73ನೇ ಅವತರಣ (ಅವತಾರ) ದಿವಸ 2023-ತತ್ವದರ್ಶಿ ಸಂತ ರಾಮ್‌ಪಾಲ್ ಮಹಾರಾಜರು | [kannada]

spot_img

ಯಾವಾಗೆಲ್ಲಾ ಭೂಮಿಯ ಮೇಲೆ ಅಧರ್ಮ ಹೆಚ್ಚುವುದೋ, ಆವಾಗೆಲ್ಲಾ ಭೂಮಿಯ ಮೇಲೆ ಸ್ವತಃ ಅಥವಾ ತನ್ನ ಮೂಲಕ ಆಯ್ಕೆ ಮಾಡಲಾದ ಆತ್ಮವನ್ನು ಅವತಾರ ರೂಪದಲ್ಲಿ ಪ್ರಕಟಗೊಳಿಸುತ್ತಾನೆ.

ಭಗವದ್ಗೀತೆಯ 4ನೇ ಅಧ್ಯಾಯದ 7 ಮತ್ತು 8ನೇ ಶ್ಲೋಕ

ಯದಾ, ಯದಾ, ಹಿ, ಧರ್ಮಸ್ಯ, ಗ್ಲಾನಿಃ, ಭವತಿ, ಭಾರತ, ಅಭ್ಯುತ್ಥಾನಮ್, ಅಧರ್ಮಸ್ಯ, ತದಾ, ಆತ್ಮಾನಮ್, ಸೃಜಾಮಿ, ಅಹಮ್ ||

ಪರಿತ್ರಾಣಾಯ, ಸಾಧೂನಾಮ್, ವಿನಾಶಾಯ, ಚ, ದುಷ್ಕೃತಾಮ್, ಧರ್ಮಸಂಸ್ಥಾಪನಾರ್ಥಾಯ, ಸಂಭವಾಮಿ ಯುಗೇ, ಯುಗೇ ||

ಅರ್ಥ: ಯಾವಾಗ ಧರ್ಮ ನಾಶವಾಗುತ್ತದೋ ಮತ್ತು ಅಧರ್ಮ ಹೆಚ್ಚುತ್ತದೋ, ಆಗ ನಾನು (ಸರ್ವ ಶಕ್ತಿವಂತ) ಸ್ವತಃ ಅಥವಾ ನನ್ನ ಅವತಾರವನ್ನು ಕಳುಹಿಸುತ್ತೇನೆ. ಅವನು ಪುಣ್ಯ ಆತ್ಮಗಳನ್ನು ರಕ್ಷಣೆ ಮಾಡುವ, ದುಷ್ಟರನ್ನು ಶಿಕ್ಷಿಸುವ ಮತ್ತು ಶಾಸ್ತ್ರ ಆಧಾರಿತ ಭಕ್ತಿಯ ಮಾರ್ಗ ನೀಡಲು ಪ್ರತ್ಯಕ್ಷನಾಗುತ್ತಾನೆ. ನಾನು ನನ್ನ ಅವತಾರವನ್ನು ಪ್ರತಿಯೊಂದು ಯುಗದಲ್ಲಿ ಪ್ರಕಟಗೊಳಿಸುತ್ತೇನೆ ಮತ್ತು ದಿವ್ಯ ಲೀಲೆಗಳನ್ನು ಮಾಡುತ್ತಾ ಧರ್ಮದ ಸ್ಥಾಪನೆ ಮಾಡುತ್ತೇನೆ.

ಸರ್ವಶಕ್ತಿವಂತ, ಪರಮೇಶ್ವರ, ಸಂಪೂರ್ಣ ಬ್ರಹ್ಮಾಂಡ ನಿರ್ಮಾತೃ ಈ ಮೃತ್ಯು ಲೋಕದಲ್ಲಿ ಅಮರ ಲೋಕದಿಂದ ಸಮಯದನುಸಾರ ಅವತಾರ ತಾಳುತ್ತೀರುತ್ತಾರೆ ಮತ್ತು ಈಗಲೂ ಸಹ ಮಹಾನ್ ಸಂತ ರಾಮ್‌ಪಾಲ್ ಮಹಾರಾಜರ ರೂಪದಲ್ಲಿ ದಿವ್ಯ ಲೀಲೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 8ರಂದು ಆ ಶುಭ ದಿನವಿದೆ. ಪ್ರತಿ ವರ್ಷವೂ ಸಂತ ರಾಮ್‌ಪಾಲ್ ಮಹಾರಾಜರು ಸರ್ವಶಕ್ತಿವಂತನಾದ ಕಬೀರ ಸಾಹೇಬರ ಅವತಾರ ದಿವಸವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ವಾರ್ಷಿಕ ಕಾರ್ಯಕ್ರಮವನ್ನು ಅವಶ್ಯಕವಾಗಿ ಓದಿ :-

ಈ ಲೇಖನದಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು.

  • 73ನೇ ಅವತರಣ (ಅವತಾರ) ದಿವಸ-2023-ಸಂತ ರಾಮ್‌ಪಾಲ್ ಮಹಾರಾಜರ 
  • ಅವತಾರದ ಅರ್ಥವೇನು?
  • ಆಧ್ಯಾತ್ಮಿಕ ಗುರು ಸಂತ ರಾಮ್‌ಪಾಲ್ ಮಹಾರಾಜರ ವಿಷಯದ ಬಗ್ಗೆ ಮಾಹಿತಿ
  • ಅವತಾರ ಪುರುಷ ಸಂತ ರಾಮ್‌ಪಾಲ್ ಮಹಾರಾಜರ ಏಕೈಕ ಉದ್ದೇಶ
  • ಅವತಾರ ಪುರುಷ ಸಂತ ರಾಮ್‌ಪಾಲ್ ಮಹಾರಾಜರ ವಿಷಯದಲ್ಲಿ ಭವಿಷ್ಯವಾಣಿಗಳು
  • ಅವತಾರ ದಿವಸ 2023ರ ಸಮಾರಂಭದ ಲೈವ್ ಇವೆಂಟ್ 
  • ಅವತಾರ ಪುರುಷ ಸಂತ ರಾಮ್‌ಪಾಲ್ ಮಹಾರಾಜರ ವಿಷಯದಲ್ಲಿ ಪವಿತ್ರ ಶಾಸ್ತ್ರಗಳಿಂದ 
  •  ಸಾಕ್ಷ್ಯಗಳು
  • ಅವತಾರ ಪುರುಷ ಸಂತ ರಾಮ್‌ಪಾಲ್ ಮಹಾರಾಜರ ವಿಷಯದಲ್ಲಿ ಸರ್ವಶಕ್ತಿವಂತ 
  • ಕಬೀರರ ಭವಿಷ್ಯವಾಣಿ
  • ಸಾಮಾಜಿಕ ಉತ್ಥಾನದಲ್ಲಿ ಸಂತ ರಾಮ್‌ಪಾಲ್ ಮಹಾರಾಜರ ಯೋಗದಾನ
  • ಅವತರಣ (ಅವತಾರ) ದಿವಸವನ್ನು ಹೇಗೆ ಆಚರಿಸಲಾಗುತ್ತದೆ?

Table of Contents

73ನೇ ಅವತರಣ ದಿವಸ 2023-ಸಂತ ರಾಮ್‌ಪಾಲ್ ಮಹಾರಾಜರ

8 ಸೆಪ್ಟೆಂಬರ್ 2023 ಜಗದ್ಗುರು ತತ್ವದರ್ಶಿ ಸಂತ ರಾಮ್‌ಪಾಲ್ ಮಹಾರಾಜರ 73ನೇ ಅವತರಣ ದಿವಸವಾಗಿದೆ. ಪೂರ್ಣ ಬ್ರಹ್ಮ/ಪರಮೇಶ್ವರರ ಅವತಾರರಾಗಿದ್ದಾರೆ. ಇವರು 17 ಫೆಬ್ರವರಿ 1988ರಲ್ಲಿ ತಮ್ಮ ಆಧ್ಯಾತ್ಮಿಕ ಯಾತ್ರೆಯನ್ನು ಪ್ರಾರಂಭಿಸಿದರು ಮತ್ತು ಸಾಮಾಜಿಕ ಪಾಖಂಡವಾದದ ಬೇಡಿಗಳನ್ನು ಮುರಿದು, ಲಕ್ಷಾಂತರ ಜನರಿಗೆ ಆಧ್ಯಾತ್ಮ ದಾರಿಯನ್ನು ತೋರಿಸಿದರು. ಅವರ ವಿಷಯದಲ್ಲಿ ಪ್ರಸಿದ್ಧ ಭವಿಷ್ಯಕಾರರ ಮೂಲಕ ಅಂತಿಮ ಗುರುಗಳಾಗುವ ಬಗ್ಗೆ ಭವಿಷ್ಯವಾಣಿ ನುಡಿಯಲಾಗಿದೆ. ಇವರು ಸ್ವರ್ಣಯುಗ ತರುವರು, ಇವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವುದು. ಈ ಲೇಖನವು ವಿಶ್ವದ ಉದ್ಧಾರ ಕರ್ತೃವಾದ ಸಂತ ರಾಮ್‌ಪಾಲ್ ಮಹಾರಾಜರ ಜೀವಂತ ವಿವರಣೆ ಪ್ರದಾನಿಸುತ್ತದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿರಿ.

ಈಗ ಮೊಟ್ಟ ಮೊದಲಿಗೆ ನಾವು ಅವತಾರದ ಅರ್ಥವನ್ನು ತಿಳಿದುಕೊಳ್ಳೋಣ

ಅವತಾರದ ಅರ್ಥವೇನು?

ಧಾರ್ಮಿಕತೆಯನ್ನು ಸ್ಥಾಪಿಸಲು ಅಮರಲೋಕದಿಂದ ಮೃತ್ಯುಲೋಕಕ್ಕೆ ಬಂದು ಪ್ರಕಟಗೊಂಡು ಒಬ್ಬ ದಿವ್ಯ ಪುರುಷ ಅಂದರೆ ಈ ಮೃತ್ಯು ಲೋಕದಲ್ಲಿ ಆಡಳಿತ ನಡೆಸುವ ಕೆಟ್ಟ ಶಕ್ತಿಗಳಿಂದ ಜರ್ಜರಿತರಾಗಿರುವ ಆತ್ಮಗಳನ್ನು ರಕ್ಷಣೆ ಮಾಡುವುದಕ್ಕೆ ಅವತಾರ ಎಂದು ಅರ್ಥ. ಆಧ್ಯಾತ್ಮಿಕ ಪೂರ್ಣತೆಯಿಂದ ಯಾವುದಾದರೂ ಸರ್ವೋಚ್ಛ ಆತ್ಮದ ಅವತಾರ ಭೂಮಿಗೆ ಬರುವುದು. ಒಂದು ನಿಯಮಿತ ಘಟನೆಯಾಗಿದೆ. ಇದು ಎಲ್ಲಾ ಯುಗಗಳಲ್ಲೂ ಆಗುತ್ತದೆ. ದೈವೀಯ ಅವತರಣ ಅರ್ಥಾತ್ ಅನಂತದಿಂದ ನಶ್ವರ ಪ್ರಪಂಚದಲ್ಲಿ ಸರ್ವೋಚ್ಛ ಆತ್ಮವು ಪ್ರಕಟವಾಗುವುದು.

 ಸಂತ ರಾಮ್‌ಪಾಲ್ ಮಹಾರಾಜರು ಪರಮ ಅಕ್ಷರ ಬ್ರಹ್ಮ/ಸತ್ಯಪುರುಷ/ ಶಬ್ದ ಸ್ವರೂಪ ರಾಮ/ ಅಕಾಲ ಪುರುಷನ ದಿವ್ಯ ಅವತಾರ. ಇವರು ಭಕ್ತಿಯ ನಿಜವಾದ ಜ್ಞಾನ ಪ್ರದಾನಿಸುತ್ತಾರೆ. ಇದು ಎಲ್ಲಾ ಪವಿತ್ರ ಶಾಸ್ತ್ರಗಳ ಅನುಸಾರವಿದೆ. ಇವರ ಮಾರ್ಗದರ್ಶನದಲ್ಲಿ ಸ್ವರ್ಣಯುಗದ ಪ್ರಾರಂಭವಾಗುತ್ತದೆ. ಇದನ್ನು ಪ್ರಸಿದ್ಧ ಭವಿಷ್ಯಕಾರರು ಭವಿಷ್ಯವಾಣಿ ನುಡಿದಿದ್ದಾರೆ.

ಆಧ್ಯಾತ್ಮಿಕ ಗುರು ಸಂತ ರಾಮ್‌ಪಾಲ್ ಮಹಾರಾಜರ ಬಗ್ಗೆ ಮಾಹಿತಿ

ಸಂತ ರಾಮ್‌ಪಾಲ್ ಮಹಾರಾಜರು ಸತ್ಯಲೋಕ ಆಶ್ರಮ, ಬರವಾಲಾ, ಹಿಸಾರ್ ಜಿಲ್ಲೆ, ಹರಿಯಾಣ ಇದರ ಸಂಚಾಲಕರು, ಇವರು ಪವಿತ್ರ ಶಾಸ್ತ್ರಗಳ ಪ್ರಕಾರ ಕಬೀರ ಪರಮಾತ್ಮನ ನಿಜವಾದ ಆಧ್ಯಾತ್ಮಿಕ ಜ್ಞಾನ ಪ್ರದಾನಿಸುತ್ತಿದ್ದಾರೆ. ಇವರ ಜನನ 8 ಸೆಪ್ಟೆಂಬರ್ 1951ರಲ್ಲಿ ಭಾರತದ ಹರಿಯಾಣ ರಾಜ್ಯದ ಸೋನೀಪತ್ ಜಿಲ್ಲೆಯ ಗುಹಾನಾ ತಹಸೀಲಿನ ಧನಾನಾ ಎಂಬ ಚಿಕ್ಕ ಹಳ್ಳಿಯಲ್ಲಿ ಒಂದು ರೈತ ಕುಟುಂಬದಲ್ಲಿ ಆಯಿತು. ಇವರ ತಂದೆಯ ಹೆಸರು ಭಕ್ತ ನಂದರಾಮ್ ಮತ್ತು ಇವರ ತಾಯಿಯ ಹೆಸರು ಭಕ್ತೆ ಇಂದ್ರೋದೇವಿ. ಸಂತ ರಾಮ್‌ಪಾಲ್ ಮಹಾರಾಜರಿಗೆ ನಾಲ್ಕು ಮಕ್ಕಳು (ವಾಸ್ತವವಾಗಿ ಎಲ್ಲಾ ಪ್ರಾಣಿಗಳು, ಮನುಷ್ಯನು ಸಂತ ರಾಮ್‌ಪಾಲ್‌ರು ಅಂದರೆ ಸರ್ವಶಕ್ತಿಮಾನ್ ಕಬೀರರ ಸಂತಾನವೇ) ಭಕ್ತರಿಗೆ ನಾಮದೀಕ್ಷೆ ಪ್ರದಾನಿಸುವ ಮೊದಲು ಅವರು ಹರಿಯಾಣ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ (ಅಭಿಯಂತರರು) ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು 18 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

 ಅವರ ಆಧ್ಯಾತ್ಮಿಕ ಯಾತ್ರೆಯು 17 ಫೆಬ್ರವರಿ 1988ರಲ್ಲಿ ಕಬೀರ ಪಂಥಿ ಗುರುವಾದ ಸ್ವಾಮಿ ರಾಮದೇವಾನಂದರ ಶಿಷ್ಯರಾದ ಬಳಿಕ ಪ್ರಾರಂಭವಾಯಿತು. ಅದನ್ನು ‘ಬೋಧ ದಿವಸ’ ಎಂಬ ಹೆಸರಿನಲ್ಲಿ ಪ್ರತೀ ವರ್ಷವೂ ಆಚರಿಸಲಾಗುತ್ತದೆ. (ಅವರ  ಆಧ್ಯಾತ್ಮಿಕ ಜನನವಾದ ದಿನ) ಸ್ವಾಮಿ ರಾಮದೇವಾನಂದರು 1994ರಲ್ಲಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸುತ್ತಾ ‘ಈ ಇಡೀ ಜಗತ್ತಿನಲ್ಲಿ ನಿನ್ನ ಸಮಾನ ಬೇರೆ ಯಾವ ಸಂತನೂ ಇರಲಾರ’ ಎಂದರು. ಸಂತ ರಾಮ್‌ಪಾಲ್ ಮಹಾರಾಜರಿಗೆ ಸತ್ಯ ಆಧ್ಯಾತ್ಮಿಕ ಜ್ಞಾನ ಪ್ರಾಪ್ತವಾಯಿತು. ಅಂದಿನಿಂದ ಅವರ ಜೀವನ ಪೂರ್ತಿಯಾಗಿ ಬದಲಾಯಿತು. ಅವರು ತಮ್ಮ ನೌಕರಿಗೆ ರಾಜೀನಾಮೆ ನೀಡಿದರು. ಇದನ್ನು ಹರಿಯಾಣ ಸರ್ಕಾರವು ದಿನಾಂಕ 16/5/2000 ರಲ್ಲಿ ಸಂಖ್ಯೆ 3492.3500 ರ ಮೂಲಕ ರಾಜೀನಾಮೆಯನ್ನು ಅಂಗೀಕರಿಸಿತು. ಅವರು 1994-98ರವರೆಗೆ ಮನೆ ಮನೆಗೆ ತೆರಳಿ ಆಧ್ಯಾತ್ಮಿಕ ಪ್ರವಚನ ಮಾಡಿದರು. ಬಹಳ ಬೇಗ ಸಾವಿರಾರು ಭಕ್ತರು ಶರಣಾಗಿ 1999ರಲ್ಲಿ ಹರಿಯಾಣಾದ ರೋಹತಕ್ ಜಿಲ್ಲೆಯ ಕರೋಂಥಾದಲ್ಲಿ ಆಶ್ರಮವನ್ನು ಸ್ಥಾಪಿಸಿದರು. ವರ್ತಮಾನದಲ್ಲಿ ಪೂರ್ಣವಾಗಿ ಜಗತ್ತಿನಾದ್ಯಂತ ಭಕ್ತಿಯ ನಿಜವಾದ ಮಾರ್ಗದ ಪ್ರಚಾರ-ಪ್ರಸಾರ ಮಾಡುವಲ್ಲಿ ಸಮರ್ಪಿತರಾಗಿದ್ದಾರೆ. ಪರಿಣಾಮವಾಗಿ ಆತ್ಮಗಳಿಗೆ ಮೋಕ್ಷ ಪ್ರಾಪ್ತಿಯಾಗುವುದು. 

ಸೂಕ್ಷ್ಮವೇದದಲ್ಲಿ ಅಂದರೆ ಪರಮಾತ್ಮ ಕಬೀರ ಸಾಹೇಬರ ಅಮೃತವಾಣಿಯಲ್ಲಿ ಉಲ್ಲೇಖವಿದೆ:-

ಜೋ ಮಮ್ ಸಂತ್ ಸತ್ ಉಪದೇಶ್ ದೃಢಾವೈ (ಬತಾವೈ),

ವಾಕೇ ಸಂಗ್ ಸಭಿ ರಾಡ್ ಬಢಾವೈ|

ಯಾ ಸಬ್ ಸಂತ್ ಮಹಂತನ್ ಕೀ ಕರಣೀ,

ಧರ್ಮದಾಸ್ ಮೈಂ ತೋ ಸೇ ವರ್ಣೀ||

ವಿಭಿನ್ನ ನಕಲಿ ಧರ್ಮಗುರುಗಳಿಂದ, ಸಮಕಾಲೀನ ಸಂತರಿಂದ ಮತ್ತು ಸ್ವಾಮಿಗಳಿಂದ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳನ್ನು ಎದುರಿಸಿದ್ದರಿಂದ ಇಡೀ ಮಾನವ ಜಾತಿಯ ಕಲ್ಯಾಣದ ಉದ್ದೇಶದಿಂದ ಸಂತ ರಾಮ್‌ಪಾಲ್ ಮಹಾರಾಜರು ಜನತೆಯವರೆಗೆ ತಲುಪುವ ಮತ್ತು ಸತ್ಯ ಭಕ್ತಿ ಮಾಡುವ ಪ್ರತಿಯೊಬ್ಬ ಭಕ್ತನ ಮನಸ್ಸಿನಲ್ಲಿ ಜಾಗ ಸಂಪಾದಿಸಲು ಯಶಸ್ವಿಯಾಗಿದ್ದಾರೆ. ಮತ್ತು ಅವರ ಪ್ರತಿಯೊಬ್ಬ ಭಕ್ತನು ಪ್ರತಿದಿನವೂ ಲಾಭಾನ್ವಿತರಾಗಿದ್ದಾರೆ. ಭಕ್ತರಿಗೆ ಸಂತ ರಾಮ್‌ಪಾಲ್ ಮಹಾರಾಜರ ನಿಜವಾದ ಆಧ್ಯಾತ್ಮಿಕ ಜ್ಞಾನವನ್ನು ಕೇಳುವುದರಿಂದ ತಡೆಯಲು ನಕಲಿ (ಬೇರೆಯವರಿಗೆ ಮಾರಿಕೊಂಡ) ಮೀಡಿಯಾ ಮತ್ತು ಧಾರ್ಮಿಕ ಗುರುಗಳು ಅವರ ಹೆಸರನ್ನು ತಪ್ಪು ರೀತಿಯಲ್ಲಿ ಬಳಸಿದರು ಮತ್ತು ಜನರ ಮಧ್ಯದಲ್ಲಿ ಒಂದು ನಕಾರಾತ್ಮಕ ಭಾವನೆ ಬರುವಂತೆ ಪ್ರಯತ್ನಿಸಿದರು. ಆದರೆ ಅವರ ಮೂಲಕ ಪ್ರದಾನಿಸಿದ ಸತ್ಯಭಕ್ತಿಯು ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರ ಜೀವನವನ್ನು ಬದಲಿಸಿದೆ. ಕೆಸರಿನಲ್ಲಿ ಸಿಲುಕಿಕೊಂಡಿದ್ದ ಬದುಕಿನಿಂದ ಹೊರಗೆತ್ತಿ ಸುಖ ಮತ್ತು ಆರಾಮದಾಯಕ ಜೀವನ ನಡೆಸುತ್ತಿದ್ದಾರೆ. ಆ ಸಮಸ್ಯೆಗಳು ಜನರ ಆರೋಗ್ಯಕ್ಕೆ ಸಂಬಂಧ ಪಟ್ಟಿದ್ದಾಗಿರಬಹುದು, ಆರ್ಥಿಕ ಅಸ್ಥಿರತೆಯಾಗಿರಬಹುದು, ಯಾವುದೇ ಬಂಧನವಾಗಿರಬಹುದು, ಸಂತ ರಾಮ್‌ಪಾಲ್ ಮಹಾರಾಜರು ಎಲ್ಲಾ ಭಕ್ತರ ದುಃಖಗಳನ್ನು ದೂರ ಮಾಡಿದ್ದಾರೆ ಮತ್ತು ನಕಲಿ ಗುರುಗಳು ಅವರ ಮೇಲೆ ತಿರಸ್ಕಾರ ಮತ್ತು ಅಪನಂಬಿಕೆ ಹರಡುವಂಥಾ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು. ಯಾರು ಒಬ್ಬ ಪೂರ್ಣ ಸಂತನಾಗಿರುತ್ತಾನೋ, ಅವನು ಸರ್ವಶಕ್ತಿಮಾನ್ ಪರಮೇಶ್ವರನ ಪ್ರತಿನಿಧಿಯಾಗಿ ಇರುತ್ತಾನೆ ಮತ್ತು ಯಾರ ಬಳಿ ಪವಿತ್ರ ಶಾಸ್ತ್ರಗಳಲ್ಲಿ ಪ್ರಾಮಾಣಿತ ಜ್ಞಾನವಿರುತ್ತದೋ, ಅವರಲ್ಲಿ ಈ ಗುಣವಿರುತ್ತದೆ.

ಪೂರ್ಣ ಸಂತ ರಾಮ್‌ಪಾಲ್ ಮಹಾರಾಜರನ್ನು ಗುರುತಿಸಲು ಎಲ್ಲರೂ ಅವಶ್ಯವಾಗಿ ಓದಿ ಪೂರ್ಣ ಸಂತನ ಗುರುತಿಸುವಿಕೆ.

ಅವತಾರ ಸಂತ ರಾಮ್‌ಪಾಲ್ ಮಹಾರಾಜರ ಏಕೈಕ ಉದ್ದೇಶ

ಆತ್ಮಗಳು ಕಸಾಯಿಯಾದ ಕಾಲಬ್ರಹ್ಮನ ಜಾಲದಲ್ಲಿ ಸಿಲುಕಿವೆ. ಅಷ್ಟೇ ಅಲ್ಲದೆ ಅವು ಹೇಗೆ ಸಿಲುಕಿವೆ ಮತ್ತು ಯುಗಗಳಿಂದ ದಿನ-ರಾತ್ರಿ ಹೇಗೆ ಒದ್ದಾಡುತ್ತಿವೆ. ಸರ್ವಶಕ್ತಿಮಾನ್ ಕಬೀರ ಉದ್ಧಾರಕರ್ತನು. ಅವನು ತನ್ನ ಪ್ರಿಯ ಆತ್ಮಗಳನ್ನು ಕಸಾಯಿಯಾದ ಕಾಲನ ಜಾಲದಿಂದ ಮುಕ್ತಗೊಳಿಸುವ ಉದ್ದೇಶದಿಂದ ಪ್ರತಿ ಯುಗದಲ್ಲಿ ಅವತಾರವೆತ್ತುತ್ತಾರೆ. 

ಸೂಕ್ಷ್ಮವೇದ ಇದಕ್ಕೆ ಸಾಕ್ಷಿ ಒದಗಿಸುತ್ತದೆ.

ಸತ್‌ಯುಗ್ ಮೆಂ ಸತ್ ಸುಕೃತ್ ಕಹ್ ಟೇರಾ,

ತ್ರೇತಾ ನಾಮ್ ಮುನಿಂದ್ರ್ ಮೇರಾ|

ದ್ವಾಪರ್ ಮೆಂ ಕರುಣಾಮಯ್ ಕಹಾಯಾ,

ಕಲ್‌ಯುಗ್ ನಾಮ್ ಕಬೀರ್ ಧರಾಯಾ||

ಸರ್ವಶಕ್ತಿವಂತ ಪರಮೇಶ್ವರರು ಪುನಃ ಅವತರಿತರಾಗಿದ್ದಾರೆ ಮತ್ತು ಸಂತ ರಾಮ್‌ಪಾಲ್ ಮಹಾರಾಜರ ರೂಪದಲ್ಲಿ ದಿವ್ಯ ಲೀಲೆ ಮಾಡುತ್ತಿದ್ದಾರೆ. ಅವರ ಏಕೈಕ ಉದ್ದೇಶವೆಂದರೆ ಸಂಪೂರ್ಣ ಮಾನವ ಜಾತಿಯ ಕಲ್ಯಾಣ ಮಾಡುವುದು. ಅವರು ನಿಜವಾದ ಆಧ್ಯಾತ್ಮ ಜ್ಞಾನವನ್ನು ಪ್ರದಾನಿಸಿ ದುಃಖಿತ ಆತ್ಮಗಳನ್ನು ಕಾಲನ ಜಾಲದಿಂದ ಮುಕ್ತಿಗೊಳಿಸಲು ಅವತಾರವೆತ್ತಿದ್ದಾರೆ. ಸೃಷ್ಟಿ ರಚನೆಯ ರಹಸ್ಯವನ್ನು ಆಧಾರಸಹಿತ ತಿಳಿಸಿದ್ದಾರೆ. ಇದರಿಂದ ಎಲ್ಲರೂ ತಮ್ಮ ಸದಾ ಸುಖೀ ಮೂಲ ನಿವಾಸವಾದ ಸತ್ಯಖಂಡ/ಸತ್ಯಲೋಕಕ್ಕೆ ಮರಳಿ ಬರಬಹುದು. ಅಲ್ಲಿ ತೆರಳಿದ ನಂತರ ಜನನ ಮರಣದ ಚಕ್ರವು ಶಾಶ್ವತವಾಗಿ ಸಮಾಪ್ತಿಯಾಗುವುದು ಮತ್ತು ಆತ್ಮಗಳು ಈ ನಶ್ವರ ಪ್ರಪಂಚಕ್ಕೆ ಮರಳಿ ಎಂದಿಗೂ ಬರುವುದಿಲ್ಲ. ಸಂತ ರಾಮ್‌ಪಾಲ್ ರವರ ಆಧ್ಯಾತ್ಮಿಕ ಜ್ಞಾನ ಅದ್ವಿತೀಯ ಮತ್ತು ಅಭೂತಪೂರ್ವವಾಗಿದೆ. ಇದನ್ನು ಪಾಲಿಸಿದರೆ ಭಕ್ತರಿಗೆ ಲಾಭವಾಗುತ್ತದೆ. ಆರ್ಥಿಕ ಲಾಭ, ಆರೋಗ್ಯ ಲಾಭ ಹಾಗೂ ಆಧ್ಯಾತ್ಮಿಕ ಜ್ಞಾನದ ವೃದ್ಧಿ ಮತ್ತು ಆಯುಷ್ಯ ವೃದ್ಧಿಯೂ ಉಂಟಾಗುವುದು.

ಕಬೀರ ಪರಮೇಶ್ವರರು ತಮ್ಮ ಅಮೃತವಾಣಿಯಲ್ಲಿ ಹೀಗೆಂದಿದ್ದಾರೆ;

“ಮಾನುಷ್ ಜನಮ್ ದುರ್ಲಭ್ ಹೈ,

ಯೇ ಮಿಲೇ ನಾ ಬಾರಂಬಾರ್|

ಜೈಸೆ ತರುವರ್ ಸೇ ಪತ್ತಾ ಟೂಟ್ ಗಿರೇ,

ಬಹುರ್ ನಾ ಲಗತಾ ಡಾರ್”||

ಮಾನವ ಜನ್ಮದ ಏಕೈಕ ಉದ್ದೇಶವೇನೆಂದರೆ, ಬ್ರಹ್ಮಾಂಡದ ನಿರ್ಮಾತೃ-ಪರಮ ಅಕ್ಷರ ಬ್ರಹ್ಮನ ಸತ್ಯಸಾಧನೆ ಮಾಡುವುದು ಮತ್ತು ಮೋಕ್ಷ ಪಡೆಯುವುದು. ಆದ್ದರಿಂದ ಈಶ್ವರ ಪ್ರೇಮಿ ಆತ್ಮಗಳಲ್ಲಿ ವಿನಂತಿ. ಸಂತ ರಾಮ್‌ಪಾಲ್ ಮಹಾರಾಜರ ಆಧ್ಯಾತ್ಮಿಕ ಪ್ರವಚನಗಳನ್ನು ಕೇಳಿ ಮತ್ತು ಅವರಿಗೆ ಶರಣಾಗಿ ಮತ್ತು ನಿಮ್ಮ ಉದ್ಧಾರ ಮಾಡಿಕೊಳ್ಳಿ.

ಸಂತ ರಾಮ್‌ಪಾಲ್ ಮಹಾರಾಜರ ಜೀವನ ಚರಿತ್ರೆಯನ್ನು ಆವಶ್ಯಕವಾಗಿ ಓದಿ.

ಅವತಾರ ಪುರುಷ ಸಂತ ರಾಮ್‌ಪಾಲ್ ಮಹಾರಾಜರ ಬಗ್ಗೆ ಭವಿಷ್ಯ ವಾಣಿಗಳು

ಮಹಾನ್ ಭವಿಷ್ಯಗಾರ ಫಲೋರೆನ್ಸ್, ಇಂಗ್ಲೆಂಡ್‌ನ ಕೆಯರೋ, ಜೀನ್ ಡಿಕ್ಸನ್, ಶ್ರೀಮಾನ್ ಚಾರ್ಲ್ಸ್ ಕ್ಲಾರ್ಕ್ ಮತ್ತು ಅಮೆರಿಕಾದ ಶ್ರೀ ಎಂಡರ್‌ಸನ್, ಇಂಗ್ಲೆಂಡ್‌ನ ಶ್ರೀ ವೆಜಿಲೆಟಿನ್, ಶ್ರೀ ಜೆರಾರ್ಡ್ ಕ್ರಾಈಸ್, ಹಂಗರಿಯ ಭವಿಷ್ಯಗಾರ ಬೋರಿಸ್ಕಾ, ಫ್ರಾನ್ಸ್ ನ ಡಾ. ಜಲ್ವೋರೋನ್, ಪ್ರಸಿದ್ಧ ಫ್ರಾನ್ಸೀಸಿ ಭವಿಷ್ಯಗಾರ ನಾಸ್ತ್ರಡಮಸ್, ಇಸ್ರೇಲಿನ ಪ್ರೊಫೆಸರ್ ಹರಾರೆ, ನಾರ್ವೆಯ ಶ್ರೀ ಆನಂದಚಾರ್ಯ, ಮಥುರೆಯ ಜಯಗುರುದೇವ್ ಪಂಥ್‌ದ ಶ್ರೀ ತುಳಸೀದಾಸ್ ಸಾಹೇಬ್ ಹಾಗೂ ಇನ್ನೂ ಮುಂತಾದ ಭವಿಷ್ಯಗಾರರು ಮಹಾನ್ ಸಂತ ರಾಮ್‌ಪಾಲ್ ಮಹಾರಾಜರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಅವತಾರ ವಿಶ್ವದಲ್ಲಿ ಒಂದು ಹೊಸ ಸಭ್ಯತೆ ತರುತ್ತದೆ. ಇದು ಸಂಪೂರ್ಣ ವಿಶ್ವದಲ್ಲಿ ಹರಡುತ್ತದೆ ಎಂದಿದ್ದಾರೆ. ಸಂತ ರಾಮ್‌ಪಾಲ್ ಮಹಾರಾಜರ ಸಮರ್ಥನೆಯಲ್ಲಿ ಅನ್ಯ ಭವಿಷ್ಯಗಾರರ ಭವಿಷ್ಯವಾಣಿಗಳು ಸುತ್ತಲೂ ಶಾಂತಿ ಮತ್ತು ನೆಮ್ಮದಿ ನೆಲಸುತ್ತದೆ. ಆ ಹೊಸ ಸಭ್ಯತೆ ಆಧ್ಯಾತ್ಮದ ಮೇಲೆ ಆಧಾರಿತವಾಗಿರುತ್ತದೆ.

ಅದು ಭಾರತದ ಒಂದು ಗ್ರಾಮೀಣ ಕುಟುಂಬದಲ್ಲಿ ಹುಟ್ಟಿದ ಒಬ್ಬ ಮಹಾನ್ ಆಧ್ಯಾತ್ಮಿಕ ಮುಖಂಡನ ನೇತೃತ್ವದಲ್ಲಿ ಉತ್ಪನ್ನವಾಗುತ್ತದೆ. ಮಹಾನ್ ಆಧ್ಯಾತ್ಮಿಕ ಮುಖಂಡನ ಜೊತೆ ಸಾಮಾನ್ಯ ಜನರ ಸಂಖ್ಯೆ ಬಹಳ ಹೆಚ್ಚಿರುತ್ತದೆ. ಅವರು ಭೌತಿಕವಾದವನ್ನು ಆಧ್ಯಾತ್ಮವಾದದಲ್ಲಿ ಬದಲಿಸುತ್ತಾರೆ. ಮಹಾನ್ ಆಧ್ಯಾತ್ಮಿಕ ಮುಖಂಡ (ಅವತಾರ ಸಂತ ರಾಮ್‌ಪಾಲ್ ಜೀ ಮಹಾರಾಜ)ರ ಮಾರ್ಗದರ್ಶನದಲ್ಲಿ ಭಾರತ ಧಾರ್ಮಿಕ, ಔದ್ಯೋಗಿಕ ಮತ್ತು ಆರ್ಥಿಕ ದೃಷ್ಟಿಯಿಂದ ಪ್ರಪಂಚದ ನೇತೃತ್ವ ವಹಿಸುತ್ತದೆ ಮತ್ತು ಇಡೀ ಪ್ರಪಂಚದಲ್ಲಿ ಭಕ್ತರು ಅವರ ಮೂಲಕ ತಿಳಿಸಲ್ಪಟ್ಟ ಭಕ್ತಿವಿಧಿಯನ್ನು ಸ್ವೀಕರಿಸಬೇಕಾಗುತ್ತದೆ.

 ನಾಸ್ತ್ರಡಮಸ್ ಭವಿಷ್ಯವಾಣಿ ನುಡಿದಿರುವುದೇನೆಂದರೆ ಮಹಾನ್ ಶಾಯರನ್ (ತತ್ವದರ್ಶಿ ಸಂತ) ಹಿಂದು ಸಮುದಾಯದಿಂದ ಸಂಬಂಧಿಸಿದ ಮಧ್ಯಮ ವಯಸ್ಸಿನ (55-60 ವರ್ಷ) 2006ರಲ್ಲಿ ಬೆಳಕಿಗೆ ಬರುವನು. ಅವನು ಭೂಮಿಯ ಮೇಲೆ ಸ್ವರ್ಣಯುಗವನ್ನು ಪ್ರಾರಂಭಿಸುವನು ಮತ್ತು ಶಾಸ್ತ್ರಗಳ ಆಧಾರದಿಂದ ಸತ್ಯ ಭಕ್ತಿ ಪ್ರದಾನಿಸುವನು ಮತ್ತು ಅಜ್ಞಾನವನ್ನು ದೂರ ಮಾಡುವನು. ಇವನ ಪ್ರಸಿದ್ಧಿ ಆಕಾಶಕ್ಕಿಂತ ಮಿಗಿಲಾಗಿರುವುದು. ಅವನು ಆತ್ಮಗಳನ್ನು ಶೈತಾನನಿಂದ ಮುಕ್ತಗೊಳಿಸುವನು ಮತ್ತು ಅವುಗಳಿಗೆ ಸರ್ವೋಚ್ಛ ಶಾಂತಿ ಪ್ರಾಪ್ತಿಯಾಗುವಂತೆ ಮಾಡುವನು.

ಸಂತ ರಾಮ್‌ಪಾಲ್ ರವರ ಬಗ್ಗೆ ನಾಸ್ತ್ರಡಮಸ್ ನ ಭವಿಷ್ಯವಾಣಿಯನ್ನು ಆವಶ್ಯವಾಗಿ ಓದಿ.

ಸಂತ ರಾಮ್‌ಪಾಲ್ ರವರ 73ನೇ ಅವತರಣ ದಿವಸ ಕಾರ್ಯಕ್ರಮದ ನೇರ ಪ್ರಸಾರ ನೋಡಿ.

ಜಗದ್ಗುರು ತತ್ವದರ್ಶಿ ಸಂತ ರಾಮ್‌ಪಾಲ್ ಮಹಾರಾಜರ ಅವತರಣ ದಿವಸದ ಅಂಗವಾಗಿ ಸತ್ಯಲೋಕ ಆಶ್ರಮ ಧನಾನಾ ಧಾಮ ಸೋನೀಪತ್ (ಹರಿಯಾಣ), ಸತ್ಯಲೋಕ ಆಶ್ರಮ ಭಿವಾನಿ(ಹರಿಯಾಣ), ಸತ್ಯಲೋಕ ಆಶ್ರಮ ಕುರುಕ್ಷೇತ್ರ (ಹರಿಯಾಣ), ಸತ್ಯಲೋಕ ಆಶ್ರಮ ಶಾಮಲೀ (ಉತ್ತರ ಪ್ರದೇಶ), ಸತ್ಯಲೋಕ ಆಶ್ರಮ ಖಮಾಣೋ (ಪಂಜಾಬ್), ಸತ್ಯಲೋಕ ಆಶ್ರಮ ಧುರಿ (ಪಂಜಾಬ್), ಸತ್ಯಲೋಕ ಆಶ್ರಮ ಬೈತೂಲ್ (ಮಧ್ಯಪ್ರದೇಶ), ಸತ್ಯಲೋಕ ಆಶ್ರಮ ಸೋಜತ್ (ರಾಜಸ್ಥಾನ), ಸತ್ಯಲೋಕ ಆಶ್ರಮ ಧನುಷಾ (ನೇಪಾಳ) ಒಟ್ಟು 9 ಆಶ್ರಮಗಳಲ್ಲಿ 6ರಿಂದ 8 ಸೆಪ್ಟೆಂಬರ್ ವರೆಗೆ ಅಖಂಡ ಪಠಣ, ವಿಶಾಲ ದಾಸೋಹ, ವರದಕ್ಷಿಣೆ ಮುಕ್ತ ವಿವಾಹ, ರಕ್ತದಾನ ಶಿಬಿರ, ವಿಶಾಲ ಸತ್ಸಂಗ ಸಮಾರಂಭ ಮತ್ತು ಆಧ್ಯಾತ್ಮಿಕ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ನೀವೆಲ್ಲಾ ಅಣ್ಣ ತಮ್ಮ, ಅಕ್ಕ ತಂಗಿಯರಲ್ಲಿ ನಿವೇದಿಸುವುದೇನೆಂದರೆ, ನೀವು ಸಂತ ರಾಮ್‌ಪಾಲ್ ಮಹಾರಾಜರ ಅವತರಣ ದಿವಸದಂದು ನಿಮ್ಮ ಕುಟುಂಬ, ಬಂಧು ಬಾಂಧವರು, ಸಂಬಂಧಿಗಳ ಜೊತೆ ಆಶ್ರಮಕ್ಕೆ ದಯಮಾಡಿ ಬಂದು ಆದಿ ಸನಾತನ ಧರ್ಮ ಮತ್ತು ಮಾನವ ಧರ್ಮದ ಪುನರುತ್ಥಾನದ ಸಾಕ್ಷಿಯಾಗಿ.

ಈ ಭವ್ಯ ಕಾರ್ಯಕ್ರಮದ ನೇರ ಪ್ರಸಾರ 8ನೇ ಸೆಪ್ಟೆಂಬರ್ 2023ರಂದು ಬೆಳಿಗ್ಗೆ 9.15ರಿಂದ ಸಾಧನಾ ಟಿವಿಯಲ್ಲಿ ಮತ್ತು ಬೆಳಿಗ್ಗೆ 9.30ರಿಂದ ಪಾಪುಲರ್ ಟಿವಿಯಲ್ಲಿ ಆಗುತ್ತದೆ. ಜೊತೆಗೆ ಈ ವಿಶೇಷ ಕಾರ್ಯಕ್ರಮದ ನೇರ ಪ್ರಸಾರ ನೀವು ನಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂನಲ್ಲಿಯೂ ನೋಡಬಹುದು. ಅದು ಈ ಕೆಳಕಂಡಂತಿದೆ:-

  • Facebook page:- spiritual leader saint Rampal ji Maharaj
  • You tube :- Sant Rampal ji Maharaj
  • Twitter : @saintRampalJiM

ಅವತಾರ ಪುರುಷ ಸಂತ ರಾಮ್‌ಪಾಲ್ ಮಹಾರಾಜರ ವಿಷಯದಲ್ಲಿ ಪವಿತ್ರ ಶಾಸ್ತ್ರಗಳಿಂದ ಸಾಕ್ಷ್ಯಗಳು

ಸಂತ ರಾಮ್‌ಪಾಲ್ ಮಹಾರಾಜರು ಕಬೀರ ಭಗವಂತನ ಅವತಾರ. ಇವರ ಬಗ್ಗೆ ಪವಿತ್ರ ಗ್ರಂಥ, ವೇದ, ಪವಿತ್ರ ವೇದಗಳಲ್ಲಿ ಪೂರ್ಣ ಪರಮಾತ್ಮನ ಅವಧಾರಣೆ (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ) ಶ್ರೀ ಮದ್ಭಗವದ್ಗೀತೆಯ 4ನೇ ಅಧ್ಯಾಯದ 32-34ನೇ ಶ್ಲೋಕ, 15ನೇ ಅಧ್ಯಾಯದ 1-4 ಶ್ಲೋಕ ಮತ್ತು 17ನೇ ಅಧ್ಯಾಯದ 23ನೇ ಶ್ಲೋಕ, ಪವಿತ್ರ ಕುರಾನ್ ಶರೀಫ್ (ಇಸ್ಲಾಮ್)ನಲ್ಲಿ ಸರ್ವಶಕ್ತಿವಂತ ಅವಿನಾಶಿ ಭಗವಂತ (ಅಲ್ಲಾಹ್-ಕಬೀರ್)-ಸೂರತ್ ಫುರ್‌ಕಾನೀ 25:52-59, ಪವಿತ್ರ ಬೈಬಲ್, ಪವಿತ್ರ ಶ್ರೀ ಗುರು ಗ್ರಂಥ್ ಸಾಹೇಬ್ ಸಾಕಷ್ಟು ಸಾಕ್ಷಿ ಒದಗಿಸುತ್ತವೆ. ಭಾಈ ಬಾಲೆವಾಲೀ ಜನ್ಮ ಸಾಖಿಯಲ್ಲಿ ಉಲ್ಲೇಖವಿದೆ. ಸರ್ವೋಚ್ಛ ಸಂತನು ಜಾಟ್ ಸಮುದಾಯದಿಂದ ಬರುವನು ಮತ್ತು ಹರಿಯಾಣಾದ ಬರವಾಲಾ (ಈ ಮೊದಲು ಹರಿಯಾಣ ರಾಜ್ಯವು ಪಂಜಾಬ್ ನಲ್ಲೇ ಇತ್ತು) ದಿಂದ ಆಧ್ಯಾತ್ಮ್ ಪ್ರವಚನ ಪ್ರದಾನಿಸುವನು. ಈ ಎಲ್ಲಾ ಸಾಕ್ಷ್ಯಗಳು ಸಂತ ರಾಮ್‌ಪಾಲ್ ಮಹಾರಾಜರಿಗೆ ಸರಿಯಾಗಿ ಅನ್ವಯಿಸುತ್ತದೆ.

ಅವತಾರ ಪುರುಷ ಸಂತ ರಾಮ್‌ಪಾಲ್ ಮಹಾರಾಜರ ವಿಷಯದಲ್ಲಿ ಸರ್ವಶಕ್ತಿವಂತ ಕಬೀರರ ಭವಿಷ್ಯವಾಣಿ

ಸಂದರ್ಭ: ಪವಿತ್ರ ಕಬೀರ್ ಸಾಗರ್, ಅಧ್ಯಾಯ ಬೋಧ್ ಸಾಗರ್, ಪುಟ 134 ಮತ್ತು 171 

ಪವಿತ್ರ ಕಬೀರ ಸಾಗರ ಅರ್ಥಾತ್ ಸೂಕ್ಷ್ಮವೇದದಲ್ಲಿ ಸರ್ವಶಕ್ತಿವಂತ ಕಬೀರರ ಅಮೃತ ವಾಣಿ ಇದೆ. ಅದರಲ್ಲಿ ಉಲ್ಲೇಖವಿದೆ. ಯಾವಾಗ ಕಲಿಯುಗ 5505 ವರ್ಷ ಕಳೆಯುವುದೋ, ಆಗ ಅವರ 13ನೇ ವಂಶ ಸತ್ಯ ಆಧ್ಯಾತ್ಮಿಕ ಜ್ಞಾನ ಪ್ರದಾನ ಮಾಡಲು ಬರುವನು ಮತ್ತು ಶಾಸ್ತ್ರವಿರುದ್ಧ ಭಕ್ತಿ ವಿಧಾನ ಮತ್ತು ಜ್ಞಾನ ಹಾಗೂ ಸುಳ್ಳಿನ ಧಾರ್ಮಿಕ ಆಚರಣೆಗಳನ್ನು ಅಳಿಸಿ ಶಾಂತಿಯ ಸ್ಥಾಪನೆ ಮಾಡುವನು. ಅವನು ಸಾಧಕರಿಗೆ ನಿಜವಾದ ಮೋಕ್ಷ ಮಂತ್ರ ಪ್ರದಾನಿಸಲು ಅಧಿಕೃತನಾಗಿರುತ್ತಾನೆ (ಪ್ರಮಾಣ ಭಗವದ್ಗೀತೆಯ 17ನೇ ಅಧ್ಯಾಯದ 23ನೇ ಶ್ಲೋಕ) ಎಲ್ಲಾ ಆತ್ಮಗಳು ಕೆಟ್ಟತನ ಬಿಟ್ಟು ಬಿಡುತ್ತವೆ ಮತ್ತು ಸದಾಚಾರಿಯಾಗುತ್ತವೆ. ಹಾಗೂ ಕಬೀರ ಪರಮಾತ್ಮನ ಅವತಾರದ ಮಹಿಮೆ ಹೇಳುತ್ತವೆ. ಕಲಿಯುಗದಲ್ಲಿ 1997ರಲ್ಲಿ ತನ್ನ 5505 ವರ್ಷಗಳು ಪೂರ್ಣಗೊಳಿಸಿ, ಅದೇ ವರ್ಷ ಸರ್ವಶಕ್ತಿವಂತ ಕಬೀರನು ಎಲ್ಲಾ ಧರ್ಮಗಳ ಅನುಸಾರ ಅಮರ ಪರಮಾತ್ಮನ ಪ್ರಮಾಣಿತ ಮಾಹಿತಿಯನ್ನು ಮಹಾನ್ ಸಂತ ರಾಮ್‌ಪಾಲ್ ಮಹಾರಾಜರಿಂದ ಸಿಕ್ಕಿತು ಮತ್ತು ಅವರಿಗೆ ಪವಿತ್ರ ಈಶ್ವರ-ಪ್ರೇಮಿ ಆತ್ಮಗಳಿಗೆ ನಾಮದೀಕ್ಷೆ ನೀಡುವ ಅನುಮತಿ ದೊರೆಯಿತು. 

ಇದರ ಸಾಕ್ಷಿ ಕಬೀರ ಪರಮೇಶ್ವರನ ಅಮೃತವಾಣಿಯಲ್ಲಿದೆ.

“ಪಾಂಚ್ ಸಹಸ್ರ್ ಅರು ಪಾಂಚಸೌ,

ಜಬ್ ಕಲಯುಗ್ ಬೀತ್ ಜಾಎ|

ಮಹಾಪುರುಷ್ ಫರಮಾನ್ ತಬ್,

ಜಗ್ ತಾರನ್ ಕೋ ಆಎ”||

ಆ ಮಹಾನ್ ಪುರುಷ ಬೇರೆ ಯಾರೂ ಅಲ್ಲ, ಸಂತ ರಾಮ್‌ಪಾಲ್ ಮಹಾರಾಜರು, ಸತ್ಯಪುರುಷ/ಭಗವಂತ ಕಬೀರನ ಅವತಾರವೇ ಆಗಿದ್ದಾರೆ. ಇವರ ಅವತಾರ ದಿವಸ ಪ್ರತೀವರ್ಷ 8ನೇ ಸೆಪ್ಟೆಂಬರ್ ನಂದು ಆಚರಿಸಲಾಗುತ್ತದೆ.

ಸಾಮಾಜಿಕ ಉತ್ಥಾನದಲ್ಲಿ ಸಂತ ರಾಮ್‌ಪಾಲ್ ರವರ ಕೊಡುಗೆ

ಸಮಾಜದಲ್ಲಿ ಹರಡಿರುವ ವರದಕ್ಷಿಣೆಯಂತಹ ಕೆಟ್ಟ ಪದ್ಧತಿಯನ್ನು ಬೇರು ಸಹಿತ ಕಿತ್ತೊಗೆಯುವುದರ ಜೊತೆಗೆ ಸಾಮಾಜಿಕ ಉತ್ಥಾನಕ್ಕಾಗಿ ಆಧ್ಯಾತ್ಮಿಕ ಗುರುವಾದ ಸಂತ ರಾಮ್‌ಪಾಲ್ ಮಹಾರಾಜರು ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಸಂತ ರಾಮ್‌ಪಾಲ್ ಮಹಾರಾಜರ ಶಿಷ್ಯರು ವಿವಾಹದಲ್ಲಿ ವರದಕ್ಷಿಣೆ ನೀಡುವುದಿಲ್ಲ. ವರದಕ್ಷಿಣೆ ಪಡೆಯುವುದಿಲ್ಲ. 17 ನಿಮಿಷದ ರಮೈಣಿಯ ಪಠಣ ಮಾಡಲಾಗುತ್ತದೆ. ಅದು ನವ ವಿವಾಹಿತ ದಂಪತಿಯನ್ನು ಒಂದು ಮುರಿಯಲಾರದ ಬಂಧನದಲ್ಲಿ ಬಂಧಿಸಲ್ಪಡುತ್ತಾರೆ. ಸಂತ ರಾಮ್‌ಪಾಲ್ ಮಹಾರಾಜರ ಮೂಲಕ ಪ್ರದಾನಿಸಲ್ಪಟ್ಟ ಸತ್ಯ ಆಧ್ಯಾತ್ಮಿಕ ಜ್ಞಾನದಿಂದ ಮಾದಕ ವಸ್ತುಗಳ ಸೇವನೆ, ಲಂಚಗೂಳಿತನ, ಭ್ರಷ್ಟಾಚಾರ, ಹೆಣ್ಣು ಭ್ರೂಣ ಹತ್ಯೆಯಂತಹ ಕೆಟ್ಟ ಸಾಮಾಜಿಕ ಪದ್ಧತಿಗಳನ್ನು ಕೊನೆಗೊಳಿಸಲಾಯಿತು.

ಸಂತ ರಾಮ್‌ಪಾಲ್ ಮಹಾರಾಜರ ಯಾವ ಶಿಷ್ಯನೂ ಮಾದಕ ವಸ್ತು ಸೇವನೆ ಮಾಡುವುದಿಲ್ಲ ಮತ್ತು ಯಾವುದೇ ಕೆಟ್ಟ ಆಚರಣೆ ಮಾಡುವುದಿಲ್ಲ. ಕೇವಲ ಶಾಸ್ತ್ರಅನುಕೂಲ ಸತ್ಯಭಕ್ತಿ ಮಾಡುತ್ತಾನೆ. ಏಕೆಂದರೆ ಅವನಿಗೆ ಮಾನವ ಜನ್ಮದ ಏಕಮಾತ್ರ ಉದ್ದೇಶ ಶಾಸ್ತ್ರಗಳ ಪ್ರಕಾರ ಸತ್ಯ ಭಕ್ತಿ ಮಾಡುವುದು ಮತ್ತು ಮೋಕ್ಷ ಪಡೆಯುವುದು ಎಂದು ಗೊತ್ತಾಗಿದೆ. ಸಂತ ರಾಮ್‌ಪಾಲ್ ಮಹಾರಾಜರು ಸಮಾಜದಲ್ಲಿ ಪ್ರಚಲಿತವಾಗಿರುವ ಪ್ರತಿಯೊಂದು ಧಾರ್ಮಿಕ ಪಾಖಂಡವನ್ನು ಬಹಿರಂಗಗೊಳಿಸಿದ್ದಾರೆ. ಮತ್ತು ಭಕ್ತಿಯ ಸತ್ಯಮಾರ್ಗವನ್ನು ತೋರಿಸಿದ್ದಾರೆ. ಇದರಿಂದ ಲಕ್ಷಾಂತರ ಅನುಯಾಯಿಗಳು ಸಮೃದ್ಧ ಜೀವನವನ್ನು ನಡೆಸುತ್ತಿದ್ದಾರೆ.

ಅವತರಣ (ಅವತಾರ) ದಿವಸ ಹೇಗೆ ಆಚರಿಸಲಾಗುತ್ತದೆ?

8 ಸೆಪ್ಟೆಂಬರ್ 2023ರಂದು ಸಂತ ರಾಮ್‌ಪಾಲ್ ಮಹಾರಾಜರ 73ನೇ ಅವತರಣ ದಿವಸ. ಈ ಶುಭ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಅಲ್ಲಿ ಸಂತ ರಾಮ್‌ಪಾಲ್ ಮಹಾರಾಜರ ಮೂಲಕ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಅಮೃತವಾಣಿಯ ವರ್ಷಧಾರೆ ಸುರಿಯಲಾಗುತ್ತದೆ. ಅವರ ಕೃಪೆಯಿಂದ ಭಕ್ತ ಆತ್ಮಗಳ ವರ್ತಮಾನ ಜೀವನ ಮತ್ತು ಮರಣಾ ನಂತರದ ಜೀವನವೂ ಸರಳವಾಗುತ್ತದೆ. ಯಾರು ಅವರ ಮೂಲಕ ನಿರ್ಧಾರಿತಗೊಂಡ ಭಕ್ತಿಯ ನಿಯಮಗಳಲ್ಲಿ ಇದ್ದು ಭಕ್ತಿಮಾಡುತ್ತಾರೋ, ಆ ಎಲ್ಲ ಸತ್ಯ ಭಕ್ತರನ್ನು ಕಾಲನ ಜಾಲದಿಂದ ಮುಕ್ತರನ್ನಾಗಿಸುವ ಗ್ಯಾರಂಟಿ ನೀಡುತ್ತಾರೆ. ಅವತರಣದ ದಿನ ಸಂತ ಗರೀಬ್ ದಾಸರ ಪವಿತ್ರ ಸದ್ಗ್ರಂಥ ಸಾಹೇಬನ 3-5 ದಿನಗಳವರೆಗೆ ಪಠಣ ಮಾಡಲಾಗುತ್ತದೆ. ಭವ್ಯ ಸಾಮೂಹಿಕ ದಾಸೋಹ (ಉಚಿತ ಮತ್ತು ಸ್ವಾದಿಷ್ಟ್ಯ ಆಹಾರ)ದ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಯಾರು ಬೇಕಾದರೂ-ಯಾವ ಜಾತಿ, ಪಂಥ, ಧರ್ಮದವರಾದರೂ ದಾಸೋಹದ ಆನಂದ ಪಡೆಯಬಹುದು. ರಕ್ತದಾನ, ಅಂಗದಾನ ಶಿಬಿರವನ್ನು ಆಯೋಜಿಸುತ್ತಾರೆ. ಜೊತೆಗೆ ವರದಕ್ಷಿಣೆ ಮುಕ್ತ ವಿವಾಹ ಅಂದರೆ ರಮೈಣಿಯ ವ್ಯವಸ್ಥೆ ಮಾಡಲಾಗುತ್ತದೆ.

ಸಂತ ರಾಮ್‌ಪಾಲ್ ಮಹಾರಾಜರ ಮೂಲಕ ಮಾಡಲಾದ ಸಮಾಜ ಸುಧಾರಣೆಯ ಪ್ರಶಂಸನೀಯ ಕಾರ್ಯ

ಬನ್ನಿ, ತತ್ವದರ್ಶಿ ಸಂತ ರಾಮ್‌ಪಾಲ್ ಮಹಾರಾಜ ರವರ ಮೂಲಕ ಒಂದು ಮಹಾನ್ ಸಮಾಜ ಸುಧಾರಕನ ರೂಪದಲ್ಲಿ ಮಾಡಲಾದ ಅದ್ಭುತ ಕಾರ್ಯಗಳ ಬಗ್ಗೆ ತಿಳಿಯೋಣ. ಸಂತ ರಾಮ್‌ಪಾಲ್ ಮಹಾರಾಜ ರವರ ಮುಖ್ಯ ಉದ್ದೇಶ ಈ ಕೆಳಕಂಡಂತಿದೆ.

ಮಾದಕ ವಸ್ತುಗಳನ್ನು ಸಮಾಜದಿಂದ ದೂರ ಮಾಡುವುದು

ಜಗದ್ಗುರು ತತ್ವದರ್ಶಿ ಸಂತ ರಾಮ್‌ಪಾಲ್ ಮಹಾರಾಜರು ಸಮಾಜ ಸುಧಾರಕನ ರೂಪದಲ್ಲಿ ಅದ್ಭುತ ಕಾರ್ಯ ಮಾಡುತ್ತಿದ್ದಾರೆ. ಮಾದಕ ವಸ್ತುಗಳು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಆದಾಗ್ಯೂ ಸರ್ಕಾರವು ಮದ್ಯಪಾನ, ಧೂಮಪಾನ, ಡ್ರಗ್ಸ್ ನಂತಹ ಮಾದಕ ವಸ್ತುಗಳನ್ನು ಆಂಶಿಕ ರೂಪದಲ್ಲಿ ಕೊನೆಗೊಳಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಲಕ್ಷಾಂತರ ಹಣವನ್ನು ಖರ್ಚು ಮಾಡಿದರೂ ಸಹ ಎಲ್ಲಾ ಯೋಜನೆಗಳು ವ್ಯರ್ಥವಾಗುತ್ತಿವೆ. ಏಕೆಂದರೆ ಸರ್ಕಾರಕ್ಕೆ ಇಂತಹ ಮದ್ಯ-ಮಾದಕ ವ್ಯಸನಿಗಳಿಂದ ಹೆಚ್ಚಿನ ಆದಾಯ ಬರುತ್ತದೆ. ಜನರಿಗೆ ತತ್ವಜ್ಞಾನ ಅಂದರೆ ಆಧ್ಯಾತ್ಮಿಕ ಜ್ಞಾನವಿಲ್ಲ. ಒಂದು ವೇಳೆ ಇದ್ದಿದ್ದರೆ ಮಾದಕ ವಸ್ತು ಸೇವನೆ ಮಾಡುವುದಿರಲಿ, ಅದನ್ನು ಮುಟ್ಟುತ್ತಲೂ ಇರಲಿಲ್ಲ. ಸಂತ ರಾಮ್‌ಪಾಲ್ ಮಹಾರಾಜರ ಶಿಷ್ಯರು ಸತ್ಯ ಆಧ್ಯಾತ್ಮಿಕ ಜ್ಞಾನದಿಂದ ಪರಿಚಿತರು. ಅವರು ಮಾದಕ ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ಅರಿತಿದ್ದಾರೆ. ಮಾದಕ ವಸ್ತು ಪ್ರಾಪ್ತಿಯಲ್ಲಿ ಒಂದು ದೊಡ್ಡ ತೊಡಕಿವೆ. ತತ್ವದರ್ಶಿ ಸಂತನ ಪ್ರತಿಯೊಬ್ಬ ಭಕ್ತನೂ ಈ ತತ್ವವನ್ನು ಅರಿತಿದ್ದಾನೆ. ಅದೇನೆಂದರೆ ಮಾನವ ಜನ್ಮದ ಏಕೈಕ ಉದ್ದೇಶವೇನೆಂದರೆ ಸತ್ಯ ಭಕ್ತಿ ಮಾಡುವುದರಿಂದ ಮೋಕ್ಷ ಪ್ರಾಪ್ತಿ. ಆದ್ದರಿಂದ ಅವರು ಜೀವನವನ್ನು ಹಾಳು ಮಾಡಿಕೊಳ್ಳುವ ವ್ಯಸನಗಳಿಂದ ಪ್ರಭಾವಿತರಾಗುವುದಿಲ್ಲ. ನಿಮ್ಮೆಲ್ಲರಲ್ಲಿ ಒಂದು ಪ್ರಾರ್ಥನೆ. ಮಾದಕ ಪದಾರ್ಥ ಸೇವನೆ ಬಿಟ್ಟುಬಿಡಿ. ಒಂದು ವೇಳೆ ಬಿಡಲು ಸಾಧ್ಯವಾಗದಿದ್ದರೆ ಸಂತ ರಾಮ್‌ಪಾಲ್ ಮಹಾರಾಜ ರವರ ಸಹಾಯ ಅವಶ್ಯವಾಗಿ ಪಡೆಯಿರಿ. 

ಸತ್ಯಭಕ್ತಿ ಪ್ರದಾನ ಮಾಡಿ ವಿಶ್ವಕ್ಕೆ ಮೋಕ್ಷ ಪ್ರದಾನಿಸುವುದು

 ಕಾಲನ ಪ್ರಪಂಚದಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳು ದಾರಿತಪ್ಪಿದ್ದಾರೆ. ಮನಸ್ಸಿಗೆ ಬಂದ ಪೂಜೆ ಮಾಡಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಶಾಸ್ತ್ರವಿರುದ್ಧ ಪೂಜೆ ಮಾಡುವುದರಿಂದ ಸಾಧಕನಿಗೆ ಯಾವುದೇ ಲಾಭ ಸಿಗುವುದಿಲ್ಲ. ಸಂತ ರಾಮ್‌ಪಾಲ್ ಮಹಾರಾಜರು ಸಮಾಜ ಸುಧಾರಕನ ರೂಪದಲ್ಲಿ ಶಾಸ್ತ್ರಗಳ ಆಧಾರಿತ ಉಪಾಸನೆ ಮಾಡಿಸಿ ಜನರ ಜೀವನದಲ್ಲಿ ಬದಲಾವಣೆ/ಚಮತ್ಕಾರ ಮಾಡುತ್ತಿದ್ದಾರೆ. ಇದರಿಂದ ಅಸಂಭವ ಎನ್ನಿಸುವ ಘಟನೆಯೂ ಸಂಭವವಾಗುತ್ತಿದೆ. ಸಾಧಕರಿಗೆ ಅಸಂಖ್ಯ ಲಾಭವಾಗುತ್ತಿವೆ. ಭಕ್ತರಿಗೆ ದಿನ-ಪ್ರತಿದಿನ ಅವರಲ್ಲಿ ವಿಶ್ವಾಸ ಮೂಡುತ್ತಿದೆ. ಅವರ ಲಕ್ಷ್ಯ ಸತ್ಯ ಆಧ್ಯಾತ್ಮಿಕ ಜ್ಞಾನವನ್ನು ಇಡೀ ಪ್ರಪಂಚಕ್ಕೆ ಹರಡುವುದೇ ಆಗಿದೆ. ಏಕೆಂದರೆ ಅವರು ಕಸಾಯಿ ಬ್ರಹ್ಮನಾದ ಕಾಲನ ಜಾಲದಲ್ಲಿ ಸಿಲುಕಿರುವ ಎಲ್ಲಾ ಭ್ರಮಿತ ಆತ್ಮಗಳನ್ನು ಮುಕ್ತಿಗೊಳಿಸಿ ಅವರ ಅಸಲೀ ಮನೆಯಾದ ಶಾಶ್ವತ ಸ್ಥಾನವಾದ ಸತ್ಯಲೋಕಕ್ಕೆ ತಲುಪಿಸಲು ಇಚ್ಛಿಸುತ್ತಾರೆ.

ಸಮಾಜದಿಂದ ಜಾತಿ ಪದ್ಧತಿಯ ಭೇದ ಭಾವವನ್ನು ಅಳಿಸುವುದು

ಕಾಲಬ್ರಹ್ಮನ 21 ಬ್ರಹ್ಮಾಂಡಗಳಲ್ಲಿ ಇರುವ ಎಲ್ಲಾ ಪ್ರಾಣಿಗಳು ಒಬ್ಬ ಈಶ್ವರನ ಸಂತಾನ. ಅಜ್ಞಾನದಿಂದ ನಾವು ವಿಭಿನ್ನ ಧರ್ಮಗಳಲ್ಲಿ ಜಾತಿಗಳಲ್ಲಿ ಮತ್ತು ಪಂಥಗಳಲ್ಲಿ ವಿಭಜಿತಗೊಂಡಿದ್ದೇವೆ ಮತ್ತು ನಮ್ಮ ಸುಖದಾಯಿ ಪರಮಪಿತಾ ಪರಮಾತ್ಮನನ್ನು ಮರೆತಿದ್ದೇವೆ. ಮಹಾನ್ ಸಮಾಜ ಸುಧಾರಕ ಸಂತ ರಾಮ್‌ಪಾಲ್ ಮಹಾರಾಜರು ಜಗತ್ತಿನಾದ್ಯಂತ ಜನರಿಗೆ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಒಂದುಗೂಡಿಸುತ್ತಿದ್ದಾರೆ ಮತ್ತು ಮಾನವ ಸಮಾಜಕ್ಕೆ ಸರಿಯಾದ ಆಧ್ಯಾತ್ಮಿಕ ಮಾರ್ಗವನ್ನು ತೋರಿಸುತ್ತಿದ್ದಾರೆ. ಮತ್ತು ತಮ್ಮ ಜ್ಞಾನದಿಂದ ಅವರ ಆತ್ಮಗಳನ್ನು ಶುದ್ಧಿ ಮಾಡುತ್ತಿದ್ದಾರೆ. ಆ ಕಾರಣದಿಂದ ಅವರ ಅನುಯಾಯಿಗಳು ನಾವೆಲ್ಲಾ ಒಂದೇ ಮತ್ತು ಒಬ್ಬನೇ ಪರಮಾತ್ಮನ ಮಕ್ಕಳು, ಆದ್ದರಿಂದ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾರೊಂದಿಗೂ ಭೇದಭಾವ ಮಾಡಬಾರದು ಎಂದು ಚೆನ್ನಾಗಿ ಅರಿತಿದ್ದಾರೆ.

ಯುವಕರಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಜಾಗೃತಿ ತರುವುದು

ಇಂದಿನ ದಿನಗಳಲ್ಲಿ ಪ್ರಚಲಿತವಾಗಿರುವ ಶಿಕ್ಷಣ ಪದ್ಧತಿಯು ಯುವಕರನ್ನು ಆಧ್ಯಾತ್ಮದಿಂದ ದೂರ ಮಾಡುತ್ತಿದೆ. ಯುವ ಪೀಳಿಗೆಯ ಏಕೈಕ ಗುರಿ ಎಂದರೆ ಭೌತಿಕ ಲಾಭವನ್ನು ಪಡೆದು ಕೋಟ್ಯಧಿಪತಿ ಆಗುವುದೇ ಆಗಿದೆ. ಇದು ತತ್ವಜ್ಞಾನದ ಕೊರತೆಯಿಂದ ಆಗಿದೆ. ತತ್ವದರ್ಶಿ ಸಂತ ರಾಮ್‌ಪಾಲ್ ಮಹಾರಾಜರು ಏಕಮಾತ್ರ ಸಮಾಜ ಸುಧಾರಕರ ರೂಪದಲ್ಲಿ ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಯುವ ಪೀಳಿಗೆಗೆ ಉಚ್ಚ ನೈತಿಕ ಮೌಲ್ಯಗಳನ್ನು ಬಿತ್ತುತ್ತಿದ್ದಾರೆ. ಇದರಿಂದ ಮಾನವ ಜನ್ಮವು ಅತ್ಯಧಿಕ ಬೆಲೆ ಉಳ್ಳದ್ದು ಎಂದು ಯುವ ಪೀಳಿಗೆ ತಿಳಿಯಲು ಅನುಕೂಲವಾಗುತ್ತಿದೆ. ಕೇವಲ ಭೌತಿಕ ಧನ ಸಂಗ್ರಹಣೆಯಿಂದ ಜೀವನ ಹಾಳು ಮಾಡಿಕೊಳ್ಳಬಾರದು, ಬದಲಾಗಿ ಸತ್ಯಭಕ್ತಿ ಮಾಡುವ ಕಡೆಗೆ ಲಕ್ಷ್ಯ ವಿರಬೇಕು. ನಂತರದಲ್ಲಿ ಅದು ಅವರ ಜೊತೆ ಬರುತ್ತದೆ. ಕಾಲನ ಜಗತ್ತಿನಲ್ಲಿ ಬದುಕಲು ಬೇಕಾದ ಆವಶ್ಯಕ ವಸ್ತುಗಳಿಗಾಗಿ ಪ್ರಯತ್ನಪಡುವುದರ ಜೊತೆಗೆ ಮಾನವ ಜನ್ಮದ ಏಕೈಕ ಉದ್ದೇಶವನ್ನು ಮರೆಯಬಾರದು. ಅದು ಸತ್ಯಭಕ್ತಿ ಮಾಡುವುದು ಮತ್ತು ಮೋಕ್ಷ ಪ್ರಾಪ್ತಿ ಎಂದು ಮರೆಯಬಾರದು. ಸಂತ ರಾಮ್‌ಪಾಲ್ ಮಹಾರಾಜರ ಯುವ ಶಿಷ್ಯರಲ್ಲಿ ಉಚ್ಛ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳಿವೆ. ಈ ನೈತಿಕ ಪರಿವರ್ತನೆ ಸತ್ಯಜ್ಞಾನದ ಪರಿಣಾಮವಾಗಿದೆ. ಇದು ಸಂತ ರಾಮ್‌ಪಾಲ್ ಮಹಾರಾಜರು ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಪ್ರದಾನಿಸುತ್ತಿದ್ದಾರೆ.

ಸಮಾಜದಿಂದ ವರದಕ್ಷಿಣೆಯಂತಹ ಕೆಟ್ಟ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯುವುದು

 ಹೆಣ್ಣು ಮಕ್ಕಳು ಕುಟುಂಬದಲ್ಲಿ ದೇವರ ವರ ಎಂದು ಭಾವಿಸಬೇಕು. ತಂದೆ-ತಾಯಿಗೆ ಮಗ ಎಷ್ಟು ಅಮೂಲ್ಯನೋ, ಅಷ್ಟೇ ಒಬ್ಬ ಮಗಳು ಅಮೂಲ್ಯಳು. ಆದರೆ ಕಾಲನ ಜಗತ್ತಿನಲ್ಲಿ ವರದಕ್ಷಿಣೆಯ ತಪ್ಪು ಪರಂಪರೆ ಮತ್ತು ಪದ್ಧತಿಯ ಕಾರಣ ಜನರು ಈ ತಥ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಮನೆಯ ಮಗಳನ್ನು ಭಾರ ಎಂದು ಭಾವಿಸಿದ್ದಾರೆ. ಏಕೆಂದರೆ ಅವಳ ಮದುವೆಗೆ ತುಂಬಾ ಹಣ ಖರ್ಚು ಮಾಡಬೇಕಾಗುತ್ತದೆ. ಸಮಾಜದಲ್ಲಿ ಪ್ರಚಲಿತವಾಗಿರುವ ವರದಕ್ಷಿಣೆಯಂತಹ ಕೆಟ್ಟ ಪದ್ಧತಿ ಕುಟುಂಬಕ್ಕೆ ಶಾಪವಾಗಿ ಪರಿಣಮಿಸಿದೆ. ವಿಶೇಷವಾಗಿ ಆ ಬಡ ಕುಟುಂಬಗಳಿಗೆ ತಮ್ಮ ಮಗಳ ಮದುವೆ ಖರ್ಚನ್ನು ಭರಿಸುವ ಶಕ್ತಿ ಇರುವುದಿಲ್ಲ. ಸಮಾಜದಿಂದ ಈ ಅನಿಷ್ಟವನ್ನು ತೊಲಗಿಸಲು ಮಹಾನ್ ಸಮಾಜ ಸುಧಾರಕ ಸಂತ ರಾಮ್‌ಪಾಲ್ ಮಹಾರಾಜರು ಅದ್ಭುತ ಕೆಲಸ ಮಾಡಿದ್ದಾರೆ. ಅವರ ಶಿಷ್ಯರು ವಿವಾಹದಲ್ಲಿ ವರದಕ್ಷಿಣೆ ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ. ರಮೈನೀ ಎಂಬ ವಿವಾಹದಲ್ಲಿ 33 ಕೋಟಿ ದೇವರ ಆಹ್ವಾನ ಮಾಡುತ್ತಾ 17 ನಿಮಿಷದಲ್ಲಿ ಬಹಳ ಸರಳವಾಗಿ ವಿವಾಹ ಮಾಡಲಾಗುತ್ತದೆ. ವಿವಾಹದಲ್ಲಿ ಯಾವುದೇ ಆಡಂಬರ ಇರುವುದಿಲ್ಲ. ನವವಧುವಿಗೆ ಒಂದು ಸುಖಮಯ ಮತ್ತು ಸಮೃದ್ಧ ಜೀವನ ನಡೆಸಲು, ಸತ್ಯ ಭಕ್ತಿ ಮಾಡಲು ಮತ್ತು ಮುಕ್ತಿ ಪಡೆಯಲು ದೇವರ ಆಶೀರ್ವಾದ ಸಿಗುತ್ತದೆ.

ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಸ್ಥಾಪಿಸಲು ಆರಂಭಿಸಿದ್ದಾರೆ

 ಕಾಲನ ಜಗತ್ತು ದುಃಖದಿಂದ ತುಂಬಿವೆ. ಇಲ್ಲಿ ಯಾವ ಪ್ರಾಣಿಯೂ ಸುಖವಾಗಿಲ್ಲ. ಎಲ್ಲಾ ಕಡೆ ಅರಾಜಕತೆ ಇದೆ. ಜನರು ಚಿಕ್ಕಪುಟ್ಟ ಮಾತಿಗೂ ಜಗಳ ಕದನ ಮಾಡಲು ಸಿದ್ಧರಾಗಿರುತ್ತಾರೆ. ಮಹಾನ್ ಸಮಾಜ ಸುಧಾರಕ ಸಂತ ರಾಮ್‌ಪಾಲ್ ಮಹಾರಾಜರು ತಮ್ಮ ಸತ್ಸಂಗಗಳ ಮೂಲಕ ಜಗತ್ತಿನಾದ್ಯಂತ ಶಾಂತಿ ಮತ್ತು ಸಹೋದರತ್ವದ ಸಂದೇಶ ಹರಡಿಸುತ್ತಿದ್ದಾರೆ ಮತ್ತೂ ಒಂದು ಬಲಿಷ್ಠ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ.

ಸಾಮಾಜಿಕ ಕೆಟ್ಟತನಗಳನ್ನು ದೂರ ಮಾಡಿ ಸ್ವಚ್ಛ ಸಮಾಜದ ನಿರ್ಮಾಣ

 ವರದಕ್ಷಿಣೆ, ಲಂಚಗುಳಿತನ, ಭ್ರಷ್ಟಾಚಾರ, ಮಾದಕ ದ್ರವ್ಯಗಳ ಸೇವನೆ, ವ್ಯಭಿಚಾರ ಮುಂತಾದ ಹಲವಾರು ಸಾಮಾಜಿಕ ಕೆಟ್ಟತನಗಳು ಸಮಾಜದಲ್ಲಿ ವ್ಯಾಪಕವಾಗಿವೆ. ಅಜ್ಞಾನದಿಂದ ಜನರು ಈ ಎಲ್ಲಾ ಕೆಟ್ಟ ಕೆಲಸ ಮಾಡುತ್ತಾರೆ. ಮಹಾನ್ ಸಮಾಜ ಸುಧಾರಕ ಸಂತ ರಾಮ್‌ಪಾಲ್ ಮಹಾರಾಜರು ಸತ್ಯ ಆಧ್ಯಾತ್ಮಿಕ ಜ್ಞಾನ ಪ್ರದಾನಿಸಿ ಜನರಲ್ಲಿ ಉಚ್ಛ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ನೆಲೆಗೊಳಿಸುತ್ತಿದ್ದಾರೆ. ಇದರ ಜೊತೆಗೆ ಎಲ್ಲಾ ಸಾಮಾಜಿಕ ಕೆಟ್ಟತನಗಳನ್ನು ಕಿತ್ತು ಹಾಕಲಾಗುತ್ತಿದೆ. ಅವರ ಶಿಷ್ಯರು ಎಲ್ಲಾ ಕೆಟ್ಟತನಗಳಿಂದ ದೂರವಿದ್ದು ಜೀವನ ನಡೆಸುತ್ತಿದ್ದಾರೆ. ಇಡೀ ಜಗತ್ತು ಎಲ್ಲಾ ಸಾಮಾಜಿಕ ಕೆಟ್ಟತನಗಳನ್ನು ಬಿಟ್ಟು ಒಂದು ಸರಳ ಮತ್ತು ಸುಖ ಜೀವನವನ್ನು ನಡೆಸುವುದು ಅವರ ಉದ್ದೇಶ. ವಿಶ್ವದಾದ್ಯಂತ ಈ ಮಹಾನ್ ಪರಿವರ್ತನೆ ಸತ್ಯ ಆಧ್ಯಾತ್ಮಿಕ ಜ್ಞಾನದ ಪ್ರಸಾರದಿಂದ ಸಂಭವವಾಗುತ್ತಿದೆ. ಇದು ಮಹಾನ್ ತತ್ವದರ್ಶಿ ಸಂತ ರಾಮ್‌ಪಾಲ್ ಮಹಾರಾಜರ ಸಾನಿಧ್ಯದಲ್ಲಿ ಪೂರ್ಣವಾಗುತ್ತಿದೆ.

ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯುವುದು

 ಸಮಾಜದಲ್ಲಿ ಭ್ರಷ್ಟಾಚಾರದ ಬೇರು ಬಹಳ ಆಳವಾಗಿ ಬೇರೂರಿದೆ. ಇದು ಒಂದು ಗೆದ್ದಲು ಹುಳುವಿನ ಹಾಗೆ ಹರಡಿದೆ. ಅದು ಸಮಾಜವನ್ನು ನಿಧಾನವಾಗಿ ಟೊಳ್ಳು ಮಾಡಿ ಹಾಳು ಮಾಡುತ್ತಿದೆ. ಹತ್ಯೆ, ಕಳ್ಳತನ, ಲಂಚ, ಕಲಬೆರಕೆ, ಬೇರೆಯವರ ಹಕ್ಕನ್ನು ಕಿತ್ತುಕೊಳ್ಳುವುದು, ಮುಂತಾದ ಕೆಟ್ಟತನಗಳು ಅಜ್ಞಾನದಿಂದ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಹೆಚ್ಚುವಂತೆ ರಾಜಕೀಯ ಮಾಡುವವರು, ಬಾಲೀವುಡ್ ನ ಕೈವಾಡ ಬಹಳ ಇದೆ. ಮಹಾನ್ ಸಮಾಜ ಸುಧಾರಕ ಸಂತ ರಾಮ್‌ಪಾಲ್ ಮಹಾರಾಜ ರವರ ಶಿಷ್ಯರು ಸಿನೆಮಾ ನೋಡುವುದಿಲ್ಲ, ಸಂಗೀತ ಬಾರಿಸುವುದಿಲ್ಲ, ನೃತ್ಯ ಮಾಡುವುದಿಲ್ಲ, ರಾಜಕೀಯ ಪ್ರವೇಶಿಸುವುದಿಲ್ಲ. ಅವರು ಉಚ್ಛ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳ ಜೊತೆ ಒಂದು ಸಾಧಾರಣ ಜೀವನ ನಡೆಸುತ್ತಾರೆ ಮತ್ತು ಎಲ್ಲಾ ರೀತಿಯ ಭ್ರಷ್ಟಾಚಾರದಿಂದ ದೂರವಿರುತ್ತಾರೆ.

ಸಮಾಜದಿಂದ ಪಾಖಂಡವನ್ನು ಕೊನೆಗೊಳಿಸುವುದು

ಮಹಾನ್ ಸಮಾಜ ಸುಧಾರಕ ಸಂತ ರಾಮ್‌ಪಾಲ್ ಮಹಾರಾಜ ರವರ ಶಿಷ್ಯರು ವಿನಮ್ರರು ಮತ್ತು ಉದಾರಿಗಳು. ಅವರು ಶುದ್ಧ ಮನಸ್ಸಿನವರು. ಅವರು ಯಾರಿಗೂ ಮೋಸ ಮಾಡುವುದಿಲ್ಲ. ಏಕೆಂದರೆ ಅಂಥಾ ಕೆಲಸ ದೇವರಿಗೆ ಇಷ್ಟವಾಗುವುದಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಅವರ ಏಕೈಕ ಉದ್ದೇಶ ಪರಮಾತ್ಮನನ್ನು ಪಡೆಯುವುದು. ಸಂತರ ಎಲ್ಲಾ ಶಿಷ್ಯರು ಎಲ್ಲಾ ರೀತಿಯ ಪಾಖಂಡದಿಂದ ದೂರವಿರುತ್ತಾರೆ, ಅದು ಧಾರ್ಮಿಕವಾದರೂ ಸರಿ, ಸಾಮಾಜಿಕವಾದರೂ ಸರಿ. ಅವರೆಲ್ಲಾ ಪವಿತ್ರ ಶಾಸ್ತ್ರಗಳಲ್ಲಿ ಹೇಳಲಾಗಿರುವ ವಿಧಾನಕ್ಕೆ ಅನುಸಾರವಾಗಿ ಪೂಜೆ ಮಾಡುತ್ತಾರೆ ಮತ್ತು ಪೂಜೆಗೆ ನಿರ್ಧರಿಸಲ್ಪಟ್ಟ ನಿಯಮಗಳನ್ನು ಧಾರ್ಮಿಕ ರೂಪದಿಂದ ಪಾಲಿಸುತ್ತಾರೆ. ಇದು ಸತ್ಯ ಆಧ್ಯಾತ್ಮಿಕ ಜ್ಞಾನದ ಪರಿಣಾಮವಾಗಿದೆ. ಇದನ್ನು ಸಂತ ರಾಮ್‌ಪಾಲ್ ಮಹಾರಾಜರ ಮೂಲಕ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಪಸರಿಸಲಾಗುತ್ತಿದೆ.

ನಿಷ್ಕರ್ಷೆ

“ಅಚ್ಛೇ ದಿನ್ ಪಾಛೇ ಗಏ,

ಸತ್‌ಗುರು ಸೇ ಕಿಯಾ ನ ಹೇತ್|

ಅಬ್ ಪಛ್‌ತಾವಾ ಕ್ಯಾ ಕರೇ,

ಜಬ್ ಚಿಡಿಯಾ ಚುಗ್ ಗಈ ಖೇತ್”||

ಓದುಗರಲ್ಲಿ ಒಂದು ಕಳಕಳಿಯ ಮನವಿ. ಪ್ರಪಂಚದ ಉದ್ಧಾರ ಕರ್ತೃ ಸಂತ ರಾಮ್‌ಪಾಲ್ ಮಹಾರಾಜರನ್ನು ಗುರುತಿಸಿ. ಇಲ್ಲದಿದ್ದರೆ ಮುಂದೆ ಪಶ್ಚಾತ್ತಾಪ ಪಡುವುದನ್ನು ಬಿಟ್ಟು ಬೇರೇನೂ ಉಳಿದಿರುವುದಿಲ್ಲ. 

ಸಂತ ರಾಮ್‌ಪಾಲ್ ಮಹಾರಾಜರು ಹೇಳುತ್ತಾರೆ;

“ಜೀವವೇ ನಮ್ಮ ಜಾತಿ,

ಮಾನವ ಧರ್ಮ ನಮ್ಮದು |

ಹಿಂದೂ ಮುಸ್ಲಿಂ ಸಿಖ್ ಇಸಾಈ,

ಯಾವ ಧರ್ಮವೂ ಬೇರೆ ಅಲ್ಲ ||

ವಿಶ್ವ ವಿಜೇತ ಸಂತ ರಾಮ್‌ಪಾಲ್ ಮಹಾರಾಜರು ಭಗವಾನ್ ಕಬೀರ್ ಸಾಹೇಬರ ಅವತಾರವಾಗಿದ್ದಾರೆ ಮತ್ತು ಅಜ್ಞಾನವನ್ನು ದೂರ ಮಾಡಲು ಮತ್ತು ಕಸಾಯಿಯಂತಹ ಕಾಲನ ಜಾಲದಲ್ಲಿ ಸಿಲುಕಿರುವ ತನ್ನ ಪ್ರಿಯ ಆತ್ಮಗಳನ್ನು ಮುಕ್ತಗೊಳಿಸಲು ಮತ್ತು ಎಲ್ಲಾ ಕಡೆ ಹರಡಿರುವ ಅಧರ್ಮದ ನಾಶ ಮಾಡಲು ಅವತಾರ ಎತ್ತಿದ್ದಾರೆ. ನೀವೆಲ್ಲಾ ಅವರಿಗೆ ಶರಣಾಗಿ ಮತ್ತು ನಿಮ್ಮ ಮಾನವ ಜ್ಞಾನವನ್ನು ಶ್ರೇಷ್ಠವನ್ನಾಗಿಸಿಕೊಂಡು ಮೋಕ್ಷ ಪಡೆಯಿರಿ. ಪರಮಾತ್ಮನನ್ನು ಪಡೆಯಿರಿ.

Latest articles

International Labour Day 2024: Know the Events That Led to the Formulation of International Labour Day

Last Updated on 1 May 2024 IST | International Labour Day 2024: Several nations...

International Labour Day Hindi [2024] | कैसे हुई अंतर्राष्ट्रीय मजदूर दिवस की शुरुआत, क्या है इसका महत्व?

Last Updated on 1 May 2024 IST | अंतर्राष्ट्रीय मजदूर दिवस (International Labour Day...

AstraZeneca Admits Covishield Linked to Rare Blood Clotting Disorder

In a startling disclosure, AstraZeneca has admitted that its COVID vaccine, Covishield, might lead...
spot_img

More like this