿಸಿದ್ದರು. ನೀರೂ-ನೀಮಾ ಅವರನ್ನು ಅಲ್ಲಿಂದ ಎತ್ತಿಕೊಂಡು ಮನೆಗೆ ಕರೆದೊಯ್ದಿದ್ದರು, ಅಂದರೆ ಅವರ ಸಾಕು ತಂದೆ, ತಾಯಿಗಳೆನಿಸಿಕೊಂಡರು. ಲೋಕವೇದ ಕಾರಣ ಕಬೀರ ಪರಮೇಶ್ವರರನ್ನು ಇಡೀ ಪ್ರಪಂಚ ಒಬ್ಬ ನೇಕಾರ, ಕವಿ ಅಥವಾ ಸಂತನೆAದು ನಂಬುತ್ತಿತ್ತು. ಪವಿತ್ರ ವೇದಗಳು ಕೂಡಾ ಕಬೀರ ಪರಮೇಶ್ವರರ ಮಹಿಮೆಯನ್ನು ಹೇಳುತ್ತಿವೆ. ಪವಿತ್ರ ಋಗ್ವೇದ ಮಂಡಲ 9 ಸೂಕ್ತಿ 94 ಮಂತ್ರ 1 ಮತ್ತು ಮಂಡಲ 9 ಸೂಕ್ತಿ 96 ಮಂತ್ರ 17 ರಿಂದ 20 ರಲ್ಲಿ ಬರೆದಿದೆ ಏನೆಂದರೆ ಆ ಪರಮೇಶ್ವರ ಈ ಪೃಥ್ವಿ ಮೇಲೆ ಸಶರೀರವಾಗಿ ಬರುತ್ತಾರೆ. ಮತ್ತು ತನ್ನ ತತ್ವಜ್ಞಾನ ದ್ವಿಪದಿಗಳ ಮತ್ತು ಲೋಕೋಕ್ತಿಗಳ ಮೂಲಕ ಇಡೀ ಪ್ರಪಂಚಕ್ಕೆ ನೀಡುತ್ತಾರೆ. 

HindiEnglishગુજરાતીবাংলাमराठीঅসমীয়া

ಕಬೀರ ಪರಮೇಶ್ವರರ ವಾಸ್ತವಿಕ ಜೀವನಕಥೆ ಮತ್ತು ಲೀಲೆಗಳನ್ನು ತಿಳಿದುಕೊಳ್ಳಿ. ಕಬೀರರು ಈ ಪೃಥ್ವೀ ಮೇಲೆ 600 ವರ್ಷಗಳ ಮೊದಲು ಅವತರಿತರಾಗಿದ್ದರು.

Table of Contents

ಕಬೀರ ಪ್ರಕಟ ದಿವಸವನ್ನು ಏಕೆ ಆಚರಿಸಲಾಗುತ್ತದೆ?

ಕಬೀರ ಪ್ರಕಟ ದಿವಸ ಕಬೀರ ಪರಮೇಶ್ವರರ 600 ವರ್ಷಗಳ ಮೊದಲು ಕಾಶೀಯಲ್ಲಿ ಲಹರ್‌ತಾರಾ ಸರೋವರದ ಮೇಲೆ ಅವತರಿತರಾದ ಸಂದರ್ಭದ ಮೇರೆಗೆ ಆಚರಿಸಲಾಗುತ್ತದೆ. ಕಬೀರ ಪರಮೇಶ್ವರರು ಜೀವಾತ್ಮಗಳದ ನಮ್ಮೆಲ್ಲರ ಜನಕರಾಗಿದ್ದಾರೆ ಮತ್ತು ಸತ್ಯಲೋಕ ಮತ್ತು ಇಡೀ ಸೃಷ್ಟಿಯ ರಚನಾಕಾರರು ಈ ಪೃಥ್ವಿಯ (ಮೃತ್ಯು ಲೋಕದ) ಮೇಲೆ ಎಲ್ಲಾ ಜೀವಾತ್ಮಗಳಿಗೆ ತತ್ವಜ್ಞಾನ ತಿಳಿಸುವುದಕ್ಕಾಗಿ ಮತ್ತು ಮೋಕ್ಷ ಮಾರ್ಗ ತೋರಿಸುವುದಕ್ಕಾಗಿ ಮತ್ತು ನಿಜವಾದ ಭಕ್ತಿಯ ಮಾರ್ಗ ಹೇಳುವುದಕ್ಕಾಗಿ ಬಂದಿದ್ದರು, ಅದರಿಂದ ಜೀವಾತ್ಮಗಳಾದ ನಾವೆಲ್ಲರೂ ಸತ್ಯಲೋಕದ ಪ್ರಾಪ್ತಿ ಮಾಡಬಹುದು.

ಕಬೀರ ಪರಮೇಶ್ವರರು ಒಬ್ಬ ನೇಕಾರನ ರೂಪದಲ್ಲಿ ಜೀವನ ವ್ಯತಿತ ಮಾಡಿದರು ಹಾಗೂ ನಮ್ಮೆಲ್ಲರಿಗೂ ತೋರಿಸುವುದಕ್ಕಾಗಿ ಏನೆಂದರೆ ಯಾರಿಗೆ ಭಗವಂತನನ್ನು ಪಡೆಯುವುದಿದೆ, ಅವರಿಗೆ ಹಣ, ಐಶ್ವರ್ಯ ಮತ್ತು ಮೇಲ್ಜಾತಿಯ ಅವಶ್ಯಕತೆ ಇರುವುದಿಲ್ಲ. ಕಬೀರ ಪರಮೇಶ್ವರರ ಜನ್ಮವೂ ಆಗುವುದಿಲ್ಲ ಮತ್ತು ಮೃತ್ಯುವೂ ಆಗುವುದಿಲ್ಲ. ಕಬೀರ ಪರಮೇಶ್ವರರು 120 ವರ್ಷಗಳ ಲೀಲೆಗಳಲ್ಲಿ ಅವರು ಅನೇಕ ಚಮತ್ಕಾರಗಳನ್ನು ಮಾಡಿದರು ಮತ್ತು ಅವರೇ ಪೂರ್ಣ ಪರಮಾತ್ಮನಾಗಿರುವರೆಂದು ತೋರಿಸಿ ಕೊಟ್ಟರು.

ಭಗವಂತ ಕಬೀರ ಸಾಹೇಬರು ಕಾಶೀಯಲ್ಲಿ ಇರುವುದು : ಸಂಕ್ಷಿಪ್ತ ಜೀವನ ಚರಿತ್ರೆ.

ಕಬೀರ ಪರಮೇಶ್ವರರು 1398 (ವಿಕ್ರಮೀ ಸಂವತ್ಸರ 1455)ರಲ್ಲಿ ಜ್ಯೇಷ್ಠ ಮಾಸದ ಪೂರ್ಣಿಮೆಯಂದು ಲಹರ್‌ತಾರಾ ಸರೋವರದ ಮೇಲೆ ಬ್ರಹ್ಮ ಮುಹೂರ್ತದ ಸಮಯ (ಸೂರ್ಯೋದಯಕ್ಕಿಂತ 1 1/2 ಗಂಟೆ ಮೊದಲು) ಲಹರ್‌ತಾರಾ ಸರೋವರದ ಮೇಲೆ ಕಮಲದ ಹೂವಿನ ಮೇಲೆ ಒಂದು ನವಜಾತ ಶಿಶು ರೂಪದಲ್ಲಿ ಪ್ರಕಟರಾದರು. ಅಂದು ಅಷ್ಟಾನಂದ್ ಋಷಿ, ಅವರು ಪ್ರತಿನಿತ್ಯ ಈ ಸಮಯ ಸ್ನಾನ ಮಾಡಿ ತನ್ನ ಸಾಧನೆ ಮಾಡುತ್ತಿದ್ದರು, ಅವರು ಆಕಾಶದಿಂದ ಒಂದು ಗೋಳ ಬರುವುದನ್ನು ಕಂಡರು, ಅದರಿಂದ ಅವರ ಕಣ್ಣುಗಳು ಕುಕ್ಕಿದಂತಾದವು. ಕಣ್ಣುಗಳನ್ನು ಮುಚ್ಚಿದಂತೆ ಅವರು ಒಬ್ಬ ಬಾಲಕನ ರೂಪವನ್ನು ನೋಡಿದರು, ಅವರು ಮತ್ತೆ ಬಾರಿ ಕಣ್ಣುಗಳನ್ನು ತೆರೆಯುವಷ್ಟರಲ್ಲಿ ಆ ಪ್ರಕಾಶವು ಲಹರ್‌ತಾರಾ ಸರೋವರದ ಒಂದು ಮೂಲೆಯಲ್ಲಿ ಮಾಯವಾಯಿತು.

ಅಷ್ಟಾನಂದ್ ಋಷಿ ತನ್ನ ಗುರುದೇವ ಸ್ವಾಮೀ ರಾಮಾನಂದರ ಬಳಿ ಇದನ್ನು ಕೇಳಲು ಹೋದರು ಏನೆಂದರೆ ಇದೇನು ನನ್ನ ಭಕ್ತಿಯ ಉಪಲಬ್ಧಿಯೇ ಅಥವಾ ಯಾವುದಾದರೂ ಭ್ರಮೆಯೇ? ಸ್ವಾಮಿ ರಾಮಾನಂದರು ಹೇಳಿದರು ಏನೆಂದರೆ ಇದು ನಿಮ್ಮ ಭಕ್ತಿಯ ಉಪಲಬ್ಧಿಯು ಅಲ್ಲ, ನಿಮ್ಮ ಭ್ರಮೆಯೂ ಅಲ್ಲ. ಇಂಥಹ ಗತಿವಿಧಿಗಳು ಮೇಲಿನ ಲೋಕಗಳಿಂದ ಯಾರೋ ಅವತಾರ ಅಥವಾ ಸಿದ್ಧ ಪುರುಷನು ಪೃಥ್ವೀ ಮೇಲೆ ಬರುವಾಗ ಮಾಡುತ್ತಾರೆ ಮತ್ತು ಅವರು ತಾಯಿಯ ಗರ್ಭದಲ್ಲಿ ಬಂದು ಆಶ್ರಯ ಪಡೆಯುತ್ತಾರೆ. ಸ್ವಾಮಿ ರಾಮಾನಂದರಿಗೆ ಅಷ್ಟು ಜ್ಞಾನವಿರಲಿಲ್ಲ, ಅಂದರೆ ಆ ಪರಮೇಶ್ವರ ಎಂದಿಗೂ ಜನ್ಮ ತಾಳುವುದಿಲ್ಲವೆಂದು.

ಭಗವಂತ ಕಬೀರರು ನೀರೂ ಮತ್ತು ನೀಮಾಗೆ ಮಗುವಿನ ರೂಪದಲ್ಲಿ ಸಿಗುವುದು.

ಸಂತಾನವಿಲ್ಲದ ದಂಪತಿ ನೀರೂ ಮತ್ತು ನೀಮಾ ಲಹರ್‌ತಾರಾ ಸರೋವರದಲ್ಲಿ ಬ್ರಹ್ಮ ಮೂಹೂರ್ತದ ಸಮಯ ಸ್ನಾನಮಾಡಲು ಹೋಗುತ್ತಿದ್ದರು. ನೀರೂ ಮತ್ತು ನೀಮಾ ಅದೇ ಜನ್ಮದಲ್ಲಿ ಹಿಂದೂ-ಬ್ರಾಹ್ಮಣ ಗೌರೀಶಂಕರ್ ಮತ್ತು ಸರಸ್ವತಿಯಾಗಿದ್ದರು. ಅವರನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಮಾಡಲಾಗಿತ್ತು. ಇದಕ್ಕಾಗಿ ಅವರು ಬಟ್ಟೆ ನೇಯುವ (ನೇಕಾರ ಕೆಲಸ) ಕೆಲಸ ಆರಂಭಿಸಿದ್ದರು.

ಆ ದಿನ ಸ್ನಾನಮಾಡಲು ಹೋಗುವ ಸಮಯ ರಸ್ತೆಯಲ್ಲಿ ನೀಮಾ ಅಳುತ್ತಿದ್ದಳು ಮತ್ತು ತನ್ನ ಭಗವಂತ ಶಿವನಲ್ಲಿ ಪ್ರಾರ್ಥಿಸುತ್ತಿದ್ದಳು, ಏನೆಂದರೆ ಬಹುಷಃ ಅವರಿಗೊಂದು ಮಗುವಾಗಿದ್ದಿದ್ದರೆ, ಅದರಿಂದ ಅವರ ಜೀವನ ಸಫಲವಾಗುತ್ತಿತ್ತು. ನೀರೂ ಮತ್ತು ನೀಮಾ ಅವರಿಗೆ ಮುಸಲ್ಮಾನರನ್ನಾಗಿ ಮಾಡಲಾಗಿತ್ತು, ಆದರೂ ಅವರ ಶ್ರದ್ಧೆ ಭಗವಂತ ಶಂಕರನಲ್ಲಿಯೇ ಇತ್ತು. ಅವರನ್ನ ಇಷ್ಟು ವರ್ಷಗಳಿಂದ ಪೂಜಿಸುತ್ತಿದ್ದರು. ನೀರೂ ನೀಮಾಗೆ ಸಾಂತ್ವನ ನೀಡುತ್ತಿದ್ದ, “ನೀಮಾ ನಮ್ಮ ಭಾಗ್ಯದಲ್ಲಿ ಯಾವುದಾದರೂ ಮಗು ಇದ್ದಿದ್ದರೆ ಭಗವಂತ ಶಿವ ನಮಗೆ ಖಂಡಿತ ಕೊಡುತ್ತಿದ್ದರು. ಈಗ ನಮ್ಮ ಭಾಗ್ಯದಲ್ಲಿ ಯಾವ ಸಂತಾನವೂ ಇಲ್ಲ. ನೀನು ಈ ರೀತಿ ಅತ್ತು ನಿನ್ನ ಕಣ್ಣುಗಳನ್ನು ಕೆಡಿಸ ಬೇಡ. ನಮ್ಮ ಬಳಿ ವೃದ್ಯಾಪದಲ್ಲಿ ನಮ್ಮನ್ನು ನೋಡಿ ಕೊಳ್ಳುವರು ಯಾರೂ ಇಲ್ಲ. ನೀನು ಅಳಬೇಡ.”

ಈ ರೀತಿ ಮಾತನಾಡುತ್ತಾ ಅವರು ಲಹರ್ ತಾರಾ ಸರೋವರಕ್ಕೆ ತಲುಪಿದರು. ಮೊಟ್ಟ ಮೊದಲು ನೀಮಾ ಸ್ನಾನ ಮಾಡಿದಳು. ಅವಳು ಸ್ನಾನದ ಸಮಯ ಧರಿಸಿದ ಬಟ್ಟೆಗಳನ್ನು ತೊಳೆಯಲು ಕೆರೆಗೆ ಮತ್ತೆ ಹೋದಳು. ಆಗ ನೀರೂ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ, ಆಗ ನೀಮಾ ಏನೋ ಅಲುಗಾಡುವಂಥದ್ದನ್ನು ನೋಡಿದಳು. ಬಾಲಕನ ರೂಪದಲ್ಲಿ ದೈವೀ ಕಾರ್ಯ ಮಾಡುತ್ತಿರುವ ಕಬೀರರ ಬಾಯಲ್ಲಿ ಒಂದು ಕಾಲಿನ ಹೆಬ್ಬೆರಳು ಇತ್ತು ಮತ್ತು ಇನ್ನೊಂದು ಕಾಲನ್ನು ಗಾಳಿಯಲ್ಲಿ ಅಲ್ಲಾಡಿಸುತ್ತಿದ್ದರು. ಅವಳು ಭಯಗೊಂಡಳೇನೆಂದರೆ ಎಲ್ಲಾದ್ರು ಹಾವು ಅಲ್ಲ ತಾನೇ ಮತ್ತದು ಅವಳ ಗಂಡನಿಗೆ ಕಚ್ಚದಿರಲಿ ಮತ್ತು ಅವಳು ಗಮನಕೊಟ್ಟು ನೋಡಿದಾಗ ಅವಳಿಗೆ ಕಮಲದ ಹೂವಿನ ಮೇಲೆ ಒಂದು ಮಗು ಕಾಣಿಸಿತು. ಅವಳು ಕಿರುಚಿದಳು “ನೋಡಿ! ಮಗು ಮುಳುಗುವುದು. ಮಗು ಮುಳುಗುವುದು.” 

ನೀರೂ ಯೋಚಿಸಿದ ನೀಮಾ ಹುಚ್ಚಿಯಾಗಿದ್ದಾಳೆ, ಈಗ ಅವಳು ನೀರಲ್ಲೂ ಮಗುವನ್ನು ಕಾಣಲಾರಂಬಿಸಿದಳು. ನೀರೂ ಹೇಳಿದ, “ನೀಮಾ ನಾನು ನಿನಗೆ ಹೇಳುತ್ತೇನೆ ಅಂದ್ರೆ ನೀನು ಮಗುವಿನ ಬಗ್ಗೆ ಹೆಚ್ಚು ಯೋಚಿಸ ಬೇಡ. ಈಗ ನಿನಗೆ ನೀರಲ್ಲೂ ಮಕ್ಕಳು ಕಾಣಲಾರಂಭಿಸಿದವು” ನೀಮಾ ಹೇಳಿದಳು “ಹೌದು ನಿಜವಾಗಿಯೂ! ಅಲ್ಲಿ ನೋಡು. ಮಗು ಮುಳುಗುವುದು.” ಅವಳ ಧ್ವನಿಯಲ್ಲಿ ನೋವು ನೋಡಿ ಅವನು ನೋಡಿದ ನೀಮಾ ಯಾವ ಕಡೆ ಸೂಚಿಸುತ್ತಿದ್ದಾಳೆ. ಅವನು ಅಲ್ಲಿ ನಿಜವಾಗಿಯೂ ಒಂದು ಮಗು ನೋಡಿದ. ನೀರೂ ಮಗು ರೂಪದಲ್ಲಿ ಭಗವಂತ ಕಬೀರರನ್ನು ಕಮಲದ ಹೂವಿನ ಸಹಿತ ಎತ್ತಿಕೊಂಡು ನೀಮಾಗೆ ಕೊಟ್ಟನು. ನೀರೂ ಮತ್ತೆ ಸ್ನಾನಕ್ಕಾಗಿ ಸರೋವರದೊಳಗೆ ಹೋದನು. 

ನೀರೂ ಯೋಚಿಸಿದ (ಏಕೆಂದರೆ ಮನುಷ್ಯ ಸಮಾಜದ ಬಗ್ಗೆ ಹೆಚ್ಚು ಚಿಂತಿತರಾಗುತ್ತಾರೆ), “ಒಂದು ವೇಳೆ ಈ ಮಗುವನ್ನು ಮನೆಗೊಯ್ದರೆ ಜನರಂತು ಕೇಳುವರು ನಾವು ಈ ಮಗುವನ್ನು ಎಲ್ಲಿಂದ ತಂದೆವು. ಒಂದೊಮ್ಮೆ ನಾವು ಹೇಳಿದರೆ, ಅವನನ್ನು ಕಮಲದ ಹೂವಿನ ಮೇಲೆ ಪಡೆದೆವೆಂದು, ಹಾಗಾದ್ರೆ ಯಾರೂ ನಮ್ಮ ಮೇಲೆ ವಿಶ್ವಾಸ ಮಾಡುವುದಿಲ್ಲ. ಅವರು ಹೇಳುವರು ನಾವು ಯಾರದೋ ಮಗುವನ್ನು ಕದ್ದಿರುವೆವು ಮತ್ತು ಅದರ ತಾಯಿ ಅಳುತ್ತಿರಬಹುದು. ಅವರು ರಾಜನ ಬಳಿ ದೂರಿಡುವರು ಮತ್ತು ನಮ್ಮನ್ನು ಶಿಕ್ಷಿಸುವರು. ನಮಗೆ ಹಿಂದೂಗಳಿಂದ ಯಾವ ಸಮರ್ಥನೆ ಇಲ್ಲ ಮತ್ತು ನಾವು ಇಲ್ಲಿಯವರೆಗೆ ಯಾವ ಮುಸಲ್ಮಾನರೊಂದಿಗೂ ಸಂಬಂಧವಿರಿಸಿಲ್ಲ.” ನೀರೂ ಸ್ನಾನದ ಬಳಿಕ ಹೊರಬಂದನು. ಅವನು ನೋಡಿದ ನೀಮಾ ತಾಯಿಯಂತೆ, ಮಗುವಿನ ರೂಪದಲ್ಲಿ ಭಗವಂತ ಕಬೀರರಿಗೆ ಮುತ್ತಿಕ್ಕುತ್ತಿದ್ದಳು, ಒಮ್ಮೆ ತಬ್ಬಿಕೊಳ್ಳುತ್ತಿದ್ದಳು, ಅವಳು ತನ್ನ ಭಗವಂತ ಶಿವನಿಗೆ ಲಕ್ಷಗಟ್ಟಲೆ ಧನ್ಯವಾದ ಹೇಳುತ್ತಿದ್ದಳು, ತನ್ನ ಇಚ್ಛೆಯನ್ನು ಈಡೇರಿಸಿದ್ದಕ್ಕಾಗಿ 

ಕಬೀರ ಪರಮೇಶ್ವರರ ನಾಮದ ಜಪ ಮಾಡುವುದರಿಂದ ನಮ್ಮ ಆತ್ಮದಲ್ಲಿ ಒಂದು ವಿಶೇಷ ಕಂಪನವಾಗುತ್ತದೆ. ಅವನನ್ನು ಪಡೆಯುವುದಕ್ಕಾಗಿ ಋಷಿ ಮುನಿಗಳು ಮತ್ತು ಮಹರ್ಷಿಗಳು ಸಾವಿರಾರು ವರ್ಷಗಳ ತನಕ ತಪಸ್ಸು ಮಾಡಿ ತಮ್ಮ ಶರೀರವನ್ನು ಕ್ಷಯಿಸಿದರು. ಆ ಭಗವಂತನನ್ನು ಬಾಲಕ ರೂಪದಲ್ಲಿ ನೀಮಾ ಮಡಿಲಲ್ಲಿರಿಸಿದ್ದಳು. ಅವಳು ಯಾವ ಸುಖ ಅನುಭವಿಸುತ್ತಿದ್ದಳು ಇದರ ವರ್ಣನೆ ಮಾಡಲು ಸಾಧ್ಯವಿಲ್ಲ. ನೀರೂ ನೀಮಾಗೆ ಹೇಳಿದ, “ನೀಮಾ ನೀನು ಈ ಮಗುವನ್ನು ಇಲ್ಲಿಯೇ ಇಟ್ಟು ಬಿಡು. ಇದರಿಂದ ನಮಗೆ ಒಳ್ಳೆಯದಾಗುವುದು.” ನೀಮಾ ನೀರೂಗೆ ಹೇಳಿದಳು, ಗೊತ್ತಿಲ್ಲ ಈ ಮಗು ನನ್ನ ಮೇಲೆ ಏನು ಮೋಡಿ ಮಾಡಿದೆ. ನಾನದನ್ನು ಬಿಡಲಾರೆ, ನಾನು ಸಾಯಬಲ್ಲೆ. “ನೀರೂ ಅವಳಿಗೆ ತನ್ನ ವಿಚಾರ ಹೇಳಿದನೆಂದರೆ, ಅವರನ್ನು ಊರಿಂದ ತೆಗೆದು ಹಾಕುವರು ಮತ್ತು ಮಗುವನ್ನೂ ಕಿತ್ತು ಕೊಳ್ಳಲಾಗುವುದು. ನೀಮಾ ಹೇಳಿದಳು “ನಾನು ಈ ಮಗುವಿಗಾಗಿ ವನವಾಸವನ್ನೂ ಸ್ವೀಕರಿಸುವೆ.” ನೀರೂ ಹೇಳಿದ, “ನೀಮಾ ನೀನು ಬಹಳ ಹಠ ಮಾರಿಯಾಗಿದ್ದಿಯಾ. ನೀನು ನನ್ನ ಮಾತು ಒಪ್ಪಿಕೊಳ್ಳುತ್ತಿಲ್ಲ. ನಾನು ನಿನ್ನೊಡನೆ ಸದಾ ಪ್ರೀತಿಯಿಂದ ವ್ಯವಹರಿಸಿದ್ದೇನೆ ಏಕೆಂದರೆ ನಮಗೆ ಯಾವ ಸಂತಾನವಿಲ್ಲ. ನಾನು ಎಂದೂ ನಿನ್ನನ್ನು ಬೈಯಲಿಲ್ಲ, ನಿನ್ನ ಆತ್ಮಕ್ಕೆ ನೋವಾಗದಿರಲೆಂದು. ಇದನ್ನು ಯೋಚಿಸಿ ನಾನು ಸದಾ ನಿನ್ನ ಪ್ರತೀ ಇಚ್ಛೆಯನ್ನು ಪೂರ್ಣ ಗೊಳಿಸುವ ಪ್ರಯತ್ನ ಮಾಡಿದೆ. ಇದಕ್ಕಾಗಿ ನೀನೀಗ ಹಠ ಮಾರಿಯಾಗಿರುವೆ ಮತ್ತು ನನ್ನ ಮಾತು ಕೇಳುತ್ತಿಲ್ಲ.”

ಆ ದಿನ ನೀರೂ ತನ್ನ ಜೀವನದಲ್ಲಿ ಮೊದಲ ಬಾರಿ, ನೀಮಾಗೆ ಹೊಡೆಯಲು ಕೈ ಎತ್ತಿದ್ದ. ಅವನ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಬಂತು. ಅವನು ಪ್ರೀತಿ ಮತ್ತು ಕೋಪದಿಂದ ಹೇಳಿದ, “ನೀನು ನನ್ನ ಮಾತು ಕೇಳುತ್ತಿಲ್ಲ. ಈ ಮಗುವನ್ನು ಇಲ್ಲಿಯೇ ಬಿಟ್ಟು ಬಿಡು. ಇಲ್ಲದಿದ್ದರೆ ಈಗ ನಾನು ನಿನ್ನ ಕೆನ್ನೆಗೆ ಹೊಡೆಯುವೆ.” 

ಆಗ ಪರಮಾತ್ಮ ಕಬೀರರು ಮಗುವಿನ ರೂಪದಲ್ಲಿ ಹೇಳಿದರು, “ನೀರೂ ನನ್ನನ್ನು ಮನೆಗೆ ಕರೆದೊಯ್ಯು. ಯಾರೂ ಏನೂ ಹೇಳುವುದಿಲ್ಲ. ನಾನಿಲ್ಲಿ ನಿಮಗಾಗಿ ಬಂದಿರುವೆ.” ಒಂದಿನದ ಮಗು ಮಾತಾಡಿದ್ದನ್ನು ನೋಡಿ ನೀರೂ ಭಯಗೊಂಡನು. ಏನೂ ಹೇಳದೆ ನೀರೂ ಮುಂದೆ ಹೊರಟ. ನೀಮಾ ಮಗುವಿನ ಮೋಹದಲ್ಲಿದ್ದ ಕಾರಣ ಕಬೀರ ಸಾಹೇಬರ ಮಾತು ಕೇಳಲಿಲ್ಲ. ಊರು ತಲುಪುತ್ತಿದ್ದಂತೆ ಜನರು ಕೇಳಿದರೆನೆಂದರೆ ಅವರಿಗೆ ಈ ಮಗು ಎಲ್ಲಿ ಸಿಕ್ಕಿತು? ನೀರೂ ಹೇಳಿದ ಏನೆಂದ್ರೆ. ನಾವು ಮಗುವನ್ನು ಕಮಲದ ಹೂವಿನ ಮೇಲೆ ಪಡೆದೆವು. ಜನರು ಇದನ್ನು ಕೇಳಿಸಿ ಕೊಂಡರು. ಕೆಲವರು ನಂಬಿದರು, ಕೆಲವರು ನಂಬಲಿಲ್ಲ. ಆದರೆ ಅವರು ಈ ವಿಷಯದ ಮೇಲೆ ಹೆಚ್ಚು ಗಮನ ಕೊಡಲಿಲ್ಲ. ಊರಿನ ಜನರು ಬಹಳ ಸುಂದರವಾದ ಆ ಮಗುವನ್ನು ನೋಡಲು ತಲುಪಿದರು.

ಮಗುವಿನ ರೂಪದಲ್ಲಿ ಭಗವಂತ ಕಬೀರರ ಸೌಂದರ್ಯವನ್ನು ನೋಡಿ ಇಡೀ ನಗರ ಹೌಹಾರಿತು. ರಾಜನೂ ಆ ಸುಂದರ ಬಾಲಕನನ್ನು ನೋಡಲು ಬಂದನು. ಸ್ವರ್ಗದ ದೇವತೆಗಳೂ ಬಾಲಕ ರೂಪದಲ್ಲಿ ಕಬೀರರ ಸೌಂದರ್ಯವನ್ನು ನೋಡುತ್ತಿದ್ದರು. ಪ್ರತಿಯೊಬ್ಬರು ತಮ್ಮ ತಮ್ಮ ಅನುಮಾನ ವ್ಯಕ್ತಪಡಿಸುತ್ತಿದ್ದರು ಅಂದರೆ ಇವನು ದೇವತೆ, ಪ್ರೇತ ಅಥವಾ ಕಿನ್ನರನ ಆತ್ಮವಾಗಿರಬಹುದು, ಇದರಿಂದ ನೀಮಾ ಕೋಪಗೊಳ್ಳುತ್ತಿದ್ದಳು ಮತ್ತು ಹೇಳುತ್ತಿದ್ದಳು “ನೀವು ನನ್ನ ಮಗನ ಮೇಲೆ ಕೆಟ್ಟದೃಷ್ಟಿ ಬೀರುವಿರಿ.” ಜನರು ಹೇಳುತ್ತಿದ್ದರೇನೆಂದರೆ ಈ ಮಗು ಯಾವುದೋ ದೇವತೆ ಇರಬೇಕು. ಸ್ವರ್ಗದಲ್ಲಿ ದೇವತೆಗಳು ಹೇಳುತ್ತಿದ್ದರೇನೆಂದರೆ ಮಗು ಬ್ರಹ್ಮಾ, ವಿಷ್ಣು ಅಥವಾ ಶಿವನ ಅವತಾರವೆನಿಸುತ್ತದೆ. ಮೇಲೆ ಬ್ರಹ್ಮಾ, ವಿಷ್ಣು ಮತ್ತು ಶಿವ ಹೇಳುತ್ತಿದ್ದರು ಏನೆಂದರೆ ಈ ಮಗು ಪಾರಬ್ರಹ್ಮ (ಪರಮೇಶ್ವರ) ನ ಅವತಾರ ಇರಬಹುದು. 

ಭಗವಂತ ಕಬೀರರ ಪೋಷಣೆ ಒಂದು ಕಡಸು ಹಸುವಿನ ಹಾಲಿನಿಂದಾಯ್ತು.

ಭಗವಂತ ಕಬೀರರು ಬಾಲಕನ ಲೀಲಾಮಯ ಶರೀರ ರೂಪದಲ್ಲಿ 25 ದಿನಗಳದವರಾಗಿದ್ದರು. ಅವರು ಏನೂ ತಿಂದಿರಲಿಲ್ಲ-ಕುಡಿದಿರಲಿಲ್ಲ. ಆದರೂ ಅವರ ಶರೀರ ಹೀಗೆಯೇ ಬೆಳೆಯುತ್ತಿತ್ತು, ಅಂದರೆ ಮಗು ದಿನದಲ್ಲಿ 2 ಬಾರಿ 1 ಲೀಟರ್ ಹಾಲು ಕುಡಿದಂತೆ. ನೀಮಾಗೆ ಚಿಂತೆಯಾಯ್ತು. ಎಲ್ಲಾದ್ರೂ ಈ ಮಗು ಸಾಯದಿರಲಿ. ಅವಳು ಯೋಚಿಸಿದಳು, ಒಂದೊಮ್ಮೆ ಈ ಮಗು ಸತ್ತರೆ, “ನಾನೂ ಅದರೊಡನೆ ಸಾಯುವೆ.” ಅವಳು ತನ್ನ ಭಗವಂತ ಶಂಕರನನ್ನು ನೆನಪಿಸಿಕೊಂಡು ಜೋರಾಗಿ ಅಳುತ್ತಿದ್ದಳು, “ಹೇ ಭಗವಂತ ಶಂಕರ, ನೀವು ಈ ಮಗುವನ್ನು ನಮಗೆ ನೀಡಬಾರದಿತ್ತು. ಈಗ ನೀವು ಮಗುವನ್ನು ಕೊಟ್ಟು ಒಯ್ಯುತ್ತಿದ್ದೀರಿ.” ಭಗವಂತ ಕಬೀರರು ಯೋಚಿಸಿದರು, “ನಾನಂತು ಸಾಯಲ್ಲ, ಆದರೆ ಈ ವೃದ್ಧೆ ಮಹಿಳೆ ಈ ಚಿಂತೆಯಲ್ಲಿ ಖಂಡಿತ ಸಾಯುವಳು.” 

ಭಗವಂತ ಕಬೀರರು ಭಗವಂತ ಶಿವನಿಗೆ ಪ್ರೇರೇಪಿಸಿದರು. ಭಗವಂತ ಶಿವ ನೋಡಿದ, ಯಾರು ಅವರನ್ನು ನೆನೆಸಿದರೆಂದು. ಭಗವಂತ ಶಂಕರ ಸಾಧು ರೂಪದಲ್ಲಿ ಅಲ್ಲಿಗೆ ಬಂದರು. ಅವನು ನೀಮಾಗೆ ಕೇಳಿದ ನೀನು ಏಕೆ ಅಳುತ್ತಿರುವೆ. ನೀಮಾ ಅವರಿಗೆ ಹೇಳಿದಳು “ನನ್ನ ಮಗು ಏನೂ ತಿನ್ನುತ್ತಿಲ್ಲ, ಕುಡಿಯುತ್ತಿಲ್ಲ. ಅವನು ಸಾಯುವನು, ಮತ್ತು ನಾನೂ ಅವನೊಡನೆ ಸಾಯುವೆ.” ಭಗವಂತ ಶಿವನು ನೀಮಾಗೆ ಕೇಳಿದ, ಅವಳ ಮಗು ಎಲ್ಲಿದೆ? ನೀಮಾ ಭಗವಂತ ಕಬೀರರನ್ನು ಭಗವಂತ ಶಿವನ ಪಾದಗಳಲ್ಲಿಡಲು ಯೋಚಿಸಿದಳು. ಯಾವಾಗ ಅವಳು ಬಾಲಕ ಕಬೀರರನ್ನು ಶಿವನ ಪಾದಗಳಲ್ಲಿ ಇಡತೊಡಗಿದಳೋ, ಆಗ ಮಗು ಗಾಳಿಯಲ್ಲಿ ತೇಲುತ್ತಾ ಭಗವಂತ ಶಿವನ ತಲೆಯ ಮಟ್ಟದ ತನಕ ತಲುಪಿತು.

ನೀಮಾ ಯೋಚಿಸಿದಳು ಇದು ಈ ಸಂತನ ಚಮತ್ಕಾರ ಇರಬಹುದು. ಭಗವಂತ ಶಿವ ಮತ್ತು ಭಗವಂತ ಕಬೀರರು 7 ಬಾರಿ ಚರ್ಚಿಸಿದರು. ಭಗವಂತ ಕಬೀರರು ಭಗವಂತ ಶಿವನಿಗೆ ಹೇಳಿದರು, “ನೀರೂ- ನೀಮಾಗೆ ಒಂದು ಕಡಸು ಹಸುವನ್ನು ತರಲು ಹೇಳಿ. ನೀವು ಅದರ ಬೆನ್ನು ತಟ್ಟಿದಂತೆ ಅದು ಹಾಲು ನೀಡುವುದು.” ಭಗವಂತ ಶಂಕರನು ನೀಮಾಗೆ ಹೇಳಿದ. “ನಿಮ್ಮ ಮಗು ಸಾಯುವಂಥವನಲ್ಲ ತಾಯಿ. ಅದರ ಆಯಸ್ಸು ಬಹಳ ಧೀರ್ಘವಾಗಿದೆ. ಅವನ ಮಹಿಮೆಯ ಯಾವ ಅಂತ್ಯವಿಲ್ಲ. ಧನ್ಯಳು ನೀನು. ಧನ್ಯ ಈ ನಗರೀ ಇಲ್ಲಿ ಈ ಮಹಾನ್ ಆತ್ಮ ಬಂದಿದೆ.” 

ನೀಮಾ ಯೋಚಿಸಿದಳು ಅಂದ್ರೆ ಸಂತ ಅವಳಿಗೆ ಕೇವಲ ಸಾಂತ್ವನ ನೀಡುತ್ತಿರುವರು. ಆಗ ಭಗವಂತ ಶಿವ ಹೇಳಿದರು, “ನೀವು ಒಂದು ಕಡಸು ಹಸು ಮತ್ತು ಹೊಸ ಪಾತ್ರೆ ತೆಗೆದುಕೊಂಡು ಬನ್ನಿ.”” ನೀರೂ ಹಾಗೆಯೇ ಮಾಡಿದನು. ಹೊಸ ಪಾತ್ರೆಯನ್ನು ಕೆಚ್ಚಲಿನ ಕೆಳಗೆ ಇಡಲಾಯ್ತು. ಭಗವಂತ ಶಿವನು ಹಸುವಿನ ಬೆನ್ನ ಮೇಲೆ ತಟ್ಟಿದರು. ಕೆಚ್ಚಲಿನಿಂದ ಹಾಲಿನ ಧಾರೆ ಹರಿಯ ತೊಡಗಿತು. ಪಾತ್ರೆ ಪೂರ್ತಿ ತುಂಬಿದ ಬಳಿಕ ಹಾಲು ನಿಂತು ಹೋಯ್ತು. ಆ ಹಾಲನ್ನು ಕಬೀರ ಪರಮೇಶ್ವರರು ಕುಡಿದರು. 

ನೀಮಾ ಸಂತನಿಗೆ ಧನ್ಯವಾದ ಹೇಳಿದಳು. ಅವಳು ಯೋಚಿಸಿದಳು ಸಂತರೇ ಇದೆಲ್ಲಾ ಮಾಡಿರುವರೆಂದು. ನೀಮಾಳು ದಕ್ಷಿಣೆ (ದಾನ) ನೀಡಲು ತನ್ನ ವಿವಶತೆ ವ್ಯಕ್ತ ಪಡಿಸಿದಳು. ಭಗವಂತ ಶಿವ ಹೇಳಿದ, “ನಾನು ಆ ಜನರಂತಿಲ್ಲ ಯಾರು ಹಣ ಬೇಡುತ್ತಾರೆ. ನಾನಿಲ್ಲಿ ಇದಕ್ಕಾಗಿ ಬಂದಿರುವೆ ಏಕೆಂದರೆ ನಾನು ನಿನ್ನನ್ನು ದುಃಖದಲ್ಲಿ ನೋಡಿದೆ.” ಇಷ್ಟು ಹೇಳಿ ಭಗವಂತ ಶಿವ ಹೊರಟು ಹೋದರು. ಅದರದನಂತರ ಆ ಹಸು ಪ್ರತಿನಿತ್ಯ ಹಾಲು ಕೊಡಲಾರಂಭಿಸಿತು. ಆ ಹಾಲನ್ನು ಕಬೀರ ಪರಮೇಶ್ವರರು ಕುಡಿಯುತ್ತಿದ್ದರು. ಈ ರೀತಿ ಪರಮೇಶ್ವರ ಕಬೀರರ ಪಾಲನೆ ಪೊಷಣೆಯ ದಿವ್ಯ ಕಾರ್ಯ ಸಂಪನ್ನವಾಯ್ತು.

ಪವಿತ್ರ ಋಗ್ವೇದ ಮಂಡಲದ 9 ಸೂಕ್ತಿ 1 ಮಂತ್ರ 9 ರಲ್ಲಿ ಹೇಳಲಾಗಿದೆನೆಂದರೆ ಈಶ್ವರನ ಪಾಲನೆ-ಪೋಷಣೆಯ ದಿವ್ಯ ಕೆಲಸ ಒಂದು ಕಡಸು ಹಸುವಿನ ಹಾಲಿನಿಂದಾಗುತ್ತದೆ. ಪರಮಾತ್ಮನ ಈ ಗುರುತಿನ ಮೇಲೆ ಕೇವಲ ಪರಮಾತ್ಮ ಕಬೀರರ ಸರಿ ಹೋಂದುತ್ತಾರೆ. 

5 ವರ್ಷದ ಆ ವಯಸ್ಸಿನಲ್ಲಿಯೇ ಕಬೀರರು ತನ್ನ ಲೀಲಾಮಯ ಶರೀರ (ದೇಹದೊಡನೆ ದೈವೀ ಕೃತ್ಯಗಳನ್ನು ನಿಭಾಯಿಸ ತೊಡಗಿದರು) ದಿಂದ ಅಲ್ಲಿಯ ಪ್ರಸಿದ್ಧ ಸಂತರೊಡನೆ ಆಧ್ಯಾತ್ಮಿಕ ವಿಚಾರ ವಿಮರ್ಷೆ ಮಾಡಲು ಪ್ರಾರಂಭಿಸಿದ್ದರು. ಯಾರೇ ಸಂತರು ಅಥವಾ ಋಷಿ ಅವರ ಆಧ್ಯಾತ್ಮಿಕ ಜ್ಞಾನದ ಉತ್ತರ ಎಂದೂ ಕೊಡಲಾಗಲಿಲ್ಲ. 

ಭಗವಂತ ಕಬೀರರು ಗುರು ಮಾಡಿಕೊಂಡರು

ಭಗವಂತ ಕಬೀರರು ಗುರು ಧಾರಣೆ ಮಾಡಿಕೊಳ್ಳಲು ಒಂದು ಲೀಲೆಮಾಡಿದರು ಮತ್ತು 2.5 ವರ್ಷದ ಮಗುವಿನ ರೂಪತಾಳಿದರು. ಬ್ರಹ್ಮ ಮುಹೂರ್ತದ ಸಮಯ ಗಂಗಾ ಘಾಟ್‌ದ ಮೆಟ್ಟಿಲುಗಳ ಮೇಲೆ ಮಲಗಿದರು. ಸ್ವಾಮೀ ರಾಮಾನಂದರು ಬ್ರಹ್ಮ ಮುಹೂರ್ತದಲ್ಲಿ ಸ್ನಾನಮಾಡಲು ಗಂಗಾ ಘಾಟ್‌ಗೆ ಹೋಗುತ್ತಿದ್ದರು. ಸ್ವಾಮೀ ರಾಮಾನಂದರ ಪಾದರಕ್ಷೆ ಕಬೀರ ಸಾಹೇಬರ ತೆಲೆಗೆ ತಗುಲಿತು. ಭಗವಂತ ಕಬೀರ ಸಾಹೇಬರು ಅಭಿನಯಿಸುತ್ತಾ ಮಗುವಿನಂತೆ ಅಳತೊಡಗಿದರು. ಸ್ವಾಮೀ ರಾಮಾನಂದರು ಏಕಾಏಕಿ ಬಗ್ಗಿದರು. ಅವರ ಒಂದು ಮಣಿಯ ತುಳಸೀ ಮಾಲೆ (ಅದೊಂದು ವೈಷ್ಲವ ಸಂತರ ಗುರುತು) ಭಗವಂತ ಕಬೀರರ ಕೊರಳಲ್ಲಿ ಬಿತ್ತು. ಸ್ವಾಮೀ ರಾಮಾನಂದರು ಕಬೀರ ಪರಮೇಶ್ವರ ಬಾಲಕ ರೂಪದ ಮೇಲೆ ಕೈ ಇಟ್ಟರು ಮತ್ತು ಹೇಳಿದರು, “ಮಗು ರಾಮ ರಾಮ ಹೇಳು. ರಾಮ ನಾಮದಿಂದ ದುಃಖಗಳು ನಾಶವಾಗುತ್ತವೆ. ಭಗವಂತ ಕಬೀರರು ಅಳುವುದನ್ನು ನಿಲ್ಲಿಸಿದರು. ಸ್ವಾಮೀ ರಾಮಾನಂದರು ಕಬೀರರನ್ನು ಬಾಲಕ ರೂಪದಲ್ಲಿ ಮತ್ತೆ ಮೆಟ್ಟ್ಟಿಲುಗಳ ಮೇಲೆ ಕುಳಿಸಿ ಸ್ನಾನಮಾಡಲು ಹೋದರು, ಮಗು ದಾರಿತಪ್ಪಿ ಇಲ್ಲಿ ಬಂದಿರ ಬಹುದೆಂದು ಯೋಚಿಸಿ. ನಾನು ಅವನನ್ನು ತನ್ನ ಆಶ್ರಮಕ್ಕೆ ಕರೆದೊಯ್ಯುವೆನು. ಅದು ಯಾರದೇ ಇರಲಿ, ಅವರು ಅಲ್ಲಿಂದ ಕರೆದೊಯ್ಯುವರು.” ಭಗವಂತ ಕಬೀರರು ಅಲ್ಲಿಂದ ಅದೃಶ್ಯರಾದರು ಮತ್ತು ತನ್ನ ಕುಟೀರದಲ್ಲಿ ತಲುಪಿದರು. 

ಆಗ ಭಗವಂತ ಕಬೀರರು ಒಂದು ಬಾರಿ ಸ್ವಾಮೀ ರಾಮಾನಂದರ ಶಿಷ್ಯ ವಿವೇಕಾನಂದರಿಗೆ ಜನರ ಮುಂದೆ ಪ್ರಶ್ನೆ ಕೇಳಿದರು, ಜನರಿಗೆ ಅವರು ವಿಷ್ಣು ಪುರಾಣ ಹೇಳುತ್ತಿದ್ದರು ಅಂದ್ರೆ ಪರಮಾತ್ಮ ಯಾರು? ವಿವೇಕಾನಂದರ ಬಳಿ ಯಾವ ಉತ್ತರವಿರಲಿಲ್ಲ. ಅಂದಹಾಗೆ ಜನರ ಮುಂದೆ ತನ್ನ ಮರ್ಯಾದೆ ಉಳಿಸಿಕೊಳ್ಳಲು ಅವರು ಬಾಲಕ ರೂಪಿ ಕಬೀರ ಪರಮೇಶ್ವರರಿಗೆ ಗದರಿಸಲು ಪ್ರಾರಂಭಿಸಿದರು ಅಂದರೆ ನಿನ್ನ ಜಾತಿ ಮತ್ತು ನಿನ್ನ ಗುರು ಯಾರು? ಅಲ್ಲಿ ಉಪಸ್ಥಿತರಿದ್ದ ಜನರು ಹೇಳಿದರೇನೆಂದರೆ ಕಬೀರರು ಕೆಳಜಾತಿಯ ನೇಕಾರ/ಧಾಣುಕನಾಗಿರುವನು. ಭಗವಂತ ಕಬೀರರು ಹೇಳಿದರು, “ನನ್ನ ಗುರು ನಿಮ್ಮ ಗುರು ಕೂಡಾ ಆಗಿದ್ದಾರೆ. ನಾನು ಸ್ವಾಮೀ ರಾಮಾನಂದರಿಂದ ದೀಕ್ಷೆ ಪಡೆದಿದ್ದೇನೆ.” ವಿವೇಕಾನಂದರು ನಕ್ಕರು, “ನೋಡಿ ಜನರೇ! ಈ ಬಾಲಕ ಸುಳ್ಳು ಹೇಳುತ್ತಿದ್ದಾನೆ. ಸ್ವಾಮೀ ರಾಮಾನಂದರು ಕೆಳ ಜಾತಿಯವರಿಗೆ ದೀಕ್ಷೆ ನೀಡುದಿಲ್ಲ. ನಾನು ಸ್ವಾಮೀ ರಾಮಾನಂದರಿಗೆ ಹೇಳುವೆನು ಮತ್ತು ನಿವೆಲ್ಲರೂ ನಾಳೆ ಬಂದುನೋಡಿ ಏನೆಂದರೆ ಸ್ವಾಮೀ ರಾಮಾನಂದರು ಈ ಬಾಲಕನಿಗೆ ಯಾವ ರೀತಿ ಶಿಕ್ಷೆ ವಿಧಿಸುವರು. 

ವಿವೇಕಾನಂದರು ಸ್ವಾಮೀರಾಮಾನಂದರಿಗೆ ಎಲ್ಲಾ ವಿಷಯ ತಿಳಿಸಿದರು. ಸ್ವಾಮೀ ರಾಮಾನಂದರು ಕೂಡಾ ಕುಪಿತಗೊಂಡು ಬಾಲಕನನ್ನು ಕರೆತರಲು ಹೇಳಿದರು. ಮರುದಿನ ಬೆಳಿಗ್ಗೆ ಭಗವಂತ ಕಬೀರರನ್ನು ಸ್ವಾಮೀ ರಾಮಾನಂದ ಬಳಿತರಲಾಯ್ತು. ಸ್ವಾಮೀರಾಮಾನಂದರು ತನ್ನ ಗುಡಿಸಲಿನ ಎದುರು ಇದನ್ನು ತೋರಿಸುವುದಕ್ಕಾಗಿ ಒಂದು ಪರದೆ ನೇತಾಡಿಸಿದರು ಅಂದರೆ ಅವರಿಗೆ ದೀಕ್ಷೆ ನೀಡುವ ಮಾತು ಬಿಡಿ, ಅವರ ಬಳಿ ಕೀಳು ಜಾತಿಯ ದರ್ಶಕರೂ ಇಲ್ಲ. ಸ್ವಾಮೀ ರಾಮಾನಂದರು ಬಹಳ ಕೋಪದಿಂದ ಪರದೆಯ ಆಚೆಯಿಂದ ಪರಮೇಶ್ವರನನ್ನು ಕೇಳಿದರು ಏನೆಂದ್ರೆ ತಾವ್ಯಾರು? ಭಗವಂತ ಕಬೀರರು ಹೇಳಿದರು, “ಹೇ ಸ್ವಾಮೀಜೀ ನಾನು ಈ ಸೃಷ್ಟಿಯ ಸೃಷ್ಟಿಕರ್ತನು. ಇಡೀ ಪ್ರಪಂಚ ನನ್ನ ಮೇಲೆ ಆಶ್ರಿತವಾಗಿದೆ. ನಾನು ಮೇಲೆ ಸನಾತನ ಧಾಮ ಸತ್ಯಲೋಕದಲ್ಲಿ ನಿವಾಸ ಮಾಡುತ್ತೇನೆ.” 

ಸ್ವಾಮಿ ರಾಮಾನಂದರು ಇದನ್ನು ಕೇಳಿ ಕೋಪಗೊಂಡರು. ರಾಮಾನಂದರು ಅವರಿಗೆ ಬೈದರು ಮತ್ತು ಅವರಿಗೆ ಇನ್ನೂ ಕೆಲವು ಪ್ರಶ್ನೆ ಕೇಳಿದರು! ಅವುಗಳ ಉತ್ತರ ಒಬ್ಬ ಆದರ್ಶ ಶಿಷ್ಯನಂತೆ ವ್ಯವಹರಿಸುತ್ತಾ ಭಗವಂತ ಕಬೀರರು ಶಾಂತಿ ಮತ್ತು ವಿನಮ್ರತೆಯಿಂದ ನೀಡಿದರು. ಆಗ ರಾಮಾನಂದರು ಯೋಚಿಸಿದರು ಏನೆಂದ್ರೆ ಬಾಲಕನೊಂದಿಗೆ ಚರ್ಚಿಸುವುದರಲ್ಲಿ ಸಾಕಷ್ಟು ಸಮಯ ಬೇಕಾಗುವುದು, ನಾನು ಮೊದಲು ನನ್ನ ದಿನನಿತ್ಯದ ಧಾರ್ಮಿಕ ಸಾಧನೆ ಪೂರ್ಣ ಮಾಡಿಕೊಳ್ಳುವೆನು.

ಸ್ವಾಮಿ ರಾಮಾನಂದರು ಧ್ಯಾನಾವಸ್ಥೆಯಲ್ಲಿ ಕುಳಿತಿತು ಕಲ್ಪನೆ ಮಾಡುತ್ತಿದ್ದರೆನೆಂದರೆ ಅವರು ಸ್ವತಃ ಗಂಗೆಯಿಂದ ನೀರು ತಂದರು, ಭಗವಂತ ವಿಷ್ಣುವಿನ ಮೂರ್ತಿಗೆ ಸ್ನಾನ ಮಾಡಿಸಿದರು, ಬಟ್ಟೆ ಬದಲಿಸಿದರು. ಮಾಲೆ ಹಾಕಿದರು ಮತ್ತು ಕೊನೆಯಲ್ಲಿ ಮೂರ್ತಿಯ ತಲೆಯ ಮೇಲೆ ಕಿರೀಟ ಇದ್ದ ಹಾಗೇ ಇಟ್ಟರು. ಆ ದಿನ ಸ್ವಾಮಿ ರಾಮಾನಂದರು ಮೂರ್ತಿಯ ಕೊರಳಿಗೆ ಮಾಲೆ ಹಾಕುವುದನ್ನು ಮರೆತರು. ಅವರು ಮಾಲೆಯನ್ನು ಕಿರೀಟದಿಂದ ಇಳಿಸಲು ಪ್ರಯತ್ನಿಸಿದರು ಆದರೆ ಮಾಲೆ ಸಿಕ್ಕಿಕೊಂಡಿತು. ಸ್ವಾಮಿ ರಾಮಾನಂದರು ದುಃಖಿಯಾದರು, ಮತ್ತು ತನ್ನನ್ನು ತನಗೆ ಹೇಳತೊಡಗಿದರು ಏನೆಂದರೆ “ನನ್ನ ಇಡೀ ಜೀವನದಲ್ಲಿ ನಾನು ಇಂದಿನವರೆಗೆ ಎಂದೂ ಇಂಥಹ ತಪ್ಪು ಮಾಡಿರಲಿಲ್ಲ. ನಾನು ಇಂದು ಇಂತಹ ಏನು ತಪ್ಪು ಮಾಡಿದೆನೆಂದು ಹೀಗಾಯ್ತು?” ಆಗ ಕಬೀರ ಪರಮೇಶ್ವರರು ಹೇಳಿದರು, “ಸ್ವಾಮಿ! ಮಾಲೆ ಗಂಟು ಬಿಚ್ಚಿ. ನೀವು ಕಿರೀಟ ಇಳಿಸುವ ಅವಶ್ಯಕತೆಯಿಲ್ಲ” ರಾಮಾನಂದರು ಯೋಚಿಸಿದರು, ನಾನಂತು ಕೇವಲ ಕಲ್ಪನೆ ಮಾಡುತ್ತಿದ್ದೆ. ಇಲ್ಲಿ ಯಾವ ಮೂರ್ತಿಯು ಇಲ್ಲ. ಮಧ್ಯದಲ್ಲಿ ಒಂದು ಪರದೆ ಕೂಡ ಇದೆ. ಮತ್ತು, ಈ ಮಗು ತಿಳಿದಿತ್ತು ನಾನು ಮಾನಸಿಕವಾಗಿ ಏನು ಮಾಡುತ್ತಿರುವೆನೆಂದು. “ಅವರೇನು ಗಂಟು ಬಿಚ್ಚುತ್ತಿದ್ದರೆ. ಅವರಂತು ಆ ಪರದೆಯನ್ನು ಕಿತ್ತೆಸೆದರು ಮತ್ತು ನೇಕಾರ ಜಾತಿಯ ಬಾಲಕ ರೂಪದ ಕಬೀರ ಪರಮಾತ್ಮನನ್ನು ಆಲಂಗಿಸಿದರು. ರಾಮಾನಂದರು ತಿಳಿದರು ಇವನು ಈಶ್ವರ ನಾಗಿರುವನು.

ನಂತರ 5 ವರ್ಷದ ಬಾಲಕನ ರೂಪದಲ್ಲಿ ಭಗವಂತ ಕಬೀರರು 104 ವರ್ಷದ ಮಹಾತ್ಮ ಸ್ವಾಮಿ ರಾಮಾನಂದರಿಗೆ ಜ್ಞಾನವನ್ನು ತಿಳಿಸಿದರು. ಕಬೀರರು ಸ್ವಾಮಿ ರಾಮಾನಂದರಿಗೆ ಸತ್ಯಲೋಕ ತೋರಿಸಿದರು, ಅವರ ವಾಸ್ತವಿಕ ಆಧ್ಯಾತ್ಮಿಕ ಜ್ಞಾನ ತಿಳಿಸಿದರು ಮತ್ತು ರಾಮಾನಂದರಿಗೆ ದೀಕ್ಷೆ ನೀಡಿದರು. ಕಬೀರ ಪರಮೇಶ್ವರರು ರಾಮಾನಂದರನ್ನು ಸಾಂಸಾರಿಕ ದೃಷ್ಟಿಯಲ್ಲಿ ತನ್ನ ಗುರುವಾಗಿರಲು ತಿಳಿಸಿದರು ಇಲ್ಲದಿದ್ದರೆ ಮುಂಬರುವ ಪೀಳಿಗೆ ಹೇಳುವುದೇನೆಂದರೆ ಗುರು ಮಾಡಿಕೊಳ್ಳುವ ಯಾವ ಅವಶ್ಯಕತೆಯೂ ಇಲ್ಲ ಏಕೆಂದರೆ ಕಬೀರರು ಕೂಡಾ ಗುರು ಧಾರಣೆ ಮಾಡಿರಲಿಲ್ಲ. ಸ್ವಾಮಿ ರಾಮಾನಂದರು ಅವರಿಗೆ ಆಗ್ರಹಿಸಿದರು ಏನೆಂದರೆ ಅವರು ಹೀಗೆ ಮಾಡಲಾರರು ಏಕೆಂದರೆ ಅವರು ತಿಳಿದಿದ್ದರು ಏನೆಂದರೆ ಈಶ್ವರನ ಗುರುವಾಗುವುದು ಪಾಪವಾಗಿದೆ. ಭಗವಂತ ಕಬೀರರು ಹೇಳಿದರು. “ನೀವು ನನ್ನಾಜ್ಞೆಯೆಂದು ತಿಳಿದು ಇದರ ಪಾಲನೆ ಮಾಡಿ” 

ಪರಮೇಶ್ವರ ಕಬೀರರ ಅನ್ಯ ಚಮತ್ಕಾರಗಳು

ಹಿಂದೂ ಮತ್ತು ಮುಸ್ಲಿಂ ಧರ್ಮ ಗುರುಗಳ ದೂರುಗಳ ಮೇಲೆ, ಸಿಕಂದರ್ ಲೋಧೀಯು ಒಂದು ಗರ್ಭಿಣಿ ಹಸುವನ್ನು ಮಧ್ಯದಿಂದ ಕತ್ತರಿಸಿದ್ದನು ಮತ್ತು ಭಗವಂತ ಕಬೀರರಿಗೆ ಹೇಳಿದ ಏನೆಂದರೆ ಒಂದೊಮ್ಮೆ ಅವರು ಅಲ್ಲಾಹ ಆಗಿದ್ದರೆ ಹಸುವನ್ನು ಜೀವಿತ ಗೊಳಿಸಲಿ. ಇಲ್ಲದಿದ್ದರೆ ಅವರ ತಲೆ ಕಡಿಯುವೆ. ಭಗವಂತ ಕಬೀರರು ಹಸು ಮತ್ತು ಅದರ ಕರುವಿನ ಬೆನ್ನು ತಟ್ಟಿದರು. ಎರಡೂ ಜೀವಂತವಾಗಿ ಎದ್ದು ನಿಂತವು. ಭಗವಂತ ಕಬೀರರು ಆ ಹಸುವಿನ ಹಾಲಿನಿಂದ ಪಾತ್ರೆ ತುಂಬಿದರು. ಸಿಕಂದರ್ ಲೋಧಿಯು ಕಬೀರರಿಗೆ ಧೀರ್ಘ ದಂಡ ಪ್ರಣಾಮಿಸಿದ. 

■     ಸಿಕಂದರ್ ಲೋಧಿಯ ಉರಿಯ ರೋಗವನ್ನು ಗುಣಪಡಿಸಿದರು 

ಸಿಕಂದರ್ ಲೋಧಿ ಮಹಾರಾಜ ಒಂದು ಅಸಾಧ್ಯ ಕಾಯಿಲೆಯಿಂದ ಪೀಡಿತನಾಗಿದ್ದ (ಅವನಿಗೆ ಉರಿಯ ರೋಗವಿತ್ತು) ಅವನು ಅನೇಕ ವೈದ್ಯರಿಂದ ಚಿಕಿತ್ಸೆ ಮಾಡಿಸಿದ ಮತ್ತು ಅನೇಕ ಧಾರ್ಮಿಕ ಅನುಷ್ಠಾನ ಮಾಡಿಸಿದನು. ಆದರೆ ಏನೂ ಪ್ರಯೋಜನವಾಗಲಿಲ್ಲ. ಆಗ ಯಾರೋ ಅವನಿಗೆ ಕಬೀರ ಪರಮೇಶ್ವರರ ಬಗ್ಗೆ ಹೇಳಿದರು. ಅವನು ಪರಮೇಶ್ವರ ಕಬೀರರ ಬಳಿ ಹೋದನು. ಭಗವಂತ ಕಬೀರರು ತನ್ನ ಆಶಿರ್ವಾದ ಮಾತ್ರದಿಂದಲೇ ಅವನನ್ನು ಗುಣಪಡಿಸಿದ್ದರು. 

■     ಸ್ವಾಮಿ ರಾಮಾನಂದರನ್ನು ಜೀವಿತಗೊಳಿಸಿದರು 

ಸಿಕಂದರ್ ಲೋಧಿಯು ಸ್ವಾಮಿ ರಾಮಾನಂದರನ್ನು ಕೋಪದಿಂದ ಕೊಂದಿದ್ದನು. ಭಗವಂತ ಕಬೀರರು ಸ್ವಾಮಿ ರಾಮಾನಂದರನ್ನು ತನ್ನ ಮುಂದೆಯೇ ಮತ್ತೆ ಜೀವಿತ ಗೊಳಿಸಿದರು. ಇದನ್ನು ನೋಡಿ ಸಿಕಂದರ್ ಲೋಧಿಯು ಕಬೀರ ಪರಮೇಶ್ವರರ ಶರಣ ಪಡೆದನು. 

■     ಕಮಾಲ್-ಕಮಾಲಿಯನ್ನು ಜೀವಿತಗೊಳಿಸಿದರು 

ಆದರೆ ಸಿಕಂದರ್ ಲೋಧಿಯ ಮುಸಲ್ಮಾನ ಗುರು ಶೇಖ್‌ತಕೀಗೆ ಕಬೀರ ಪರಮೇಶ್ವರರ ಮೇಲೆ ಹೊಟ್ಟೆ ಕಿಚ್ಚು ಆರಂಭವಾಯ್ತು. ಅವನು ಸಿಕಂದರ್ ಲೋಧಿಗೆ ಹೇಳಿದ, “ನಾನು ಅವನನ್ನು ಅಲ್ಲಾಹ್ ಎಂದು ಆಗಲೇ ನಂಬುವೆ, ಯಾವಾಗ ಅವನು ನನ್ನ ಮುಂದೆ ಒಬ್ಬ ಮರಣ ಹೊಂದಿದ ಮನುಷ್ಯನನ್ನು ಜೀವಂತಗೊಳಿಸುವನು.” ಸಿಕಂದರ್‌ನು ಪರಮಾತ್ಮ ಕಬೀರರಿಗೆ ತನ್ನ ಚಿಂತೆಯನ್ನು ಹೇಳಿದನು. ಮರುದಿನ ಬೆಳಿಗ್ಗೆ ಅವರು ನೋಡಿದರು, ಒಬ್ಬ 12, 13 ವರ್ಷದ ಹುಡುಗನ ಶವ ನದಿಯಲ್ಲಿ ತೇಲುತ್ತಿತ್ತು. ಕಬೀರರು ಶೇಖ್‌ತಕೀಗೆ ಮೊದಲು ಪ್ರಯತ್ನಿಸಲು ಹೇಳಿದರು. ಶೇಖ್‌ತಕೀ ಪ್ರಯತ್ನಿಸಿದ, ಆದರೆ ಸಫಲನಾಗಲಿಲ್ಲ. ಆಗ ಭಗವಂತ ಕಬೀರರು ಬಾಲಕನನ್ನು ಜೀವಿತಗೊಳಿಸಿದರು. ಅಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರು ಹೇಳಿದರು. “ಕಮಾಲ್ (ಚಮತ್ಕಾರ) ಮಾಡಿದರು! ಅಧ್ಬುತ ಮಾಡಿದರು! ಹುಡುಗನ ಹೆಸರು ಕಮಾಲ್ ಎಂದು ಇಡಲಾಯ್ತು. ಭಗವಂತ ಕಬೀರರು ಅವನನ್ನು ತನ್ನ ಪುತ್ರನ ರೂಪದಲ್ಲಿ ತನ್ನ ಬಳಿ ಇಟ್ಟುಕೊಂಡರು. 

ಆದರೆ ಶೇಖ್ ತಕೀಯು ಇದನ್ನು ನೋಡಿಯೂ ಕಬೀರರ ಶಕ್ತಿಯನ್ನು ನಂಬಲಿಲ್ಲ ಮತ್ತು ಪುನಃ, ಹೇಳಿದ “ನಾನು ಅವನನ್ನು ಅಲ್ಲಾಹ್ ಎಂದು ಆಗ ನಂಬುವೆನು ಯಾವಾಗ ಅವನು ಮರಣ ಹೊಂದಿದ ನನ್ನ ಹುಡುಗಿಯನ್ನು ಪುನರ್ಜೀವಿತಗೊಳಿಸಬೇಕು ಅವಳನ್ನು ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ. ಬಹಷಃ ಆ ಹುಡುಗನ ಮೃತ್ಯುವಾಗಿರಲಿಲ್ಲ.” ದಿನಾಂಕ ನಿರ್ಧರಿಸಲಾಯ್ತು. ನಿರ್ಧಾರಿತ ತಿಥಿಯಂದು ಜನರು ಚಮತ್ಕಾರ ನೋಡಲು ತಲುಪಿದರು. ಭಗವಂತ ಕಬೀರರು ಆ ಹುಡುಗಿಯನ್ನು ಜೀವಿತ ಗೊಳಿಸಿದರು. ಎಲ್ಲರೂ ಹೇಳಿದರು ಕಮಾಲ್ ಮಾಡಿದರು! ಅದ್ಭುತ ಮಾಡಿದರು! “ಹುಡುಗಿಯ ಹೆಸರು ಕಮಾಲೀ ಎಂದು ಇಡಲಾಯ್ತು.” ಅವಳು ಶೇಖ್‌ತಕೀಯೊಡನೆ ಹೋಗಲು ನಿರಾಕರಿಸುತ್ತಾ ಹೇಳಿದಳು, “ಈಗ ನಾನು ನನ್ನ ನಿಜವಾದ ತಂದೆಯೊಡನೆ ಇರುವೆನು.” ಅವಳು ಒಂದುವರೆ ಗಂಟೆ ತನಕ ಸತ್ಸಂಗ ಮಾಡಿದಳು ಮತ್ತು ಜನರಿಗೆ ಹೇಳಿದಳೆನೆಂದರೆ ಇವರೇ ಅಲ್ಲಾಹೂ ಅಕ್ಬರ್. ಅವಳು ತನ್ನ ತಂದೆಗೆ ಹೇಳಿದಳು, “ಶೇಖ್‌ತಕೀ, ನೀನು ನಿನ್ನ ಕರ್ಮಗಳನ್ನು ಹಾಳುಮಾಡಿಕೊಳ್ಳಬೇಡ. ಅವನನ್ನು ಗುರುತಿಸು. ಅವನು ಸರ್ವೋಚ್ಚ ಭಗವಂತನು.” ಸಾವಿರಾರು ಜನರು ಕಬೀರ ಪರಮೇಶ್ವರರ ಶರಣ ಪಡೆದರು. ಈ ರೀತಿ ಕಬೀರ ಪರಮೇಶ್ವರರ ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿಯಾದಳು. ಭಗವಂತ ಕಬೀರರು ಮದುವೆ ಮಾಡಿಕೊಂಡಿರಲಿಲ್ಲ. 

■     ಸೇವು ನನ್ನು ಜೀವಿತ ಗೊಳಸಿದರು 

ಭಗವಂತ ಕಬೀರರು ಒಂದು ಬಾರಿ ಕಮಾಲ್ ಮತ್ತು ಶೇಖ್ ಫರೀದ್(ಕಬೀರರ ಒಬ್ಬ ಶಿಷ್ಯ)ನ ಜೊತೆಯಲ್ಲಿ ದಿಲ್ಲಿಯಲ್ಲಿ ತನ್ನ ಶಿಷ್ಯರಾದ ಸಮ್ಮನ್ (ತಂದೆ), ಸೇವು (ಪುತ್ರ) ಮತ್ತು ನೇಕೀ (ತಾಯಿ) ಬಳಿ ಹೋದರು. ಕುಟುಂಬ ಬಹಳ ಬಡತನದ್ದಾಗಿತ್ತು. ಆ ದಿನ ಅವರ ಬಳಿ ಆಹಾರ ಇರಲಿಲ್ಲ. ಅವರು (ಸಮ್ಮನ್ ಮತ್ತು ಸೇವು ) ಕಳ್ಳತನ ಮಾಡುವ ಯೋಜನೆ ಮಾಡಿದರು ರಾತ್ರಿಯಲ್ಲಿ ಹತ್ತಿರದ ಅಂಗಡಿಯಿಂದ 1 ಸೇರು ಹಿಟ್ಟು (1 ಸೇರು = 1 ಕಿಲೋ ಹೆಚ್ಚುಕಮ್ಮಿ). ಸೇವು ಒಳಗೆ ಹೋಗಿ ತನ್ನ ತಂದೆ ಸಮ್ಮನ್‌ಗೆ ಹಿಟ್ಟು ಕೊಟ್ಟನು. ಇದರ ಮಧ್ಯ ಅಂಗಡಿ ಮಾಲೀಕನಿಗೆ ಎಚ್ಚರವಾಯ್ತು. ಅವನು ಸೇವುನ ಕಾಲುಗಳನ್ನು ಹಿಡಿದನು. ಸಮ್ಮನ್ ಹಿಟ್ಟನ್ನು ತನ್ನ ಪತ್ನಿ ನೇಕೀಗೆ ಕೊಟ್ಟು ಬಿಟ್ಟ. ನೇಕೀ ಅವನಿಗೆ ಹೇಳಿದಳು ಏನೆಂದರೆ. ಸೇವುನ ತಲೆ ಕಡಿದು ಬಿಡು, ಇಲ್ಲದಿದ್ದರೆ ಅಂಗಡಿ ಮಾಲೀಕ ಗುರುದೇವರಿಗೆ ಶಿಕ್ಷೆ ವಿಧಿಸುವನು. ಸಮ್ಮನ್ ಹಾಗೆಯೇ ಮಾಡಿದನು. ಬೆಳಗಿನ ಹೊತ್ತಲ್ಲಿ ಅವರು ಪರಮೇಶ್ವರ ಕಬೀರರಿಗೆ ಹಾಗೂ ಬೇರೆ ಅಥಿತಿಗಳಿಗೆ ಊಟದ ಸಿದ್ದತೆ ಮಾಡಿದರು. ಭಗವಂತ ಕಬೀರರು ಸೇವುನನ್ನು ಕರೆದರು. ಸೇವು ಬಂದನು ಮತ್ತು ಊಟ ಮಾಡಲು ಪಂಕ್ತಿಯಲ್ಲಿ ಕುಳಿತನು. ಸಮ್ಮನ್ ಮತ್ತು ನೇಕೀ ಇದನ್ನು ನೋಡಿ ಹೌಹಾರಿದರು ಅಂದರೆ ಸೇವುನ ಕುತ್ತಿಗೆ ಮೇಲೆ ಕತ್ತರಿಸಿದಂತಹ ಯಾವ ಗುರುತು ಕೂಡಾ ಇರಲಿಲ್ಲ. ಇದರ ಬಳಿಕ ಆ ನಗರದಲ್ಲಿ ಸಮ್ಮನ್ ಬಹಳ ಶ್ರೀಮಂತನಾದನು.

■     ಲಕ್ಷಾಂತರ ಜನರ ಅಸಾಧ್ಯ ರೋಗಗಳನ್ನು ಗುಣಪಡಿಸಿದರು 

ಕಾಶಿಯಲ್ಲಿ ತನ್ನ 120 ವರ್ಷಗಳ ಧೀರ್ಘ ಪ್ರವಾಸದ ಸಮಯ, ಭಗವಂತ ಕಬೀರರು ಲಕ್ಷಾಂತರ ಜನರ ಅಸಾಧ್ಯ ರೋಗಗಳ ಜೊತೆಯಲ್ಲಿ ಬೇರೆ ಸಮಸ್ಯೆಗಳನ್ನೂ ಬಗೆಹರಿಸಿದರು. ಅವರು ತಮ್ಮ ಪ್ರೀತಿಯ ಆತ್ಮಗಳಿಗೆ ತನ್ನ ಆಧ್ಯಾತ್ಮಿಕ ಉಪದೇಶ ನೀಡಲು ಕಾಶೀಯ ಹೊರತು ಒಂದು ದಿನದಲ್ಲಿ ನೂರಾರು ಸ್ಥಾನಗಳಲ್ಲಿ ಪ್ರಕಟವಾಗುತ್ತಿದ್ದರು. ಏಕೆಂದರೆ ಆಗ ದೂರ ಸಂಚಾರದ ಯಾವ ಸಾಧನಗಳೂ ಇರಲಿಲ್ಲ. 

ಆ ಸಮಯ ಭಾರತದ ಒಟ್ಟು ಜನ ಸಂಖ್ಯೆ ಸರಿ ಸುಮಾರು 4 ಕೋಟಿಯಾಗಿತ್ತು. ಭಾರತದಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ, ಬಲೂಚಿಸ್ತಾನ, ಇರಾನ್ ಮತ್ತು ಇರಾಕ್ ಕೂಡ ಜೊತೆಯಲ್ಲಿದ್ದವು. ಅಸ್ಪೃಶ್ಯತೆ ಕೂಡ ಉತ್ತುಂಗದಲ್ಲಿತ್ತು. ಆ ಸಮಯ, ಒಬ್ಬ ನೇಕಾರ/ ಧಾಣಕ (ನೇಯ್ಗೆಯವ) ನಿಗೆ ಇಡೀ ಭಾರತದಲ್ಲಿ 64 ಲಕ್ಷ ಶಿಷ್ಯರಿದ್ದರು. ಇದರಿಂದ ತಿಳಿದು ಬರುತ್ತದೆ ಏನೆಂದರೆ ಅವನೊಬ್ಬ ಸಾಮಾನ್ಯ ಸಂತನಾಗಿರಲಿಲ್ಲ. ಅವರು ಸ್ವತಃ ಭಗವಂತನಾಗಿದ್ದರು. ಮತ್ತು, ನಮಗೆ ಅವರನ್ನು ಗುರುತಿಸಲಾಗಲಿಲ್ಲ. 

ಭಗವಂತ ಕಬೀರರು ಆಧ್ಯಾತ್ಮಿಕ ಜ್ಞಾನ ತಿಳಿಸುತ್ತಿದ್ದರು.

ಭಗವಂತ ಕಬೀರರು ನಮ್ಮ ಪವಿತ್ರ ಗ್ರಂಥಗಳ ಆಧಾರದ ಮೇಲೆ ಆಧ್ಯಾತ್ಮಿಕ ಜ್ಞಾನ ತಿಳಿಸುತ್ತಿದ್ದರು, ಕಬೀರರು ಹೇಳುತ್ತಿದ್ದರು “ಹಿಂದೂ ಮತ್ತು ಮುಸಲ್ಮಾನರು ಇಬ್ಬರೂ ಪೂಜೆಯ ಸರಿಯಾದ ವಿಧಿಯನ್ನು ಅಭ್ಯಾಸ ಮಾಡುತ್ತಿಲ್ಲ. ಗೀತೆ ದೇವತೆಗಳ ಪೂಜೆಯ ಪಕ್ಷದಲ್ಲಿಲ್ಲ, ಹಜರತ್ ಮೊಹಮ್ಮದ್ ಅವರು ಕೂಡಾ ಎಂದಿಗೂ ಮಾಂಸ ತಿಂದಿಲ್ಲ. ಈ ಅಜ್ಞಾನಿ ಧರ್ಮ ಗುರುಗಳು ನಿಮ್ಮ ದಾರಿ ತಪ್ಪಿಸುತ್ತಿದ್ದಾರೆ.” ಆದರೆ ಆ ಸಮಯ ನಾವು ವಿದ್ಯಾವಂತರಾಗಿರಲಿಲ್ಲ. ಆ ಸಮಯ ಕೇವಲ ಬ್ರಾಹ್ಮಣರಿಗೆ ಶಿಕ್ಷಣ ಪ್ರಾಪ್ತಿಸಲು ಅನುಮತಿ ಇತ್ತು. ನಕಲೀ ಧರ್ಮಗುರು ಜನರನ್ನು ಇದನ್ನು ಹೇಳಿ ದಾರಿ ತಪ್ಪಿಸುತ್ತಿದ್ದರು. ಏನೆಂದರೆ ಕಬೀರರು ಅಶಿಕ್ಷಿತರು. ಅವನಿಗೆ ಪವಿತ್ರ ಪುಸ್ತಕಗಳ ಜ್ಞಾನ ವಿರಲು ಸಾಧ್ಯವಿಲ್ಲ ಏಕೆಂದರೆ ಅವನು ಅವುಗಳನ್ನು ಓದಿಲ್ಲ. ಅವನು ಸುಳ್ಳುಗಾರ. “ಅವರ ಮೋಸಕ್ಕೆ ಒಳಗಾಗಿ ನಾವು ಕಬೀರ ಪರಮೇಶ್ವರರ ಶತ್ರುಗಳಾದೆವು. ಆ ಸಮಯ ನಕಲೀ ಧರ್ಮಗುರುಗಳ ಕಾರಣ ಜನರಲ್ಲಿ ಕಬೀರ ಪರಮೇಶ್ವರನ ಹೆಸರಿನ ಪ್ರತಿ ಕೂಡಾ ದ್ವೇಷ ಉತ್ಪನ್ನವಾಗಿತ್ತು. 

ಕಬೀರ ಪರಮೇಶ್ವರರ ಮೂಲಕ ಹೇಳಿದಂಥಹ ಆಧ್ಯಾತ್ಮಿಕ ಜ್ಞಾನವನ್ನು ಅರಿಯದೇ ಜನರು ಅವರ ಮೇಲೆ ಕಲ್ಲು ಎಸೆಯ ತೊಡಗಿದ್ದರು, ಹಿಂದೂ ಧಾರ್ಮಿಕ ಮುಖಂಡರು ಇದನ್ನು ಹೇಳಿ ಹಿಂದೂಗಳ ದಾರಿ ತಪ್ಪಿಸುತ್ತಿದ್ದರು. ಅಂದರೆ “ಅವನು ನಮ್ಮ ಧರ್ಮದ ಆಲೋಚನೆ ಮಾಡುತ್ತಾನೆ. ಅವನು ನಮ್ಮ ತ್ರೀಮೂರ್ತಿಯರ ಆಲೋಚನೆ ಮಾಡುತ್ತಾನೆ.” ಮುಸ್ಲಿಂ ಧಾರ್ಮಿಕ ಮುಖಂಡರು ಹೇಳುತ್ತಿದ್ದರು, “ಅವನು ನಮ್ಮ ಧರ್ಮದ ಆಲೋಚನೆ ಮಾಡುತ್ತಾನೆ. ಅವನು ತನ್ನನ್ನು ಅಲ್ಲಾಹು ಎನ್ನುತ್ತಾನೆ.” ಅವರು ಮತ್ತು ದಾರಿತಪ್ಪಿದ ಜನರು ಕಬೀರ ಸಾಹೇಬರಿಗೆ ಪ್ರತಿಯೊಂದು ರೀತಿಯಲ್ಲಿ ಕಷ್ಟ ನೀಡುತ್ತಿದ್ದರು. 

ಶೇಖ್‌ತಕೀಯು ಕಬೀರ ಪರಮೇಶ್ವರನನ್ನು ಕೊಲ್ಲಲು 52 ಬಾರಿ ಪ್ರಯತ್ನ ಮಾಡಿದನು.

ಶೇಖ್‌ತಕೀ ಆ ಸಮಯ ಭಾರತದ ಎಲ್ಲಾ ಮುಸಲ್ಮಾನರ ಮುಖಂಡನಿದ್ದನು. ಅವನು ಕಬೀರ ಪರಮೇಶ್ವರನನ್ನು ಕೊಲ್ಲಲು 52 ಬಾರಿ ಪ್ರಯತ್ನಿಸಿದನು. ಅವನು ಕಬೀರರನ್ನು ಒಂದು ನೀರಿಲ್ಲದ ಬಾವಿಯಲ್ಲಿ ಹಾಕಲಾಗಿತ್ತು. ಮೇಲಿಂದ ಭಾವಿಗೆ ಮಣ್ಣು, ಕಟ್ಟಿಗೆ, ಗೊಬ್ಬರ, ಗಿಡ ಗಂಟಿ ಇತ್ಯಾದಿಗಳಿಂದ ತುಂಬಿದ್ದರು. ಶೇಖ್‌ತಕೀ, ಮತ್ತೆ ಸಿಕಂದರ್ ಲೋಧಿಗೆ ಸುದ್ದಿ ನೀಡಲು ಹೋದರು ಕಬೀರರು ಸತ್ತು ಹೋದರೆಂದು. ಆದರೆ, ಕಬೀರರನ್ನು ಸಿಕಂದರ್ ಲೋಧಿಯೊಡನೆ ಕುಳಿತಿರುವುದನ್ನು ಕಂಡನು. ಶೇಖ್‌ತಕೀ ರಾಕ್ಷಸ ಇಲ್ಲಿಯವರೆಗೂ ನಿಲ್ಲಲಿಲ್ಲ. 

ಅವನು ಕಬೀರ ಪರಮೇಶ್ವರರನ್ನು ಕುದಿಯುವ ಎಣ್ಣೆಯಿಂದ ತುಂಬಿದ ಪಾತ್ರೆಯಲ್ಲಿ ಕುಳಿತು ಕೊಳ್ಳಲು ಹೇಳಿದ. ಭಗವಂತ ಕಬೀರರು ಕುದಿಯುತ್ತಿರುವ ಎಣ್ಣೆಯ ಪಾತ್ರೆಯಲ್ಲಿಯೂ ಆರಾಮವಾಗಿ ಕುಳಿತಿದ್ದರು. ಅವರಿಗೇನು ಆಗಲಿಲ್ಲ. ಶೇಖ್‌ತಕೀ ಒಂದು ಬಾರಿ ರಾತ್ರಿಯಲ್ಲಿ ಕೆಲವು ದುಷ್ಟ ಜನರನ್ನು ಕಬೀರ ಪರಮೇಶ್ವರರ ಕುಟೀರದಲ್ಲಿ ಕರೆದೊಯ್ದನು. ಅವರು ತಮ್ಮ ಕತ್ತಿಗಳಿಂದ ಕಬೀರ ಪರಮೇಶ್ವರರ ಮೇಲೆ 6,7 ಬಾರಿ ದಾಳಿ ಮಾಡಿದರು. ಪ್ರತಿ ಬಾರಿ ಭಗವಂತ ಕಬೀರರ ಶರೀರದಿಂದ ಕತ್ತಿ ಹೊರಟು ಬರುತ್ತಿತ್ತು. ಹೀಗೆ ಅನ್ನಿಸುತ್ತಿತ್ತೆಂದರೆ ಹತ್ತಿಗಿಂತ ಮೆದು ಯಾವುದೋ ವಸ್ತುವಿಗೆ ಮುಟ್ಟುತ್ತಿರುವಂತೆ, ಅವರ ಶರೀರ ಪೂರ್ತಿ ಮೂಳೆ ರಹಿತವಾಗಿತ್ತು. ಅವರು ಸತ್ತಿದ್ದಾರೆಂದು ತಿಳಿದು ಗೂಂಡಾಗಳು ಹಿಂದೆ ಸರಿದರು. ಕಬೀರ ಪರಮೇಶ್ವರರು ಎದ್ದು ನಿಂತು ಹೇಳಿದರು, “ಶೇಖ್‌ತಕೀ ಹೀಗೆಯೇ ಹೋಗದಿರು, ಸ್ವಲ್ಪ ನೀರು ತೆಗೆದುಕೋ.” ಎಲ್ಲರೂ ಅವರನ್ನು ಭೂತವೆಂದು ತಿಳಿದು ಓಡಿ ಹೋದರು. ಗೂಂಡಾಗಳಿಗೆ ಜ್ವರ ಬಂದಿತು. ಆದರೂ ಭಗವಂತ ಕಬೀರರು ಅವರನ್ನು ಗುಣಪಡಿಸಿದರು. 

ಕಬೀರರನ್ನು ಒಂದು ಮದ ಎರಿದ ಆನೆಯ ಮುಂದೆ ನಿಲ್ಲಿಸಲಾಯ್ತು, ಅದು ನಶೆಯಲ್ಲಿತ್ತು. ಭಗವಂತ ಕಬೀರರು ಅದಕ್ಕೊಂದು ಸಿಂಹದ ರೂಪ ತೋರಿಸಿದರು. ಸಿಂಹವನ್ನು ನೋಡಿ ಆನೆ ಕಿರುಚಲಾರಂಭಿಸಿತು ಮತ್ತು ಹೆದರಿ ಓಡಿ ಹೋಯ್ತು. 

ಕಬೀರ ಪರಮೇಶ್ವರರ ಕೊರಳಲ್ಲಿ ಒಂದು ಭಾರವಾದ ಕಲ್ಲನ್ನು ಕಟ್ಟಿ ಗಂಗಾ ನದಿಯಲ್ಲಿ ತಳ್ಳಲಾಗಿತ್ತು. ಹಗ್ಗ ತುಂಡಾಯ್ತು. ಕಲ್ಲು ಮುಳುಗಿತು. ಭಗವಂತ ಕಬೀರರು ನದಿಯ ಮೇಲೆ ಕುಳಿತಿದ್ದರು. ನದಿ ಕಬೀರ ಸಾಹೇಬರ ಕಾಲುಗಳನ್ನು ಸ್ಪರ್ಶಿಸುತ್ತಿತ್ತು. ಅದರನಂತರ ಕಲ್ಲುಗಳಿಂದ ಹೊಡೆಯ ತೊಡಗಿದರು. 12 ಗಂಟೆಗಳ ತನಕ ಗುಂಡು ಹಾರಿಸಲಾಯ್ತ. ಆದರೆ, ಅವಿನಾಶಿಯನ್ನು ಯಾರು ಹೊಡೆಯಬಲ್ಲರು? ಇಷ್ಟು ಬಾರಿ ಹೊಡೆಯುವ ಪ್ರಯತ್ನ ಮಾಡಿದ ಬಳಿಕವೂ ಪರಮೇಶ್ವರ ಕಬೀರರು ಮರಣ ಹೊಂದಲಿಲ್ಲ. ಅವರು ವಾಸ್ತವಿಕ ಶಾಶ್ವತ ಈಶ್ವರರಾಗಿದ್ದಾರೆ. 

ಕಲಿಯುಗದ 5505 ವರ್ಷಗಳು 1997ರಲ್ಲಿ ಪೂರ್ಣ ಗೊಂಡವು

ಭಗವಂತ ಕಬೀರರು ತನ್ನ ನಿಜವಾದ ಆಧ್ಯಾತ್ಮಿಕ ಜ್ಞಾನ ಮತ್ತು ಪೂಜೆಯ ವಿಧಿಯನ್ನು ತನ್ನ ಪ್ರೀತಿಯ ಆತ್ಮಗಳ ತನಕ ತಲುಪಿಸುವುದಕ್ಕಾಗಿ ಕಠಿಣ ಸಂಘರ್ಷ ಮಾಡಿದರು. ಅವರು ತಿಳಿದಿದ್ದರು, ಇಂದು ಸಮಾಜ ಅವಿದ್ಯಾವಂತನಾಗಿದ್ದ ಕಾರಣ ಅವರನ್ನು ಗುರುತಿಸುತ್ತಿಲ್ಲ. ಇದಕ್ಕಾಗಿ ಕಬೀರ ಪರಮೇಶ್ವರರು ಸರಿ ಸುಮಾರು 600 ವರ್ಷ ಮೊದಲು ಧರ್ಮದಾಸರಿಗೆ ಹೇಳಿದ್ದರು, “ಕಲಿಯುಗದ 5505 ವರ್ಷ (1997ಇಸವಿ)ಗಳಾದ ಬಳಿಕ ಸಮಾಜ ಶಿಕ್ಷಿತಗೊಳ್ಳುವುದು. ನಾನು ಮತ್ತೆ ಬರುವೆನು ಮತ್ತು ಆ ಸಮಯ ಇಡೀ ಪ್ರಪಂಚ ನನ್ನ ಆಶ್ರಯ ಪಡೆಯುವುದು. ಆಗ ಇಡೀ ವಿಶ್ವ ಸ್ವತಂತ್ರಗೊಳ್ಳುವುದು. ಎಲ್ಲಿಯವರೆಗೆ ಆ ಸಮಯ ಬರದು, ನನ್ನ ಶಬ್ದಗಳು ನಿರಾಧಾರವೆನಿಸುವುದು.” 

ಪರಮೇಶ್ವರ ಕಬೀರರು ಮಗಹರ್‌ದಲ್ಲಿ ಶರೀರ ತ್ಯಜಿಸಿದರು.

ಯಾವಾಗ ತನ್ನ ಸನಾತನ ಸ್ಥಾನಕ್ಕೆ ಮರಳಿ ಹೋಗುವ ಸಮಯ, ಬಂದಾಗ ಕಬೀರ ಪರಮೇಶ್ವರರು ಈ ನಶ್ವರ ಪ್ರಪಂಚವನ್ನು ಬಿಡುವುದಕ್ಕಾಗಿ ಮಗಹರ್‌ವನ್ನು ಆರಿಸಿದರು ಏಕೆಂದರೆ ಆ ಸಮಯ ಧರ್ಮಗುರುಗಳ ಮೂಲಕ ಒಂದು ವಿಶೇಷ ವದಂತಿ ಹರಡಿಸಲಾಗಿತ್ತು ಏನೆಂದರೆ, “ಮಗಹರ್‌ದಲ್ಲಿ ಸಾಯುವವರು ಕತ್ತೆಯಾಗುತ್ತಾರೆ ಮತ್ತು ಕಾಶೀಯಲ್ಲಿ ಸಾಯುವವರು ಸ್ವರ್ಗಕ್ಕೆ ಹೋಗುತ್ತಾರೆ.” 120 ವರ್ಷದ ಆಯಸ್ಸಿನಲ್ಲಿ, ಅವರು ಕಾಶೀಯಿಂದ ಮಗಹರ್‌ಕ್ಕೆ ತಲುಪುವುದಕ್ಕಾಗಿ 3ದಿನಗಳ ತನಕ ಕಾಲ್ನಡಿಗೆಯಲ್ಲಿ ಹೋದರು, ಇದನ್ನು ತೋರಿಸುತ್ತಾ ಅಂದರೆ ಒಬ್ಬ ನಿಜವಾದ ಉಪಾಸಕನಿಗೆ ವೃದ್ಧಾಪ್ಯದಲ್ಲೂ ಕಷ್ಟವಾಗುವುದಿಲ್ಲ.

ಅವರ ಶಿಷ್ಯ ಕಾಶೀಯ ರಾಜ ಬೀರ್‌ದೇವ ಸಿಂಹ್ ಬಘೆಲನು ಸಾವಿರಾರು ಸಶಸ್ತ್ರ ಸೈನಿಕರು ಮತ್ತು ದರ್ಶಕರ ಸಹಿತ ಕಬೀರರನ್ನು ಹಿಂಬಾಲಿಸಿದನು. ಮಗಹರ್‌ದ ರಾಜ ಬಿಜಲೀ ಖಾಂ ಪಠಾನ್, ಅವರು ಕೂಡಾ ಕಬೀರ ಪರಮೇಶ್ವರರ ಶಿಷ್ಯರಾಗಿದ್ದರು, ಅವರು ಸಾಧ್ಯವಾದಷ್ಟು ವ್ಯವಸ್ಥೆಯನ್ನು ಮಾಡಿದ್ದರು. ಹೊರಡುವ ಮುನ್ನವೇ ಭಗವಂತ ಕಬೀರರು ಅಲ್ಲಿ ಒಣಗಿ ಹೋದ ಆಮೀ ನದಿಯಲ್ಲಿ ಜಲ ಪ್ರವಾಹಿತಗೊಳಿಸಿದ್ದರು.

ಕಬೀರು ನೋಡಿದರೇನೆಂದರೆ ಹಿಂದೂ ರಾಜಾ ಬೀರ್‌ದೇವ ಸಿಂಹ್ ಬಘೆಲ್ ಮತ್ತು ಮುಸ್ಲಿಂ ರಾಜ ಬಿಜಲೀ ಖಾನ್ ಪಠಾನ್ ಇಬ್ಬರೂ ತಮ್ಮ ತಮ್ಮ ಸೇನೆ ಸಿದ್ಧಪಡಿಸಿದ್ದರು. ಕಬೀರರು ಅವರಿಗೆ ಕೇಳಿದರು ಏನೆಂದರೆ ನೀವು ನಿಮ್ಮ ಸೈನ್ಯಗಳನ್ನು ಜೊತೆಯಲ್ಲಿ ಏಕೆ ತಂದಿರುವಿರಿ? ಬೀರ್‌ದೇವ ಸಿಂಹ್ ಬಘೆಲ್ ಮತ್ತು ಬಿಜಲೀ ಖಾನ್ ಪಠಾನ ಇಬ್ಬರೂ ತಲೆ ಬಾಗಿಸಿದರು. ಬೇರೆ ಹಿಂದೂ ಮತ್ತು ಮುಸ್ಲಿಂ ಸೈನಿಕರು ತಮ್ಮ ಉದ್ದೇಶ ವ್ಯಕ್ತಪಡಿಸಿದರು, ಮತ್ತು ಹೇಳಿದರು “ನೀವು ನಮ್ಮ ಗುರುಗಳು. ನಾವು ನಿಮ್ಮ ಅಂತ್ಯ ಸಂಸ್ಕಾರ ನಮ್ಮ ಧರ್ಮದ ಅನುಸಾರ ಮಾಡುವೆವು. ಒಂದೊಮ್ಮೆ ಅವರು ಒಪ್ಪದಿದ್ದರೆ ನಮ್ಮ ಮಧ್ಯೆ ಯುದ್ಧವಾಗುವುದು. ಭಗವಂತ ಕಬೀರರು ಹೇಳಿದರು, “ನಾನೇನು ನಿಮಗೆ 120 ವರ್ಷಗಳ ತನಕ ಇದನ್ನೇ ಕಲಿಸಿರುವೆ ಏನು? ನೀವಿಬ್ಬರು ಹಿಂದೂ ಮತ್ತು ಮುಸ್ಲಿಂ ಈಗಲೂ ನಿಮ್ಮನ್ನು ಬೇರೆಯವರೆಂದು ತಿಳಿಯುವಿರೇನು!

ಭಗವಂತ ಕಬೀರರು ಸ್ವಲ್ಪ ಸಮಯಕ್ಕಾಗಿ ಅಲ್ಲಿ ಹಾಜರಿದ್ದವರೆಲ್ಲರಿಗೂ ಆಧ್ಯಾತ್ಮಿಕ ಉಪದೇಶ ನೀಡಿದರು. ಭಗವಂತ ಕಬೀರರು ಬಲ್ಲವರಾಗಿದ್ದರೇನೆಂದರೆ ಅವರು ತಮ್ಮ ಮನಸ್ಸನ್ನು ಪರಿವರ್ತಿಸಿಲ್ಲ, ಸುಮ್ಮನೆ ಮೇಲೆ ಮನಸ್ಸಿಂದ ಅವರು “ಹೌದು” ಎನ್ನುತ್ತಿದ್ದರು, ಆದರೆ ಅವರು ತಮ್ಮ ಮನದಾಳದಿಂದ “ಹೌದು” ಎನ್ನುತ್ತಿರಲಿಲ್ಲ.

ಸತ್ಯಲೋಕಕ್ಕೆ ಹೋಗುವ ಮುನ್ನ ಕಬೀರರು ಒಂದು ಚಾದರದ ಮೇಲೆ ಮಲಗಿದರು ಮತ್ತು ತನಗೆ ತಾನು ಇನ್ನೊಂದು ಚಾದರದಿಂದ ಮುಚ್ಚಿದರು. ಭಕ್ತರು ಶ್ರದ್ಧೆಯಿಂದ ಚಾದರದ ಮೇಲೆ ಹೂವು ಹಾಕಿದರು. ಸ್ವಲ್ಪ ಹೊತ್ತಿನ ಬಳಿಕ ಕಬೀರ ಪರಮೇಶ್ವರರು ಮೇಲಿಂದ ಹೇಳಿದರು, ಚಾದರ ತೆಗೆಯಿರಿ. ನೀವು ನನ್ನ ಶರೀರವನ್ನು ಪಡೆಯುವುದಿಲ್ಲ. ಅಲ್ಲಿ ಏನೇ ಸಿಗಲಿ, ಅದನ್ನು ಎರಡು ಭಾಗದಲ್ಲಿ ಹಂಚಿಕೊಳ್ಳಿ, ಆದರೆ ನಿಮ್ಮೊಳಗೆ ಯುದ್ಧಮಾಡ ಬೇಡಿ.” 

ಅವರು ಮೇಲಿನ ಕಡೆಗೆ ನೋಡಿದಾಗ, ಒಂದು ಮಿನುಗುವ ಬೆಳಕು ಮೇಲೆ ಹೋಗುತ್ತಿತ್ತು. ಅವರು ಚಾದರ ಎತ್ತಿದಾಗ ಅವರಿಗೆ ಕಬೀರ ಪರಮೇಶ್ವರರ ಶರೀರದ ಆಕಾರದಲ್ಲಿ ಹೂಗಳು ಸಿಕ್ಕಿದವು. ಅವರೆಲ್ಲರೂ ಅಳತೊಡಗಿದರು, ಮತ್ತು ಹೇಳ ತೊಡಗಿದರೇನೆಂದರೆ ನಾವು ನಮ್ಮ ಈಶ್ವರನಿಗೆ ಅಂತಿಮ ಸಮಯದಲ್ಲೂ ಸುಖ ನೀಡಲಿಲ್ಲ. ಅವರು ವಾಸ್ತವದಲ್ಲಿ ಭಗವಂತರಾಗಿದ್ದರು. ನಮಗೆ ಅವರನ್ನು ಗುರುತಿಸಲಾಗಲಿಲ್ಲ, ಹಿಂದೂ-ಮುಸಲ್ಮಾನರು ಸ್ವಲ್ಪ ಹೊತ್ತು ಮುಂಚೆ ಒಬ್ಬರಿಗೊಬ್ಬರು ಕಾದಾಡಲು ಸಿದ್ಧರಾಗಿದ್ದರು, ತಾಯಿ-ತಂದೆಯ ಮರಣದ ನಂತರ ಅತ್ತು ವಿಳಾಪಿಸುವ ಸೋದರ-ಸೋದರಿಯರಂತೆ ಒಬ್ಬರಿಗೊಬ್ಬರು ಆಲಿಂಗಿಸಿ ಕೊಂಡು ಅಳುತ್ತಿದ್ದರು. ಅವರು ಹೂಗಳನ್ನು 2 ಭಾಗಗಳಲ್ಲಿ ಹಂಚಿಕೊಂಡರು. ಇಂದು ಅದೇ ಸ್ಥಾನದಲ್ಲಿ ಮಗಹರ್‌ದಲ್ಲಿ ಸ್ಮಾರಕವಿದೆ. ಒಂದೆಡೆ ಭಗವಂತ ಕಬೀರರ ಹಿಂದೂ ಮಂದಿರವಿದೆ ಮತ್ತೊಂದೆಡೆ ಮುಸ್ಲಿಂ ಮಸೀದಿ ಇದೆ. ಮಧ್ಯದಲ್ಲಿ ಒಂದೇ ಗೇಟ್ ಇದೆ. ಅಲ್ಲಿ ಯಾರೂ ಕೂಡಾ ಸ್ಮಾರಕದ ಬಳಿ ಹೋಗಬಹುದಾಗಿದೆ. ಈ ರೀತಿ ಕಬೀರ ಪರಮೇಶ್ವರರು ಹಿಂದೂ ಮುಸ್ಲೀಮರ ಮಧ್ಯ ಯುದ್ಧವಾಗುವುದನ್ನು ತಡೆದರು ಮತ್ತು ಇಬ್ಬರಿಗೂ ಸಹೋದರತ್ವದ ನೀತಿಯನ್ನು ನೀಡಿದರು. 

ಅನ್ಯ ಸಂಪ್ರದಾಯದವರೂ ಕಬೀರ ಪ್ರಕಟ ದಿವಸ ಆಚರಿಸುತ್ತಾರೆ

ಕಬೀರ್ ಸಾಗರ್ ಅಧ್ಯಾಯ ಕಬೀರ್ ಬಾಣಿಯಲ್ಲಿ ಪುಟ 136-137 ರಲ್ಲಿ ಹನ್ನೆರಡು ಕಬೀರ ಪಂಥಗಳ ವರ್ಣನೆ ಇದೆ. ಭಗವಂತ ಕಬೀರರು ಧರ್ಮದಾಸರಿಗೆ ಹೇಳಿದ್ದರೇನೆಂದರೆ ಆ 12 ಸಂಪ್ರದಾಯಗಳಲ್ಲಿ ಕೇವಲ ಕಾಲನದೇ ಆದೇಶವಾಗುವುದು. ಅವರು ಕಬೀರರ ಹೆಸರನ್ನು ಹೇಳುತ್ತಾರೆ ಮತ್ತು ಸತ್ಯಲೋಕದ ಮಹಿಮೆಯನ್ನು ಹೇಳುತ್ತಾರೆ, ಆದರೆ ಕಾಲನದೆ ಪೂಜೆ ಮಾಡುತ್ತಾರೆ. ಯಾರಿಂದ ಈ ಪಂಥಗಳ ಉತ್ಪತ್ತಿಯಾಗುವುದೋ ಅವರು ಪವಿತ್ರ ಆತ್ಮಗಳಾಗಿರುವರು ಆದರೆ ಅವರ ಮುಂಬರುವ ಪೀಳಿಗೆಗಳು ಕಾಲನಿಂದ ಪ್ರೇರಿತವಾಗುವುವು. ಅಧ್ಯಾಯ ಕಬೀರ್ ಚರಿತ್ರ ಬೋಧ್, ಪುಟ ಸಂಖ್ಯೆ 1870 ರಲ್ಲಿ 12 ಪಂಥಗಳ ಹೆಸರು ಬರೆಯಲಾಗಿದೆ. ನಂತರ ಕಬೀರ ಬಾಣಿ ಪುಟ ಸಂಖ್ಯೆ 137ರಲ್ಲಿ ಬರೆದಿದೆಯೇನೆಂದರೆ 12ನೇ ಪಂಥದಲ್ಲಿ ಕಬೀರ ಪರಮಾತ್ಮ ಸ್ವತಃ ಬಂದು ಅನ್ಯ ಎಲ್ಲಾ ಪಂಥಗಳ ಅಂತ್ಯಮಾಡುವರು. ನಂತರ ಪುಟ 134ರಲ್ಲಿ “ವಂಶ್ ಪ್ರಸಾರ್” ಶಿರ್ಷಿಕೆಯ ಅನುಸಾರ ಕಬೀರ ಪರಮೇಶ್ವರರು ಹೇಳುತ್ತಾರೆ ಏನೆಂದರೆ 13ನೇ ವಂಶ ಜ್ಞಾನದ ಎಲ್ಲಾ ಅಂಧಕಾರವನ್ನು ದೂರಗೊಳಿಸುವರು. ಆ 13ನೇ ಪಂಥದ ಆರಂಭ ಸಂತ ರಾಮ್‌ಪಾಲ್‌ರು ಮಾಡಿದ್ದಾರೆ. ಅವರ ವಂಶದ ಉತ್ಪತ್ತಿ 12ನೇ ಕಬೀರ ಪಂಥದಿಂದಾಗಿದೆ, ಅದು ಸಂತ ಗರೀಬ್ ದಾಸರ ಪಂಥವಾಗಿದೆ. ಸದ್ಗುರು ರಾಮ್‌ಪಾಲ್ ಮಹಾರಾಜರ, ಗುರುದೇವರಾದ ಸ್ವಾಮಿ ರಾಮದೇವಾನಂದರು ಸಂತ ರಾಮ್‌ಪಾಲ್ ಅವರಿಗೆ ಗುರುಪದವಿಯ ಜವಾಬ್ದಾರಿ ಒಪ್ಪಿಸುತ್ತಾ ಹೇಳಿದರು, “ನಿಮ್ಮ ಸಮಾನ ಪ್ರಪಂಚದಲ್ಲಿ ಯಾವ ಸಂತ ಇರಲಾರನು.” ಅವರು ಕಬೀರ ಪರಮಾತ್ಮನ ಅವತಾರವೇ ಆಗಿರುವರು. 1997 ರಲ್ಲಿ ಪರಮಾತ್ಮ ಕಬೀರರು ಸಂತ ರಾಮ್‌ಪಾಲ್‌ರಿಗೆ ಬೇಟಿಯಾಗಿದ್ದರು ಮತ್ತು ಸತ್ಯನಾಮ ಮತ್ತು ಸಾರನಾಮದ ರಹಸ್ಯ ಪ್ರಕಟಗೊಳಿಸುವ ಆದೇಶ ನೀಡಿದರು. ಆ ಸಮಯ ಬಂದಿದೆ ಯಾವಾಗ ಇಡೀ ಪ್ರಪಂಚ ಅವರ ಆಶ್ರಯವನ್ನು ಪಡೆಯುವುದು. 

ಇಲ್ಲಿ ಇದರ ವರ್ಣನೆ ಮಾಡುವ ಉದ್ದೇಶ ಇದಾಗಿದೆ ಅಂದರೆ ಇನ್ನೂ 12 ಕಬೀರ ಪಂಥಗಳಿವೆ ಅವು ಕಬೀರ ಸಾಹೇಬರ ಪ್ರಕಟ ದಿವಸ ಆಚರಿಸುತ್ತವೆ. ಇಡೀ ಭಾರತದಲ್ಲಿ ಬೇರೆ ಕೆಲವು ಇನ್ನೂ ಕಬೀರ ಪಂಥಗಳಿವೆ, ಅವು ಕಾಲನ ಪ್ರೇರಣೆಯಿಂದ ಉತ್ಪನ್ನವಾಗಿವೆ. ಅವೆಲ್ಲವೂ ಕಬೀರ ಸಾಹೇಬರ ಪ್ರಕಟ ದಿವಸವನ್ನು ಆಚರಿಸುತ್ತವೆ. ಆದರೆ ಕೇವಲ ಕಬೀರರ ಮೂಲಕ ಕಳುಹಿಸಲ್ಪಟ್ಟ. ಅಧಿಕೃತ ಸಂತ (ಕಬೀರ್ ಬಾನೀ ಅಧ್ಯಾಯದ ಅನುಸಾರ 13ನೇ ಪಂಥ)ನೇ ಪ್ರಕಟ ದಿವಸದ ಸರಿಯಾದ ವಿಧಿ ತಿಳಿಸುವರು.

ಕಬೀರ ಪ್ರಕಟ ದಿವಸ ಹೇಗೆ ಆಚರಿಸಲಾಗುತ್ತದೆ?

ಸಂತ ಗರೀಬ್ ದಾಸರ ಪವಿತ್ರ ಸದ್ಗ್ರಂಥ್ ಸಾಹಿಬದ 5-7 ದಿವಸದ ಮಾರ್ಗವನ್ನು ಧಾರಣೆ ಮಾಡುತ್ತಾ ಸಂತ ರಾಮ್‌ಪಾಲ್‌ರ ಆಧ್ಯಾತ್ಮಿಕ ಪ್ರವಚನ ನೀಡಿ ಈ ಸಂದರ್ಭವನ್ನು ಆಚರಿಸುತ್ತಾರೆ. ಹೀಗೆ ಅವರು ಆರಂಭದಿಂದಲೇ ಮಾಡುತ್ತಾ ಬಂದಿದ್ದಾರೆ. ಇದಲ್ಲದೆ ವರದಕ್ಷಿಣೆ ಮುಕ್ತ ವಿವಾಹ, ರಕ್ತದಾನ ಮತ್ತು ಶರೀರ ದಾನ ಶಿಬಿರ, ಅನ್ನ ದಾಸೋಹ, ನಿಜವಾದ ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜಾಗರೂಕತೆ ಮತ್ತು ಆಧ್ಯಾತ್ಮಿಕ ಪಾಖಂಡದ ವಿರುದ್ಧ ಜಾಗರೂಕತೆ ಪ್ರಕಟ ದಿವಸದ ಮೆನ್ ಫೋಕಸ್ ಆಗಿರುತ್ತದೆ. 

  • ವರದಕ್ಷಿಣೆ ಮುಕ್ತ ವಿವಾಹ ರಮೈಣೀ 

ನೂರಾರು ವರದಕ್ಷಿಣೆ ಮುಕ್ತ ವಿವಾಹಗಳು ರಮೈಣೀಯಲ್ಲಿ ಬಹಳ ಸರಳತೆಯಿಂದ ಸಂಪನ್ನವಾಗುತ್ತವೆ. ವಿಭಿನ್ನ ಧರ್ಮಗಳ, ರಾಷ್ಟçಗಳ ಮತ್ತು ಜಾತಿಗಳ ಜೋಡಿಗಳು ಒಂದು ಪೈಸೆ ನೀಡಿದೆ, ತೆಗೆದು ಕೊಳ್ಳದೆ ವಿವಾಹ ಮಾಡಿಕೊಳ್ಳುತ್ತಾರೆ. ವಧು-ವರ ಬಹಳ ಸಾಧಾರಣ ವಸ್ತ್ರ ಧರಿಸಿ ವಿವಾಹವಾಗುತ್ತಾರೆ. ವಧು ಮತ್ತು ವರನೊಡನೆ ಬರುವ ಅತಿಥಿಗಳಿಗೆ ಅನ್ನ ದಾಸೋಹದಲ್ಲಿಯೇ ಊಟ ತಿನ್ನಿಸಲಾಗುತ್ತದೆ. ರಮೈಣೀ ವಿವಾಹ ಮಾಡುವ ಉದ್ದೇಶ ವಿವಾಹದಲ್ಲಿ ವರದಕ್ಷಿಣೆ ಮತ್ತು ದುಂದುವೆಚ್ಚದಂತಹ ಸಾಮಾಜಿಕ ಪಿಡುಗುಗಳನ್ನು ಕೊನೆಗೊಳಿಸುವಂಥದ್ದಾಗಿದೆ. 

  •  ರಕ್ತ ದಾನ ಮತ್ತು ಶರೀರದಾನ ಶಿಬಿರ 

ಪ್ರತಿ ವರ್ಷ ಕಬೀರ ಸಾಹೇಬರ ಪ್ರಕಟ ದಿವಸದಂದು ರಕ್ತದಾನ ಮತ್ತು ಶರೀರ ದಾನ ಶಿಬಿರ ಆಯೋಜಿಸಲಾಗುತ್ತದೆ. ಸಾವಿರಾರು ಜನರು ಸ್ವಇಚ್ಛೆಯಿಂದ ರಕ್ತದಾನ ಮಾಡುತ್ತಾರೆ ಮತ್ತು ಮಾನವತೆಯ ಕಲ್ಯಾಣಕ್ಕಾಗಿ ಮೃತ್ಯು ಬಳಿಕ ಶರೀರದಾನ ಮಾಡುವುದಕ್ಕಾಗಿ ನೋಂದಣಿ ಮಾಡುತ್ತಾರೆ. 

  • ಉಚಿತವಾಗಿ ಭೋಜನ ನೀಡುವುದು 

ಸಂತ ರಾಮ್‌ಪಾಲ್ ಮಹಾರಾಜರ ಮೂಲಕ ಆಯೋಜಿತ ಕಬೀರ ಸಾಹೇಬ ಪ್ರಕಟ ದಿವಸದಲ್ಲಿ ಅನ್ನ ದಾಸೋಹದಲ್ಲಿ ಎಲ್ಲಾ ಆಹಾರವನ್ನು ಶುದ್ಧ ದೇಶಿ ತುಪ್ಪವನ್ನು ಉಪಯೋಗಿಸಿ ಮಾಡಲಾಗುತ್ತದೆ. ಭೋಜನದಲ್ಲಿ ಸ್ವಲ್ಪ ಸಿಹಿ ಇರುತ್ತದೆ ಅಂದರೆ ಲಡ್ಡು, ಜಿಲೇಬಿ ಅಥವಾ ಬೂಂದಿ ಪ್ರಸಾದದ ಜೊತೆ- ಜೊತೆಗೆ ವಿಭಿನ್ನ ಪ್ರಕಾರದ ಪಲ್ಲೆ ಮತ್ತು ಪುರಿ, ರಾಯತಾ, ಉಪ್ಪಿನಕಾಯಿ, ಈರುಳ್ಳಿ ಮತ್ತು ಸೌತೆಕಾಯಿ ಇತ್ಯಾದಿ. ಈ ಅನ್ನ ದಾಸೋಹ ಎಲ್ಲರಿಗೂ ಉಚಿತವಾಗಿರುತ್ತದೆ. 

  • ವಾಸ್ತವಿಕ ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜಾಗರೂಕತೆ ಹರಡಿಸುವುದು 

ಸಂತ ರಾಮ್‌ಪಾಲ್ ಮಹಾರಾಜರ ಆಧ್ಯಾತ್ಮಿಕ ಪ್ರವಚನ ಸದಾ ಕಬೀರ ಪ್ರಕಟ ದಿವಸದ ಮುಖ್ಯ ಭಾಗವಾಗಿರುತ್ತದೆ. ಸದ್ಗುರು ರಾಮ್‌ಪಾಲ್ ಮಹಾರಾಜರ ಆಧ್ಯಾತ್ಮಿಕ ಪ್ರವಚನ ಪ್ರತೀ ಧರ್ಮದ ಪವಿತ್ರ ಶಾಸ್ತ್ರಗಳ ಮೇಲೆ ಆಧಾರಿತ ವಾಗಿರುತ್ತದೆ. ಅದು ಭಕ್ತ ಸಮಾಜಕ್ಕೆ ವಾಸ್ತವಿಕ ಆಧ್ಯಾತ್ಮಿಕ ಜ್ಞಾನದ ಬಗ್ಗೆ ತಿಳಿಸುವುದಕ್ಕಾಗಿ ಪ್ರೊಜೆಕ್ಟರ್‌ನ ಮಾಧ್ಯಮ ದಿಂದ ಪವಿತ್ರ ಪುಸ್ತಕಗಳನ್ನು ತೋರಿಸುತ್ತಾರೆ. ಕಬೀರ ಸಾಹೇಬರ ಪ್ರಕಟ ದಿವಸದ ಸಂದರ್ಭದಲ್ಲಿ ಭಗವಂತ ಕಬೀರರ ಮಹಿಮೆ ಮತ್ತು ಸರಿಸುಮಾರು 600 ವರ್ಷಗಳ ಮೊದಲು ಕಾಶೀಯಲ್ಲಿ ಅವರ 120 ವರ್ಷಗಳ ದೀರ್ಘ ಪ್ರವಾಸದ ಮೇಲೆ ಧ್ಯಾನ ಕೇಂದ್ರಿತ ಗೊಳಿಸಲಾಗುತ್ತದೆ.

  • ಧಾರ್ಮಿಕ ಪಾಖಂಡದ ವಿರುದ್ಧ ಜಾಗರೂಕತೆ ಹರಡಿಸುವುದು 

ಮೇಲೆ ಬರೆದಂತೆ, 12 ಕಬೀರ ಪಂಥಗಳಿವೆ. ಮತ್ತು ಬೇರೆ ಪಂಥಗಳೂ ಇವೆ. ಅವುಗಳಲ್ಲಿ ಕೆಲವನ್ನು ಕಬೀರ ಪಂಥಗಳೆನ್ನಬಹುದು, ಬೇರೆ ಯಾವಲ್ಲ. ಅನೇಕ ಬೇರೆ ಬೇರೆ ಧರ್ಮಗಳಿವೆ, ಅವು ಪವಿತ್ರ ಗ್ರಂಥಗಳನುಸಾರ ಪೂಜೆಯ ವಿಧಿ ಮಾಡುತ್ತಿಲ್ಲ. ಪರಿಣಾಮ ಸ್ವರೂಪ, ಆ ಧರ್ಮಗಳು ಅಥವಾ ಪಂಥಗಳ ಅನುಯಾಯಿಗಳಲ್ಲಿ ಯಾರು ಕೂಡಾ ಕಬೀರ ಭಗವಂತನಿAದ ಲಾಭ ಪ್ರಾಪ್ತಿಸಿ ಕೊಳ್ಳಲಾಗಿಲ್ಲ. ಭಗವಂತ ಕಬೀರರು ಸ್ವಯಂ ಸಂತ ರಾಮ್‌ಪಾಲ್‌ರ ರೂಪದಲ್ಲಿ ಬಂದಿರುವರು. ಸಂತ ರಾಮ್‌ಪಾಲ್ ಮಹಾರಾಜರು ವರ್ತಮಾನದಲ್ಲಿ ನಡೆಯುತ್ತಿರುವ ಪ್ರತಿ ಧಾರ್ಮಿಕ ಪಾಖಂಡವನ್ನು ಬಹಿರಂಗಪಡಿಸಿದರು ಮತ್ತು ಪವಿತ್ರ ಗ್ರಂಥಗಳಿಂದ ಆಧ್ಯಾತ್ಮಿಕದ ನಿಜವಾದ ಮಾರ್ಗ ತೋರಿಸಿದರು. ಅವರ ಆದೇಶದಿಂದ, ಅವರ ಭಕ್ತರು ಕಬೀರ ಸಾಹೇಬರ ಪ್ರಕಟ ದಿವಸದ ಸಂದರ್ಭದಲ್ಲಿ ಆ ನಿಜವಾದ ಆಧ್ಯಾತ್ಮಿಕ ಜ್ಞಾನದ ಪ್ರಚಾರವನ್ನು ಮಾಡುತ್ತಾರೆ.

ನಾವು ಪ್ರತಿ ವರ್ಷ ಕಬೀರ ಪ್ರಕಟ ದಿವಸ ಏಕೆ ಆಚರಿಸುತ್ತೇವೆ?

ಭಗವಂತ ಕಬೀರರ ಮೂಲಕ ಹೇಳಿದಂತಹ ನಿಜವಾದ ಪೂಜೆಯ ವಿಧಿ ಎಲ್ಲಾ ಕಷ್ಟಗಳನ್ನು ಕೊನೆಗೊಳಿಸುತ್ತದೆ. ಪರಮೇಶ್ವರ ಕಬೀರರು ಸ್ವತಃ ಸರ್ವೋಚ್ಚ ಪರಮೇಶ್ವರರಾಗಿದ್ದಾರೆ. ಅವರು ಬಯಸಿದ್ದನ್ನು ಮಾಡಬಲ್ಲರು. ಇಲ್ಲಿ ಕಾಶೀಯಲ್ಲಿ ತನ್ನ 120 ವರ್ಷಗಳ ದೀರ್ಘ ಪ್ರವಾಸದ ಸಮಯ, ಅವರು ಅನೇಕ ಜನರ ಕಾಯಿಲೆಗಳನ್ನು ಗುಣಪಡಿಸಿದ್ದಾರೆ. ಅವರು ತಮ್ಮ 64 ಲಕ್ಷ ಭಕ್ತರ ಕಷ್ಟಗಳನ್ನು ದೂರಗೊಳಿಸುವ ಜೊತೆಗೆ ಅವರಿಗೆ ಪೂರ್ಣ ಮೋಕ್ಷ ಪ್ರಾಪ್ತಿಸುವುದಕ್ಕಾಗಿ ನಿಜವಾದ ಮಂತ್ರಗಳನ್ನು ನೀಡಿದರು. ಭಗವಂತ ಕಬೀರರು ಇಲ್ಲಿ ಪ್ರಕಟಗೊಂಡ ಸಂಭ್ರಮವನ್ನು ಆಚರಿಸಲು ಇದಕ್ಕಿಂತ ಉತ್ತಮ ಕಾರಣ ಇನ್ನೇನಾಗಿರಲು ಸಾಧ್ಯವಿದೆ.

ಕಬೀರರು ಗರೀಬ್ ದಾಸರಿಗೆ ಸತ್ಯಜ್ಞಾನ ನೀಡಿದ್ದರು

ಭಗವಂತ ಕಬೀರರು ಸಮಯ ಸಮಯಕ್ಕೆ ಬಂದು ತನ್ನ ಪ್ರೀತಿಯ ಆತ್ಮಗಳಿಗೆ ಭೇಟಿಯಾಗುತ್ತಾರೆ ಅವರಿಗೆ ಸತ್ಯಜ್ಞಾನ ನೀಡುತ್ತಾರೆ. ಭಗವಂತ ಕಬೀರರು ಸಂತ ಗರೀಬ್ ದಾಸರಿಗೆ ಸಿಕ್ಕಿದರು. ಕಬೀರ ಪರಮೇಶ್ವರರು ಸಂತ ಗರೀಬ್ ದಾಸರಿಗೆ ಹೇಳಿದರು, 

ಮೈಂ ರೋವತ್ ಹೂಂ ಸೃಷ್ಟಿ ಕೊ, ಯೆ ಸೃಷ್ಟಿ ರೋವೆ ಮೋಹೆ | 

ಗರೀಬ್ ದಾಸ್ ಇಸ್ ವಿಯೋಗ್ ಕೊ, ಸಮಝ್ ನ ಸಕತಾ ಕೋಯೆ || 

ಈ ವಾಣಿಯಲ್ಲಿ ಸಂತ ಗರೀಬ್ ದಾಸರು ಹೇಳುತ್ತಿದ್ದಾರೆ ಏನೆಂದರೆ, ಕಬೀರ ಪರಮೇಶ್ವರರು ಹೇಳಿದರು- ಹೇ, ಗರೀಬದಾಸ! ನಾನು ಪ್ರಪಂಚಕ್ಕಾಗಿ ಅಳುತ್ತಿದ್ದೇನೆ ಅಂದರೆ ನೀವೆಲ್ಲಾ ನನ್ನ ಮಕ್ಕಳು. ನಾನು ನಿಮ್ಮ ತಂದೆ. ನೀವು ಇಲ್ಲಿ ಈ ಕೆಟ್ಟ ಕಾಲನ್ ಲೋಕದಲ್ಲಿ ನಿಮ್ಮ ತಪ್ಪಿನ ಕಾರಣ ಬಂದಿರುವಿರಿ. ಕಾಲನು ನಿಮ್ಮ ದುರುಪಯೋಗ ಮಾಡುತ್ತಿದ್ದಾನೆ. ನೀವು ಇಲ್ಲಿ ದುಃಖಿಯಾಗಿದ್ದೀರಿ. ನೀವು ನಾನು ಹೇಳಿದಂತೆ ಪೂಜೆ ಮಾಡಿ ಮತ್ತು ನಿಮ್ಮ ಮೂಲ ಸ್ಥಾನ ಸತ್ಯಲೋಕದಲ್ಲಿ ಹೊರಟು ಹೋಗಿ, ಅಲ್ಲಿ ಯಾವ ದುಃಖವಿಲ್ಲ. ಮತ್ತು ಈ ಪ್ರಪಂಚ ನನಗಾಗಿ ಅಳುತ್ತದೆ ಏನೆಂದರೆ ಹೇ ಭಗವಂತ! ನೀವು ಸರ್ವಶಕ್ತಿವಂತರು, ಸೃಷ್ಟಿಕರ್ತರು, ಎಲ್ಲರ ಪಾಲನೆಕರ್ತರು ಆಗಿರುವಿರಿ. ದಯವಿಟ್ಟು ನಮಗೆ ಸುಖ ನೀಡಿ. ದಯಮಾಡಿ ನಮ್ಮ ಕಷ್ಟಗಳನ್ನು ದೂರ ಮಾಡಿ. ನಾವು ನಿಮ್ಮ ಭಕ್ತಿ, ಪೂಜೆ ಮಾಡುತ್ತೇವೆ. ನೀವು ನಮಗೆ ದರ್ಶನ್ ಏಕೆ ನೀಡುತ್ತಿಲ್ಲ? 

ಆದರೆ ಯಾವಾಗ ನಾನು ಅವರ ಬಳಿ ಹೋಗುತ್ತೇನೆ ಮತ್ತು ಅವರಿಗೆ ಹೇಳುತ್ತೇನೆನೆಂದರೆ ನಾನು ಭಗವಂತನು. ನಂತರ ಈಶ್ವರ ನಿರಾಕಾರನೆಂಬ ಈ ನಿರಾಧಾರ್ ವಿಶ್ವಾಸದಲ್ಲಿ ದೃಢವಾಗಿ ನನ್ನ ಮೇಲೆ ವಿಶ್ವಾಸ ಮಾಡುವುದಿಲ್ಲ. ಈ ಕಾಲನು ನಮ್ಮ ಮಧ್ಯೆ ಅಜ್ಞಾನತೆಯ ಗೋಡೆ ಎಳೆದಿದ್ದಾನೆ. ಈ ಬೇರ್ಪಡಿಸುವಿಕೆಯನ್ನು ಯಾರೂ ತಿಳಿಯಲು ಸಾಧ್ಯವಿಲ್ಲ.

ಈ ಬೇರ್ಪಡಿಸುವಿಕೆಯನ್ನು ತಿಳಿಯುವುದಕ್ಕಾಗಿ ಮೂರನೇ ವ್ಯಕ್ತಿಯ ಅಗತ್ಯವಿದೆ. ಆ ಮೂರನೇಯವರು ಸದ್ಗುರು ಆಗಿರುವರು, ಅವರು ಈಶ್ವರನನ್ನು ಅವನ ಆತ್ಮಗಳೊಂದಿಗೆ ಜೋಡಿಸುತ್ತಾರೆ. 

ಸಂತ ರಾಮ್‌ಪಾಲ್ ಮಹಾರಾಜರು ಇಂದು ಏಕಮಾತ್ರ ಸದ್ಗುರು ಆಗಿದ್ದಾರೆ. ಅವರು ಸ್ವತಃ ಕಬೀರರ ಅವತಾರರು. ಅವರು ಅದೇ ಆಧ್ಯಾತ್ಮಿಕ ಜ್ಞಾನ ಹೇಳುತ್ತಾರೆ ಮತ್ತು ಆದೇ ರೀತಿ ಪೂಜೆಯ ಉಪದೇಶ ನೀಡುತ್ತಾರೆ ಕಬೀರ ಪರಮಾತ್ಮನಂತೆ. ಇದರ ಪ್ರಮಾಣ ಪವಿತ್ರ ಕಬೀರ್ ಸಾಗರ್ ದಿಂದಲೂ ನೀಡುತ್ತಾರೆ.

ಕಬೀರ ಪರಮೇಶ್ವರರ ಆರಾಧನೆ ಎಲ್ಲಾ ರೀತಿಯ ಕಷ್ಟಗಳನ್ನು ದೂರ ಮಾಡುತ್ತದೆ. ಸಂತ ರಾಮ್‌ಪಾಲ್‌ರು ಕಬೀರರ ಶಾಸ್ತ್ರಾನುಕೂಲ ಭಕ್ತಿಯ ವಿಧಿ ಹೇಳುತ್ತಾರೆ. ಆ ಕಾರಣದಿಂದಾಗಿ ಅವರ ಸಾವಿರಾರು ಭಕ್ತರು ಕೊನೆಯ ಘಳಿಗೆಯಲ್ಲೂ ಕ್ಯಾನ್ಸರ್ ಮತ್ತು ಎಡ್ಸನಂತಹ ಭಯಂಕರ ರೋಗಗಳಿಂದ ಗುಣಮುಖರಾಗಿದ್ದಾರೆ. ಪ್ರೇತ ಮತ್ತು ಪಿತೃಗಳು ಅವರ ಭಕ್ತರಿಗೆ ಹಾನಿ ಮಾಡಲಾರರು. ಅವರ ಎಲ್ಲಾ ಪ್ರಕಾರದ ಕಷ್ಟಗಳು ಸಮಾಪ್ತವಾಗುತ್ತವೆ. ಸಂತ ರಾಮ್‌ಪಾಲ್ ಮಹಾರಾಜರಿಂದ ದೀಕ್ಷೆ ಪಡೆಯುವುದರಿಂದ ವ್ಯಕ್ತಿಯ ಅಕಾಲ ಮೃತ್ಯು ಆಗುವುದಿಲ್ಲ. ಅಷ್ಟೇ, ಒಟ್ಟಿನಲ್ಲಿ ಪೂಜೆಯ ನಿಯಮಗಳನ್ನು ನಿಭಾಯಿಸುವುದು ಬಹಳ ಮಹತ್ವ ಪೂರ್ಣವಾಗಿದೆ.

ಸಂತ ರಾಮ್‌ಪಾಲ್‌ರು ಹೇಳುತ್ತಾರೇನೆಂದರೆ ಒಂದೊಮ್ಮೆ ನಾವು ಅವರ ಮೂಲಕ ಹೇಳಿದ ಎಲ್ಲಾ ನಿಯಮಗಳ ಪಾಲನೆ ಮಾಡುತ್ತಾ ಮತ್ತು ಅವರ ಮೂಲಕ ಕೊಡಲ್ಪಟ್ಟ ಪೂಜೆಯ ವಿಧಿ ಮಾಡಿದರೆ, “ಕ್ಯಾನ್ಸರ್ ಏನು? ಕ್ಯಾನ್ಸರನ್ ಅಪ್ಪಕೂಡಾ ಸರಿಹೋಗುವನು! ಕ್ಯಾನ್ಸರ್ ಏನಿದೆ? ಅವರ ಭಕ್ತರ ಈ ಸಾಕ್ಷಿ ಇದರ ಜೀವಂತ ಪ್ರಮಾಣವಾಗಿದೆ. ಇದಕ್ಕಾಗಿ ಈ ಬಾರಿ ಭಗವಂತನಿಗೆ ಗುರುತಿಸಲು ಸ್ವಲ್ಪವೂ ತಡ ಮಾಡಬೇಡಿ. ಅವರ ಜ್ಞಾನದಿಂದ ಸ್ವತಃ ತಿಳಿದುಕೊಳ್ಳಿ. ಸಂತ ರಾಮ್‌ಪಾಲ್ ಮಹಾರಾಜರ ಶರಣ ಪಡೆಯಿರಿ ಮತ್ತು ನಿಮ್ಮ ಉದ್ಧಾರ ಮಾಡಿಕೊಳ್ಳಿ.

Latest articles

On World Intellectual Property Rights Day Know What Defines Real Intellect of a Human

Last Updated on 24 April 2024 IST: Every April 26, World Intellectual Property Day...

Iranian President Ebrahim Raisi’s Pakistan Visit: Strengthening Ties

Iranian President Ebrahim Raisi is on a 3 day visit to the South Asian...

Standing Together on World Malaria Day 2024: Fighting Against Malaria

Last Updated on 24 April 2024 IST | World Malaria Day 2024 showcases global...

World Malaria Day 2024 [Hindi] | क्या है मलेरिया से बचाव का उपाय?

Last Updated on 23 April 2024 IST: विश्व मलेरिया दिवस (World Malaria Day in...
spot_img

More like this

On World Intellectual Property Rights Day Know What Defines Real Intellect of a Human

Last Updated on 24 April 2024 IST: Every April 26, World Intellectual Property Day...

Iranian President Ebrahim Raisi’s Pakistan Visit: Strengthening Ties

Iranian President Ebrahim Raisi is on a 3 day visit to the South Asian...

Standing Together on World Malaria Day 2024: Fighting Against Malaria

Last Updated on 24 April 2024 IST | World Malaria Day 2024 showcases global...